Monday, September 28, 2020

* ಬರವು ವರ *

ಬರವು ಬಂದರೆ ಬರಲಿ ವರಗಲ್ಲಿಗೆ 

ಹಚ್ಚಬಹುದು ಬಂಗಾರ ಸಿಗುವವರೆಗೆ   

ಬರವು ವರವಾದೀತು ಬಂಧುತ್ವಕ್ಕೆ//


ವರುಣನಿಲ್ಲದ ಧರಣಿ ಲಜ್ಜೆಯಿಲ್ಲದ 

ತರುಣಿಯಂತೆ ದಿಕ್ಕೆಟ್ಟು ತಿರುಗುವುದು 

ಶರಣಾಗುವುದು ಕೃಪೆಗಾಗಿ ಜೀವಜಲ//


ಆಹಾರವಿಲ್ಲದೆ ಗಿರಿಗಿರಣೆ ತಿರುಗುವವು 

ಸೀಳುಬಿದ್ದ ನೆಲದಲ್ಲಿ ಪ್ರಾಣಿ  ಪಶುಪಕ್ಷಿ  

ನಿನ್ನ ಕರುಣೆ ಹಬ್ಬಮಾಡಿತು ಬಕಪಕ್ಷಿ//


ದೊಂಬರಾಟವ ಮಾಡಿ ದಮ್ಮಡಿಗೆ

ತಿರುಗಿದಾಗ ಹಿಂದಡಿಯಿಟ್ಟ ಜನರಂತೆ

ಪಲಾಯನ ಮಾಡುವರು ನಿನ್ನವರು//


ಹರಿದ ನೋಟನು ಹಚ್ಚಿ ಪೆಂಡಯ 

ಸೇರಿಸಿ ಹೊರಗೆ ಹಾಕಿದ ಹಾಗೆ, ಸಾಗ 

ಹಾಕುವರು ನೀನ್ನವರು ಹಾಕಿ ಹೊಗೆ//


ಹುಳುಕು ಹಲ್ಲಿಗೆ ನಾಲಿಗೆ ಮತ್ತೆ ಮತ್ತೆ 

ಸರಿದಂತೆ ತಿರುಗುವರು ನೀನ್ನವರು

ನೀ ಕೃಪೆ ತೋರಿದ ಸಂಪತ್ತಿನ ಮೇಲೆ// 

           ಬಸನಗೌಡ ಗೌಡರ 


No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...