ಬರವು ಬಂದರೆ ಬರಲಿ ವರಗಲ್ಲಿಗೆ
ಹಚ್ಚಬಹುದು ಬಂಗಾರ ಸಿಗುವವರೆಗೆ
ಬರವು ವರವಾದೀತು ಬಂಧುತ್ವಕ್ಕೆ//
ವರುಣನಿಲ್ಲದ ಧರಣಿ ಲಜ್ಜೆಯಿಲ್ಲದ
ತರುಣಿಯಂತೆ ದಿಕ್ಕೆಟ್ಟು ತಿರುಗುವುದು
ಶರಣಾಗುವುದು ಕೃಪೆಗಾಗಿ ಜೀವಜಲ//
ಆಹಾರವಿಲ್ಲದೆ ಗಿರಿಗಿರಣೆ ತಿರುಗುವವು
ಸೀಳುಬಿದ್ದ ನೆಲದಲ್ಲಿ ಪ್ರಾಣಿ ಪಶುಪಕ್ಷಿ
ನಿನ್ನ ಕರುಣೆ ಹಬ್ಬಮಾಡಿತು ಬಕಪಕ್ಷಿ//
ದೊಂಬರಾಟವ ಮಾಡಿ ದಮ್ಮಡಿಗೆ
ತಿರುಗಿದಾಗ ಹಿಂದಡಿಯಿಟ್ಟ ಜನರಂತೆ
ಪಲಾಯನ ಮಾಡುವರು ನಿನ್ನವರು//
ಹರಿದ ನೋಟನು ಹಚ್ಚಿ ಪೆಂಡಯ
ಸೇರಿಸಿ ಹೊರಗೆ ಹಾಕಿದ ಹಾಗೆ, ಸಾಗ
ಹಾಕುವರು ನೀನ್ನವರು ಹಾಕಿ ಹೊಗೆ//
ಹುಳುಕು ಹಲ್ಲಿಗೆ ನಾಲಿಗೆ ಮತ್ತೆ ಮತ್ತೆ
ಸರಿದಂತೆ ತಿರುಗುವರು ನೀನ್ನವರು
ನೀ ಕೃಪೆ ತೋರಿದ ಸಂಪತ್ತಿನ ಮೇಲೆ//
ಬಸನಗೌಡ ಗೌಡರ
No comments:
Post a Comment