ಮಾನವ ಕುಲ ಮೊದಲು ಎರಡು ಕಾಲು ಬಳಸಿ ಯಾವಾಗ ನಡೆಯಲು ಪ್ರಾರಂಭಿಸಿತು ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲವಾದರೂ ಅದು ಹಲವಾರು ಏಳು ಬೀಳುಗಳನ್ನು ಕಂಡೆ ನೇರ ನಡಿಗೆಯನ್ನು ಕಂಡಿದೆ. ಇಲ್ಲಿಯವರೆಗೆ ನಾನು ಮಾನವನ ನಡಿಗೆ ಬಗ್ಗೆ ಏಕೆ ಹೇಳಿದೆ ಎಂದರೆ ಒಂದು ಪ್ರಬಲವಾದ ಕಾರಣವಿದೆ ಅದೇನೆಂದರೆ ನನ್ನ ಮೊಮ್ಮಗನ ಮೊದಲ ನಡಿಗೆಯ ಕಸರತ್ತು. ಈಗ ಆತನಿಗೆ ಒಂದು ವರ್ಷ ಈಗಾಗಲೆ ಆತ ಹಲವಾರು ಸಲ ಎದ್ದು ಬಿದ್ದಿದ್ದಾನೆ ತಲೆಗಾದ ಗುಮ್ಮಟಿಗಳಿಗೇನು ಕೊರತೆಯಿಲ್ಲ ಆದರೂ ಛಲಬಿಡದೆ ನಡದೆ ಬಿಟ್ಟ.ಸೋತರೂ ಬಿಡದೆ ಮತ್ತೆ ಮತ್ತೆ ಚುನಾವಣೆಗೆ ನಿಲ್ಲುವ ರಾಜಕಾರಣಿಯಂತೆ ಮತ್ತೆ ಪ್ರಯತ್ನ ಮಾಡಿದ. ಅಂತೂ ಗೆದ್ದ ರಾಜಕಾರಣಿಯಂತೆ ಬೀಗಿ ಮುನ್ನೆಡದ ಪರಿ ಮನಮೋಹಕವಾಗಿತ್ತು. ಮಗು ಮನುಷ್ಯನ ತಂದೆ ಎಂದು ತಿಳಿದವರು ಹೇಳುತ್ತಾರೆ ಅದು ನೂರಕ್ಕೆ ನೂರು ಸತ್ಯ. ಒಮ್ಮೆ ಸೋತರೆ ಕೈಚಲ್ಲುವ ಜನರಿಗೆ ಇದು ಪಾಠವು ಹೌದು, ಸೋಲು ಗೆಲುವಿನ ಸೋಪಾನ ಎಂದು ಹೇಳುತ್ತಿರುವುದು .ಒಂದು ಕಡೆ ಡಿ.ವ್ಹಿ ಜಿ ಯವರು ಹೇಳುವುದು ಇದನ್ನೆ ಅಲ್ಲವೆ " ಮರಳಿ ಮರಳಿ ಯತ್ನವ ಮಾಡು" ಎಂದು .ಗೆದ್ದಾಗಿನ ಕುಸಿಗಿಂತ ಹಿರಿದಾದದ್ದು ಇನ್ನೊಂದಿಲ್ಲ.ಸೋಲದೆ ಗೆದ್ದಾಗಿನ ಕುಸಿಗಿಂತ ಸೋತು ಗೆದ್ದಾಗಿನ ಖುಷಿ ಹೆಚ್ಚು ಆನಂದವನ್ನು ಕೊಡುತ್ತದೆ.ಅದು ಅನುಭವದ ಆಗರವು ಹೌದು.ಮೊಮ್ಮಗನ ನಡೆಗೆಯಲ್ಲಿ ನನ್ನ ಮುನ್ನಡೆಯು ಇದೆ ಅದು ನನ್ನ ಸಾಧನೆಯ ನಡೆಯು ಹೌದು ಮಗಳ ಮಗನಾದರೇನು ಮಗನ ಮಗನಾದರೇನು ಸಾಧನೆಯ ಕುಡಿಯಂತು ಹೌದು.ಈ ಮಾತು ಹೇಳಲು ಕಾರಣವಿದೆ ಅದೆನೆಂದರೆ .ಒಮ್ಮೆ ಸಹಪಾಠಿಯೊಬ್ಬರ ಹತ್ತಿರ ಮಾತನಾಡಿದ ಸನ್ನವೇಶವೊಂದನ್ನು ಹೇಳಲು ಬಯಸುತ್ತೇನೆ. ನಾನು ದೂರದ ಊರಿನಿಂದ ವರ್ಗವಾಗಿ ಬಂದಿದ್ದೆ ಕೆಲ ವರ್ಷಗಳ ನಂತರ ನನ್ನ ಪೇಸ್ಬುಕನಲ್ಲಿ ನನ್ನ ಮೊಮ್ಮಗನ ಫೋಟೊವನ್ನು ಅಪ್ ಲೋಡ ಮಾಡಿದೆ. ಆವಾಗ ಅವರು ಯಾರದು ಅಪ್ ಲೋಡ ಮಾಡಿದ ಮುದ್ದಾದ ಮಗುವಿನ ಫೋಟೊ ಎಂದು ಪ್ರಶ್ನಿಸಿದರು ಫೇಸ ಬುಕನಲ್ಲಿ. ಅದಕ್ಕೆ ನಾನು ಉತ್ತರಿಸಿದೆ "ಅದು ನನ್ನ ಮೊಮ್ಮಗನ ಫೋಟೊ" ಅಂದರೆ ಮಗಳ ಮಗ ಎಂದು . ಆಗ ಸಹೋದರಿ ಸಮನಾದ ಮೇಡಮ್ ಮಾರ್ಮಿಕವಾಗಿ ಉತ್ತರಿಸಿದರು .ಸರ್ ಅದು ನಿಮ್ಮ ಮೊಮ್ಮಗ ಅಲ್ಲ ನಮ್ಮ ಮೊಮ್ಮಗ ಎಂದು. ಕ್ಷಣ ವಿಚಲಿತನಾದರು ಸವಾರಿಸಿಕೊಂಡೆ ಸಂಪ್ರದಾಯ ಏನೆ ಇರಲಿ ನಮ್ಮ ಮನೆಯ ಆನಂದ ಇಮ್ಮಡಿಗೊಳಿಸಿದ ಮುತ್ತಿನಮಣಿಯಂತು ಹೌದು ಪ್ರತಿ ಮನೆಬೆಳಗಲು ಒಂದು ದೀಪವಂತು ಬೇಕೆ ಬೇಕು ಆ ಬೆಳಕಿಗೆ ಸಮಾನವಾದ ಬೆಳಕಂತು ಇಲ್ಲ .ಇದಕ್ಕಾಗಿಯೇ ನಮ್ಮಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತರುವ ಸಹೋದರಿಯರು ಹೇಳುವುದು ನಮ್ಮ ಮಗನಿಂದ ನಿಮ್ಮಮನೆ ಬೆಳಕಾಗಿದೆ ಎಂದು .
ಮನೆಗೊಂದು ಮಗು ಶಾಲೆಗೊಂದು ಮರ ಊರಿಗೊಂದು ವನ
No comments:
Post a Comment