Tuesday, October 20, 2020

* ಮಳೆ ಮಿಕ್ಕಿದಾಗ *

ಮಾತೊಂದು ಹೇಳಿದ್ದ ನಮ್ಮಪ್ಪ 
ನನಗೊಂದು,ಮನಸು ಅರಳಾಕ ...
ಮನೆ ಎತ್ತರ ಬೆಳೆಯಾಕ.. 
ಮಳೆಯಾದರ ಕೆಡಕಿಲ್ಲ 
ಮಗ ಉಂಡರ ಕೆಡಕಿಲ್ಲ.....!

ಮನೆಯು ಉರುಳಿತು 
ಮನಕೇರಿದ ಮತ್ತು ಇಳಿಯಿತು.  
ಕೆಡಕಾಗಿ ಹೋಯಿತಲ್ಲ, 
ಮನೆ ಮಠ ಮುಕ್ಕಾಗಿ ಹೋಯಿತಲ್ಲ ...
ಮಣ್ಣಾಗ ಮಣ್ಣಾಗಿ .....
ಮುಚ್ಚೆ ಹೋಯಿತಲ್ಲೋ  ..!

ಮರವು ಬೆಳೆದರ ಬರವು 
ಅಳಿಯಿತಂತ ವರುಣನ ಮರೆತು 
ಕೆರಿಯಾಗ ಬೆಳೆ ಬೆಳೆದವಲ್ಲ....
ಮರದೆತ್ತರ ಮನೆ ಕಟ್ಟಿ 
ಮೆಟ್ಟಿಲಿನ ಪುಟ್ಟಿಯಲೆ 
ಮರನೆಟ್ಟೆವಲ್ಲ...!

ಊರಾಗ ಗಟಾರ ಒತ್ತಿ..
ಹೊಲದಾಗ ಬದು ಒತ್ತಿ
ವಗ್ಗದ ಬೆಳೆಯಾದರು ಹಿಗ್ಗಿ ಹಿಗ್ಗಿ 
ಹೈಬ್ರೀಡ್ ಬೆಳೆದವಲ್ಲ..
ಮೇಲೆ ರಾಸಾಯನಿಕ ಗೊಬ್ಬರ,
ವಿಷ ಹಾಕಿ ಮಣ್ಣು ಕೊಂದೆವಲ್ಲೊ..!

ಮಗ ಬೆಳೆದು ಮಡದಿಗಾದ 
ಮಳೆ ಬಂದು ಮನೆಯುರಳಿ 
ಹೊಲವೆಲ್ಲ ಕಳೆಯಾತು..
ಬಾಳೆಲ್ಲ ತುಕ್ಕು ಹಿಡಯಿತಲ್ಲ
ಹೊಳೆಯುಕ್ಕಿ ಕೆಕೆ ಹಾಕಿತಲ್ಲ
ಮಳೆರಾಯ ಇನ್ನಾದರು 
ನಮ್ಮವರಿಗಾಗಿ ಸುರಿಯೋ..
 
ಬಸನಗೌಡ ಗೌಡರ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...