ಮೊಬೈಲ್ ಮೋಡಿಗೆ ಮರಳಾಗದವರು ಯಾರಿರುವರು ಹೇಳಿ ? ಮೂರರಿಂದ ನೂರು ವರುಷದ ವೃದ್ಧರವರೆಗೆ ..! ಗುದ್ದಾಡಿ ಒದ್ದಾಡಿ ಹೊಂದಬೇಕೆನ್ನುವವರೆ ...ಒಮ್ಮೆ ಮೊಮ್ಮಗನ ರಂಪಾಟ ಗುದ್ದಾಟ ಮೊಂಡಾಟ ಮನೆಯವರನ್ನೆಲ್ಲ ತನ್ನ ಹಿಡಿತಕ್ಕೆ ತರುವ ಅವನ ಸಾಹಸಕ್ಕೆ ಎಲ್ಲರೂ ಸೋತು ಸುಣ್ಣವಾದರು ನಾನಾ ತಂತ್ರಗಳನ್ನು ಹೆಣೆದು ಹಣ್ಣಾದರು.... ಇವನೇನು ಸಾಮಾನ್ಯನಲ್ಲ ಪಡೆದು ವಿಜಯಿಯಾದ, ಪ್ರಯತ್ನ ಪ್ರಾರಂಭಿಸಿದ... ಮಾತಾಡಲಿಲ್ಲ ಬದಲಾಗಿ ಮಾಡಿ ತೋರಿಸುವ ಆಸಾಮಿ... ಇದು ಅವರ ಅಪ್ಪ ಅಮ್ಮನ ಆಸೆಯನ್ನು ತಣಿಸಲು ಹೊರಟ ಪ್ರಯತ್ನ .ಇದೇನಪ್ಪ ಅವರಪ್ಪ ಅಮ್ಮನ ಆಸೆ ಎಂದಿರಾ ಎಲ್ಲರಿಗೂ ಗೊತ್ತೆ ಇದೆ ಅಲ್ಲಾರಿ ಮಗ ಎಮ್ ಬಿ ಬಿ ಎಸ್ ಮಾಡಬೇಕು ಡಾಕ್ಟರ ಆಗಬೇಕು.ಇಂದು ಪ್ರತಿ ಪಾಲಕರೂ ಮಗು ಗರ್ಭದಲ್ಲಿ ಇರುವಾಗಲೆ ಯೋಚನೆ (ದೂ ( ದು) ರಾಲೋಚನೆ) ಮಾಡುವುದು ಸಾಮಾನ್ಯವಾಗಿದೆ. ತಪ್ಪಿಲ್ಲ ಬಿಡಿ ಅದರ ಸಾಮರ್ಥ್ಯ ಆಸೆ ಆಕಾಂಕ್ಷೆಯ ಬಗ್ಗೆ ನಮಗೆ ಯೋಚಿಸಲು ಸಮಯವೆಲ್ಲಿದೆ ಹೇಳಿ.
ಮಗನ ಶಿಕ್ಷಣಕ್ಕಾಗಿ ಅವರ ಖರ್ಚಿಗೆ ಲೆಕ್ಕವೇ ಇಲ್ಲ ಮಗ ಮಾತ್ರ ಡಾಕ್ಟರ್ ಅಂತೂ ಆಗಬೇಕು ,ಇರಲಿ ಸಮಾಜಕ್ಕೆ ಡಾಕ್ಟರ ಗಳಾದರೂ ಎಷ್ಟು ಬೇಕು ಹತ್ತು ಸಾವಿರಕ್ಕೆ ಒಬ್ಬ ಆದರೆ ಹತ್ತು ಸಾವಿರ ಕುಟುಂಬಕ್ಕೂ ಮಗನೊಬ್ಬ ಡಾಕ್ಟರ್ ಬೇಕು ...ಇದನ್ನೇ ಬಂಡವಾಳ ಮಾಡಿಕೊಂಡ ಶಿಕ್ಷಣ ಸಂಸ್ಥೆಯವರು ಪಾಲಕರನ್ನು ಗೂಡಿಸಿ ಗುಡ್ಡೆ ಹಾಕಿಕೊಂಡಿರುವದು.ಇದು ನಮಗೆ ಯಾವಾಗ ಅರ್ಥವಾಗತ್ತೊ ಕಾಲವೆ ಉತ್ತರಿಸಬೇಕು ನಾನಂತೂ ಆಶಾವಾದಿಯಾಗಿದ್ದೇನೆ .ಇದೀಗ ಕರ್ನಾಟಕ ಹೆಬ್ಬಾಗಿಲು ಮಾಡಿಕೊಂಡು ಭಾರತವನ್ನು ವ್ಯಾಪಿಸಲು ಸಜ್ಜಾಗಿರುವ ಹೊಸ ಶಿಕ್ಷಣ ನೀತಿ 2020. ನಮ್ಮೆಲ್ಲರ ಆಶಾ ಕಿರಣದಂತೆ ಕಾಣುತ್ತಿದೆ ಬೇಗ ಕಾರ್ಯರೂಪಕ್ಕೆ ಬರಲಿ ಎನ್ನವುದು ನಮ್ಮೆಲ್ಲರ ಆಶೆ. ಕಾರಣ ಮಗುವಿಗಷ್ಟವಾದ ವ್ಯಕ್ತಿತ್ವ ರೂಪಿಸಿಕೊಳ್ಳಲು ಇರುವ ಅವಕಾಶ.ಇನ್ನು ಮೊಮ್ಮಗನ ವಿಷಯಕ್ಕೆ ಬರುತ್ತೇನೆ, ಮೊಬೈಲ್ ಸಿಕ್ಕಾಗ ಅವನಿಗಾದ ಸಂತೋಷಕ್ಕೆ ಪಾರವೆ ಇಲ್ಲ ಆತ ತನ್ನ ಪ್ರಯೋಗ ಪ್ರಾರಂಭ ಮಾಡಿಯೆ ಬಿಟ್ಪ ತರಬೇತಿ ವೈದ್ಯ ಹೆಣ ಕೊಯ್ದು ಅಂಗಾಂಗಗಳನ್ನು ಪರೀಕ್ಷೆಯನ್ನು ಮಾಡಿದಂತೆ ಮೊಬೈಲ್ ಪಾರ್ಟಗಳನ್ನು ಕಿತ್ತು ಪರೀಕ್ಷೆ ಮಾಡಿದ್ದೆ ಮಾಡಿದ್ದು ಅದರಲ್ಲಿ ಆತ ಏನು ಕಲಿತನೋ ಆ ದೇವರೇ ಬಲ್ಲ ತರಬೇತಿಯಂತು ಯಶಸ್ವಿಯಾಯಿತು ಮೊಮ್ಮಗ ಯುದ್ದ ಗೆದ್ದ ಸೈನಿಕರಂತೆ ಹೊರ ಬಂದ, ನಾವು ಸೋತ ಶರಣಾದ ಕೈದಿಗಳಂತೆ ನಾವು ನಿಂತೆವು ವಿಜಯಿ ಸೈನ್ಯದ ಮುಂದೆ ,ಆದರೆ ಅವರಮ್ಮನ ಕಿಲಾಡಿ ತಂತ್ರ ಯಶಸ್ವಿಯಾಗಿತ್ತು, ಬಳಸದೆಯೇ ಬಿದ್ದ ಒಂದನ್ನು ನೀಡಿ ಯುದ್ದ ವಿರಾಮಕ್ಕೆ ಕಾರಣಳಾದಳು ಮತ್ತು ಒಂದು ಅಮೂಲ್ಯವಾದ ಸಲಹೆ ನೀಡಿ ಮನೆಯವರೆಲ್ಲರ ಮೇಲೆ ಯಜಮಾನಿಕೆ ಮೆರೆದಳು,ಅದೇನು ಅಂತೀರಾ ಮೊಬೈಲ್ ನಲ್ಲಿ ಹುಳ ಆರಿಸಿದಂತೆ ಆರಿಸುವುದನ್ನು ಕಡಿಮೆ ಮಾಡಿ ಪುಸ್ತಕ ಹಿಡಿಯುವುದನ್ನು ರೂಢಿಸಿಕೊಳ್ಳುವುದನ್ನು ಕಲಿಯಿರಿ ಎನ್ನಬೇಕೆ ಎಲ್ಲರೂ ತಲೆ ತಗ್ಗಿಸಿ ಕೋನೆ ಸೇರುವುದೊಂದೆ ಬಾಕಿ
"ಮೊಬೈಲ್ ಹಿತ ಮಿತ ವಾಗಿರಲಿ ಎನ್ನವುದೆ ಕಳಕಳಿ"
No comments:
Post a Comment