ಅಖಾಡಕ್ಕೆ ಇಳಿಯುವಾಗ
ಎದುರಾಳಿಯ ಆಳದ ಅರಿವಿರಬೇಕು
ಅಂದಾಗ ಚಡ್ಡಿ ಹಾಕಬೇಕು/
ಇಲ್ಲಾಂದರ ಚಿತ್ತ ಮೇಲಾಗಿ
ಮುಖ ಮಣ್ಣಿನ ಕಡೆ ಮಲಗಬೇಕು //
ಉಪದೇಶ ಮಾಡುವಾಗ
ನೈತಿಕವಾಗಿ ಜೀವನ
ನಡೆಸಿರಬೇಕು/
ಇಲ್ಲಾಂದರ ಟೊಮೋಟೂ ತತ್ತಿ
ಒಗಿಸಿಕೊಳ್ಳಾಕ ತಯಾರಿರಬೇಕು//
ಕುಣಿಯುವಾಗ ನೆಲದಾಗ
ಸಮತಲ ನೋಡಿರಬೇಕು
ಜಗತ್ತು ವಿಶಾಲವಾಗಿರುವದಾದರ /
ಅದರಾಗ ತೆಗ್ಗು ದಿನ್ನೆ ನೋಡಾಕ
ರವಿಕಿರಣ ಬರಬೇಕು //
ಸಂಸಾರವಿರುವದು ಸಹಕಾರದಾಗ
ತಯಾರಿರಬೇಕು ತಂದ ಹಾಕಾಕ
ಹೆಂಡಿರು ಮಕ್ಕಳು ಗುಲಾಮರಲ್ಲ /
ಬಿಡುವಿದ್ದಾಗ ಮಜಾ ಮಾಡಾಕ
ಇಲ್ಲಾಂದರ ತಯಾರಿರು ಸನ್ಯಾಸಿಯಾಗಾಕ//
ತಂದೆ ತಾಯಿ ಭೂಮಿಮ್ಯಾಗ
ದೇವರಂತ ಋಣ ತಿಳಿಬೇಕು
ತೀರಸಾಕ ಹಾತೊರೆಯುಬೇಕು/
ಇಲ್ಲಾಂದರ ದೇವರ ಫೋಟೋ
ಪೂಜಿಸದೆ ಬೀಸಾಕಿ ಬರಬೇಕು//
ಹಿಂದೆ ನೋಡಬೇಕು ಓಡುವಾಗ
ಕ್ರಮಿಸುವ ದಾರಿ ತಿಳಿಯಾಕ
ಪ್ರಯತ್ನ ದಿಂದ ಪರಿಪೂರ್ಣತೆ /
ನಿಂದಕರಿದ್ದರ ಹೆದರುದ್ಯಾಕ
ಹಂದಿಗಳ ಸ್ವಚ್ಛತೆಯಂಗ ತಿಳಿಬೇಕು//
ಬಸನಗೌಡ ಗೌಡರ
No comments:
Post a Comment