ಹಸಿದ ಒಡಲಿಗೆ ಬಿಸಿದು ತಂಗಳು
ಭೇಧ ಹೊಸೆವರೇನು ಭಾಷೆಗಳಲಿ,
ಹೊಟ್ಟೆಯೇ ಹೊರೆ, ತುಂಬಿದಾಗ
ಬಟ್ಟೆಯ ಬಡಿವಾರ ಬರುವುದಾಗ //
ತುತ್ತು ಅನ್ನದ ತತ್ವಾರ ಕಡು ಬಡತನಕೆ
ಮತ್ತೇರುವುದು ದುಡಿಯದ ಸಿರಿತನಕೆ
ದುಡಿದು ಪಡೆ ದರಿದ್ರನಲ್ಲ ಕೊನೆತನಕ
ಬಿಡಬೇಡ ಅನ್ನ, ಹಸಿದವರಿರುವತನಕ //
ಮದುವೆಯು ಮನ ಕಟ್ಟುವ ಕಾರ್ಯ
ಉದಯವಾಗಬೇಕಲ್ಲಿ ದಿಟ್ಟ ಸೂರ್ಯ
ಬೆಳಕು ಹೊರಚಾಚಲು ಬೇಕು ದೈರ್ಯ
ಸಾಗುತಿದೆ ಥಳಕು ಬಳಕಿನ ಕೈಂಕರ್ಯ//
ಮೌನದಿಂದುತ್ತರಿಸಿದ ಸಂಬಂಧ ತತ್ತರ
ಬಿರುಗಾಳಿಗೆದುರಾಗಿ ಬೀಸಲಿ ತಂಗಾಳಿ
ಬಿಡದೆ ಬೀಸುವ ಬಿಗುಮಾನದ ಗಾಳಿ
ಒಡೆದು ಹಾಕುವುದು ಸಂಸಾರದ ಹಳಿ//
ಮಸಣಕೆ ಹೋಗುವ ಮುನ್ನ ಕಸಕೀಳು
ಹಸನಾದ ಹೊಲದಲಿದೆ ಪ್ರಸಾದ ಬೆಳೆ
ಅನ್ನದ ಬೆಲೆಯರಿತವನುಂಡರೆ ತೃಪ್ತ
ಅರಿಯದುಳಿಸಿದರೆ ಸಿಗುವುದೆ ತೃಪ್ತಿ? //
No comments:
Post a Comment