ಕೊರೋನಾಕಿಂತ ಕರಾಳ ಕಾಯಿಸುವ
ರೋಗ, ಕಾಡುತ ಹರಡಿದೆ ಜಗದೊಳಗ/
ಕಾದು ಜನ ಸುಸ್ತು ಅಧಿಕಾರ ಬಲದಾಗ
ಸಹನ ತಲೆ ಕೆರೆಯಿತು ಬಾಗಿಲುದಾಗ//
ಹರಿದು ತಿನ್ನಲು ತಿರುಗುವವು ಬಕಪಕ್ಷಿ
ಇವುಗಳ ಕೊಲ್ಲಬೇಕು ಸ್ವಾತಂತ್ರ್ಯ ಹಕ್ಕಿ/
ಆದರೇನು ಕಣ್ಣಿಗೆ ಕಟ್ಟಿರುವರಲ್ಲ ಪಟ್ಟಿ
ನಿಧಾನಿಸಿ ಇಡುವರು ಸುಳ್ಳಿನ ಬುಟ್ಟಿ//
ಮಜಾ ತೆಗೆಯುವ ಹುಡುಗಿಯರಂತೆ
ಇವರೇನು ಕಡಿಮೆ, ಬಿಡುವರು ಬುರಡೆ/
ನಂಬಿದವ ಆದ ಇಂಗು ತಿಂದ ಮಂಗ
ಜಾರುವ ಮುನ್ನ ಬಿಡಬೇಕಿವರ ಸಂಘ//
ಕಾಸಿಗಾಗಿ ಬೀಸುವರು ಸುಳ್ಳಿನ ರಾಶಿ,
ಕನಸು ಕಾಣುವನಾದ ನಂಬಿ ಪಿಕನಾಶಿ
ಮೋಸ ಹೋಗಿ ಬಿಡಲಾರದವರು ಹೇಸಿ
ಮತ್ತೆ ಪಡೆಯಲು ಮಾಡತಾರ ಚೌಕಶಿ//
ಬಸನಗೌಡ ಗೌಡರ
No comments:
Post a Comment