ಅಷ್ಟೇನು ದೊಡ್ಡದು ಅಲ್ಲದ ಸಣ್ಣದು ಅಲ್ಲದ ಮಧ್ಯಮ ಗಾತ್ರದ ಹಳ್ಳಿ ಅದುವೆ ಹಾರದಹಳ್ಳಿ ಆ ಊರಿನಲ್ಲಿ ಒಂದು ಪ್ರೌಢ ಶಾಲೆಯಲ್ಲಿ 100 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಓದುತ್ತಿದ್ದರಿಂದ ಕನಿಷ್ಠ 80 ವಿದ್ಯಾರ್ಥಿಗಳಾದರೂ ಪ್ರತಿ ವರ್ಷ ಪಾಸಾಗಿ ಪಿ ಯು ಸಿ ಕಲಿಯಲು ಬೇರೆ ಊರಿಗೆ ಅಥವಾ ನಗರಕ್ಕೆ ಹೋಗುತ್ತಿದ್ದರು.ಕೆಲವು ಪಾಲಕರು ಹೆಣ್ಣು ಮಕ್ಕಳನ್ನು ಬೇರೆ ಊರಿಗೆ ಕಲಿಯಲು ಕಳುಹಿಸಿದರೆ ಲವ್ ಗಿವ್ ಅಂತ ಹಾದಿ ತಪ್ಪಬಹುದು ಎಂದು ಶಾಲೆ ಬಿಡಿಸಿದ್ದು ಇದೆ. ಇಲ್ಲವೆ ಮದುವೆ ಮಾಡಿ ಸಂಸಾರದ ನೊಗಕ್ಕೆ ಹೆಗಲು ಹಚ್ಚಿಸಿದ್ದು ಉಂಟು. ಇದನ್ನು ಗಮನಿಸಿದ ಊರಿನ ಪ್ರಮುಖರೆಲ್ಲ ಸೇರಿ ತಮ್ಮ ಊರಿಗೆ ಪದವಿ ಪೂರ್ವ ಕಾಲೇಜು ತರಲೆಬೇಕೆಂದು ಶಾಸಕರು, ಮಂತ್ರಿಗಳು ಅಂತ ಪ್ರಯತ್ನ ಮಾಡಿದರು ಫಲಶ್ರುತಿಯಾಗಿ ಸರಕಾರ ಊರಿನವರ ಬೇಡಿಕೆ ಮನ್ನಿಸಿ ಸರಕಾರಿ ಪದವಿ ಪೂರ್ವ ಕಾಲೇಜು ಮಂಜೂರು ಮಾಡಿತು.ಆದರೆ ಹುಡುಗರು ಮಾತ್ರ ಈ ಕಾಲೇಜಿನಲ್ಲಿ ವಿಜ್ಞಾನ ಇಲ್ಲ,ಡಿಪ್ಲೊಮಾ ಇಲ್ಲ ವಾಣಿಜ್ಯಇಲ್ಲ ಅಂತ ಶಹರದ ಕಡೆ ಮುಖ ಮಾಡಿದರು ಆದರೆ ಕಲಾ ವಿಭಾಗದಲ್ಲಿ ನಾಲ್ಕೈದು ಹುಡುಗರನ್ನು ಬಿಟ್ಟರೆ ಎಲ್ಲರೂ ಹೆಣ್ಣು ಹುಡುಗಿಯರು ಪ್ರವೇಶ ಪಡೆದರು.ಆರಂಭದಲ್ಲಿ ಎಲ್ಲಾ ವಿಷಯಗಳ ಉಪನ್ಯಾಸಕರು ಬರದಿದ್ದರು ಒಬ್ಬರು ಪ್ರಾಚಾರ್ಯರು ಮೂರು ಜನ ಉಪನ್ಯಾಸಕರು ಬಂದು ಕರ್ತವ್ಯ ಪ್ರಾರಂಭಿಸಿದರು. ಅದೆ ಊರಿನಲ್ಲಿ ರವಿ ಅಂತ ಒಬ್ಬ ಹುಡುಗ ಇದ್ದ ಆತನು ಬೇರೆ ಹುಡುಗರಂತೆ ಇರಲಿಲ್ಲ ಬದಲಾಗಿ, ಶಹರದ ಕಡೆ ಮುಖ ಮಾಡದೆ ನಮ್ಮೂರ ಕಾಲೇಜು ಶಾಶ್ವತವಾಗಿ ನಿಲ್ಲಬೇಕು ಹತ್ತಾರು ಬಡ ವಿದ್ಯಾರ್ಥಿಗಳಿಗೆ ಅದು ಸಹಾಯವಾಗುತ್ತದೆ ಎಂದು ಕಾಲೇಜು ಪ್ರವೇಶ ಬಯಸಿದ, ತಾನು ಮನಸ್ಸು ಮಾಡಿದ್ದರೆ ಬೇರೆ ಹುಡುಗರು ಶಹರದ ಕಡೆ ಮುಖ ಮಾಡಿದಂತೆ ಆತನೂ ಮಾಡಬಹುದಾಗಿತ್ತು ಏಕೆಂದರೆ ಆತ ಬಡವರ ಮಗನಲ್ಲ ಶ್ರೀಮಂತರ ಮಗನಾಗಿದ್ದ ಆದರೆ ಆತನ ಆದರ್ಶ ಕೆಲವು ವ್ಯಕ್ತಿಗಳಿಗೆ ಅರ್ಥವಾಗಿರಲಿಲ್ಲ ,ಆತ ಯಾವಗಲು ಪ್ರತಿಯೊಂದನ್ನು ಪ್ರಶ್ನೆ ಮಾಡುವುದು ,ಅಶಿಸ್ತು ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದ ಹೀಗಾಗಿ ಆತ ಜಗಳಗಂಟನಾಗಿಯೆ ಕಾಣುತ್ತಿದ್ದ ಇದು ಊರಿನವರಿಗಲ್ಲ ಅತ ಕಲಿತ ಪ್ರೌಢ ಶಾಲೆಯ ಶಿಕ್ಷಕರಿಗೂ ಅವನನ್ನು ಅರ್ಥ ಮಾಡಿಕೊಳ್ಳುವ ದಾಗಿರಲಿಲ್ಲ ಹೀಗಾಗಿ ಆತನನ್ನು ಒಬ್ಬ ಕೆಟ್ಟ ಹುಡುಗನನ್ನಾಗಿ ಬಿಂಬಿಸಲಾಗಿತ್ತು.
ಪ್ರೌಢಶಾಲೆ ಕಾಲೇಜು ಆಗಿ ಮೇಲ್ದರ್ಜೆಗೆ ಏರಿದಾಗ ಆ ಕಾಲೇಜಿಗೆ ವರ್ಗವಾಗಿ ಬಂದ ಕಾಲೇಜಿನ ಪ್ರಾಚಾರ್ಯರಿಗೆ ಹಾಗೂ ಉಪನ್ಯಾಸಕರಿಗೆ ಒಂದೆ ಚಿಂತೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಮಾಡಿದರೆ ಪಾಠ ಮಾಡಲು ತೃಪ್ತಿ ಎನ್ನುವುದು ಅವರ ಅಭಿಪ್ರಾಯ, ಹೀಗಾಗಿ ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಲು ಒತ್ತಾಯ ಮಾಡುತ್ತಿದ್ದರು.ಇದೆ ಸಂದರ್ಭ ದಲ್ಲಿ ಪ್ರೌಢ ಶಾಲೆ ಶಿಕ್ಷಕರು ಸಹ ರವಿಯನ್ನು ಪ್ರವೇಶ ಮಾಡಿಕೊಂಡರೆ ನಿಮ್ಮ ಕಾಲೇಜು ಮುಚ್ಚುವುದು ಖಚಿತವೆಂದು ಗೇಲಿ ಮಾಡುತ್ತಿದ್ದರು. ಇದಾವದನ್ನು ಗನನೆಗೆ ತೆಗೆದುಕೊಳ್ಳದೆ ಕಾಲೇಜಿನ ಪ್ರಾಚಾರ್ಯರು ವಿದ್ಯಾರ್ಥಿಗೆ ಪ್ರವೇಶ ನೀಡದರು.ರವಿ ಎಲ್ಲರಿಗಿಂತ ಮೊದಲೆ ಹಾಜರು ಬಹು ಚೂಟಿ ಹುಡುಗ ಪಾಠದಲ್ಲಿ ಮುಂದು ಆಟದಲ್ಲಿಯೂ ಮುಂದು ಇದ್ದ. ಅದೆ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ ಶಿವಪ್ಪ ಸರ್ ಕರ್ತವ್ಯಕ್ಕೆ ಹಾಜರಾಗಿದ್ದರು ಶಹರದಿಂದಲೆ ಹೋಗುವುದು ಬರುವುದು ಮಾಡುತ್ತಿದ್ದರು.ರವಿ ಬಗ್ಗೆ ಇನ್ನೂಬ್ಬರಿಂದ ಅರಿತಿದ್ದ ಶಿವಪ್ಪ ಸರ್ ಬೋಧನೆಯ ಮೂಲಕ ಕಲಿಸುವದಕ್ಕಿಂತ ಶಿಸ್ತಿನ ತನ್ನ ನಡತೆಯಿಂದ ಕಲಿಸಿದರು.ಇತಿಹಾಸದ ಘಟನೆಗಳ ಮೂಲಕ ರವಿಯ ವರ್ತನೆಯಲ್ಲಿ ಪರಿವರ್ತನೆ ತಂದರು. ಅವರು ಆತನಿಗೆ ಸರ್ವಸ್ವವೆ ಆಗಿದ್ದರು. ಆಟ ಪಾಠದಲ್ಲಿ ಮುಂದು ದೇಹವನ್ನು ತರಬೇತು ಗೊಳಸಿ ಹುರಿಕಟ್ಟಾದ ದೇಹವನ್ನು ಬೆಳೆಸಿದ ಕಾಲೇಜು ಪ್ರತಿಯೊಂದು ಕಾರ್ಯದಲ್ಲಿ ಈತನೆ ಮುಂದು.ಪ್ರಥಮ ಪಿಯುಸಿ ಮುಗಿಸಿದ ಮೇಲೆ ಮತ್ತೆ ಪ್ರಾಚಾರ್ಯರು ಮತ್ತು ಉಪನ್ಯಾಸಕರಗೆ ಅದೆ ಚಿಂತೆ ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಮಾಡಬೇಕು ಅದಕ್ಕಾಗಿ ವಿದ್ಯಾರ್ಥಿಗಳ ಪಾಲಕರಿಗೆ ದುಂಬಾಲು ಬೀಳುವ ಪರಿಸ್ಥಿತಿ ,ಅಂತಹ ಸಂದರ್ಭ ದಲ್ಲಿ ಒಬ್ಬ ಪಾಲಕನ ಮಾತು ಬಹು ಮಾರ್ಮಿಕವಾದದ್ದು ಅದೇನೆಂದರೆ "ನಿಮ್ಮ ಕಾಲೇಜಿನಲ್ಲಿ ಏನೇನು ವಿಷಯಗಳು ಇವೆ ಎಂದು ಕೇಳಿದ ಅದಕ್ಕೆ ಪ್ರಾಚಾರ್ಯರು ಕಲಾ ವಿಷಯವಿದೆ ಮತ್ತು ಅಲ್ಲಿರುವ ವಿಷಯಗಳ ಬಗ್ಗೆ ತಿಳಿಸಿದರು ಆಗ ಆ ಪಾಲಕ ಹೇಳಿದ ಮಾತೇನು ಅಂದರೆ "ಅದೆ ಅಲ್ಲವೇ ಆರ್ಟ್ಸ್ ಸರ್, ಆರ್ಟ್ಸ್ ಕಲಿತವರು ಆಡು ಕಾಯಲು ಹೋಗುವುದು" ಎನ್ನಬೇಕೆ.ಅಂತಹ ಸಂದರ್ಭದಲ್ಲಿ ರವಿ ಪ್ರಥಮ ದರ್ಜೆಯಲ್ಲಿ ಪಾಸಾದ ತನ್ನ ತಂಗಿಯನ್ನು ತಂದು ಮೊದಲು ಅಡ್ಮಿಶನಿ ಮಾಡಿಸಿದ, ಉದ್ದೇಶ ಇಷ್ಟೇ ಎಲ್ಲಾ ಎಸ್ಎಸ್ ಎಲ್ ಸಿ ಪಾಸಾದ ಮಕ್ಕಳು ಇಲ್ಲಿಯೇ ಅಡ್ಮಿಶನಿ ಮಾಡಿಸಲಿ ಎನ್ನುವುದು ಆತನ ಉದ್ದೇಶ.
ಸಪ್ಟೆಂಬರ್ ತಿಂಗಳು, ಅಂದು ಮುಗಿಲು ಹರಿದು ಭೂಮಿಗೆ ಬಂದಿದೆ ಎನ್ನುವ ಭಾವ ಧಾರಾಕಾರ ಮಳೆ, ಹೊಳೆ ಹಳ್ಳಗಳು ಮೈತುಂಬಿ ಹರಿದವು. ಬರಿ ಹರಿಯಲಿಲ್ಲ ಮಾನವನ ಬದುಕು ಬರಿದು ಮಾಡಿದ ದಿನ. ಹೊಲದ ಒಡ್ಡುಗಳು ಕಿತ್ತು ಹೋದವು ಬೆಳೆಗಳು ಕೊಚ್ಚಿ ಹೋಗಿ ರೈತನ ಜೀವನ ಸರ್ವನಾಶ ಮಾಡಿ ಬಿಟ್ಟಿತು.ಇದೆ ಅವಧಿಯಲ್ಲಿ ನಮ್ಮ ಶಿವಪ್ಪ ಉಪನ್ಯಾಸಕರು ಮಳೆಯ ಕಾರಣಕ್ಕೆ ಕಾಲೇಜುನಲ್ಲಿ ಉಳಿಯುವ ಸನ್ನಿವೇಶ ನಿರ್ಮಾಣವಾಯಿತು ಕಾರಣವೆಂದರೆ ಹೊಳೆ ರಸ್ತೆ ಸಂಚಾರ ನಿಲ್ಲುವಂತೆ ಮಾಡಿ ಜನಜೀವನ ಅಸ್ತವ್ಯಸ್ತ ವಾಗುವಂತೆ ಮಾಡಿತು.
ಎಲ್ಲಾ ವಿದ್ಯಾರ್ಥಿಗಳು ಉಪನ್ಯಾಸಕರ ಕುರಿತು ಕಾಳಜಿ ಪೂರ್ವಕ ನುಡಿಗಳನ್ನಾಡಿದರು ಅದು ಅವರ ಕರ್ತವ್ಯ ವೂ ಕೂಡಾ ಆಗಿತ್ತು. ರವಿ ಮಾತನಾಡಲಿಲ್ಲ ಬದಲಾಗಿ ಮಾಡಿ ತೋರಿಸುವ ಆಸಾಮಿ ಸರ್ ನೀವೇನು ಚಿಂತೆ ಮಾಡಬೇಡಿ ನಾವಿರುವಾಗ ಎಂದವನೆ ಸರಸರನೆ ಮನೆಗೆ ನಡೆದ. ಚಪಾತಿ ಪಲ್ಯ ಇನ್ನೊಂದು ತುಪ್ಪ ಸವರಿದ್ದ ಚಪಾತಿ ಅನ್ನ ಸಾಂಬಾರ್ ರೆಡಿ ಜೊತೆಗೆ ಹಾಸಿಗೆ ದಿಂಬು ರೆಡಿ.ಕಾಲೇಜು ಊರು ಬಿಟ್ಟು ದೂರವಿದೆ ಎಂದು ಭಾವಿಸಿ ಅದೆ ಊರಿನಲ್ಲಿ ಇರುವ ಮೆಟ್ರಕ್ ಪೂರ್ವ ಬಾಲಕರ ನಿಲಯದಲ್ಲಿ ಉಳಿದುಕೊಳ್ಳಲು ವ್ಯವಸ್ಥ ಮಾಡಿಯೆ ಜಾಗ ಖಾಲಿ ಮಾಡಿದ. ಹಾಗಾದರೆ ಯಾರು ಕೆಟ್ಟವರು ?
No comments:
Post a Comment