ಬದುಕೊಂದು ಬಯಸದೆ ಬಂದ ಭಾಗ್ಯ
ಬೆಸೆದು ಬೇಯಿಸಿ ಬೆಂದ ಕಾಳಂತೆ,
ಆಸ್ವಾದಿಸಿದರೆ ಬಹು ಚಂದ ಅಂದ
ಭ್ರಮನಿರಸನ ಹಾಕಬೇಕು ಕೊಂದು//
ಬಾಳ ನೌಕೆಗೆ ಗಾಳ ಹಿಡಿದು ಕಡಿದು
ಮೇಲೆ ರೇಖೆಗಳನ್ನು ಬರೆದು ಕೊರೆದು
ಬಣ್ಣದ ಚಿತ್ತಾರದ ಚಿತ್ರಗಳನ್ನು ತೆಗೆದು
ಸದ್ಭಾವದ ಭವನ ನಿರ್ಮಿಸಬೇಕಿಂದು//
ಹೊರಹೋಗದಂತೆ ತಿರುಗಣಿ ಎಳೆಸು
ಹೂಮಳೆ ಸುರಿಸಿ ಬಾಗಿಸಿ ಬದಲಿಸು
ಸರಸದ ಸಲ್ಲಾಪ ವಿರಸದ ಪರಿತಾಪ
ಹೊರಸೂಸುವವು ಸಂಗೀತಾಲಾಪ//
ಬದಕು ಬಿಟ್ಟವರೆಲ್ಲ ಸಿದ್ಧ ಬುದ್ದರೇನಲ್ಲ
ಬದುಕಿಗಾಗಿ ಕೊಂದ ಅಂಗುಲಿ ಇಲ್ಲಿಲ್ಲ
ವ್ಯಾದ ಬದಲಾಗಿ ಮಹರ್ಷಿಯಂತಲ್ಲ
ಓದಿ ಪಡೆ,ಸಿಗಲದು ಹಾದಿ ಕಲ್ಲಲ್ಲ//
ಬಂದಷ್ಟೆ ಬದುಕು, ಸಿಕ್ಕಷ್ಟೆ ಸ್ವೀಕರಿಸು
ಬಾರದನ್ನು ಬದಿಗಿರಿಸಿ ಬದಲಾಯಿಸು
ಬೆಟ್ಟದ ದಾರಿ ದಿಟ್ಟತನದಿಂದ ದಿಟ್ಟಿಸು
ಗಟ್ಟಿ ಗೊಂಡರೆ ಧರಣಿ ಪಟ್ಟ ಸಲೀಸು//
ಬಸನಗೌಡ ಗೌಡರ
No comments:
Post a Comment