ಅದೊಂದು ಅವಿಭಕ್ತ ಕುಟುಂಬ ಏಳೆಂಟು ಎಕರೆ ಜಮೀನು ಅನ್ನಕ್ಕೇನು ಕೊರತೆ ಇರಲಿಲ್ಲ ಹನಮಂತನಿಗೆ ಮೂರು ಜನ ಮಕ್ಕಳು ಮೊದಲನೆಯವನು ಮಲ್ಲಪ್ಪ ತಂದೆಯ ಕೃಷಿ ಕೆಲಸದಲ್ಲಿ ತೊಡಗಿದ ಹೀಗಾಗಿ ಅಕ್ಷರ ಜ್ಞಾನ ಪಡೆಯಲು ಸಾಧ್ಯವಾಗಲಿಲ್ಲ, ಆದರೇನಂತೆ ವ್ಯವಸಾಯದಲ್ಲಿ ಪರಿಣಿತ ಮನೆತುಂಬಾ ಕಾಳು ಕಡಿ ,ಊಟಕ್ಕೇನು ಕೊರತೆ ಇಲ್ಲ. ಇನ್ನು ಎರಡನೆಯ ಮಗ ಕಲ್ಲಪ್ಪ ನಾಲ್ಕು ಕ್ಲಾಸ್ ದಾಟುವಾಗಲೆ ಸುಸ್ತಾಗಿ ಶಿಕ್ಷಣಕ್ಕೆ ಗುಡ್ ಬಾಯಿ ಹೇಳಿದ. ಆದರೆ ಅಷ್ಟೇ ಭೂಮಿಯಲ್ಲಿ ಎಲ್ಲರೂ ಮಾಡುವದಾದರೊ ಏನು ಅಪ್ಪ ಆತನಿಗೆ ಇಪ್ಪತ್ತು ಕುರಿಗಳನ್ನು ಕೊಡಿಸಿ ಅಡವಿಯ ದಾರಿ ಹಿಡಿಸಿದ, ಕುರಿ ಕಾಯುವುದು ಎಂದರೆ ಮೂಗು ಮುರಿಯುವ ಜನಗಳ ಮುಂದೆ( ಆಸ್ಟ್ರೇಲಿಯಾ, ಹಾಲಂಡದಂತ ದೇಶಗಳಲ್ಲಿ ಪಶು ಪಾಲಕರೆ ಕಾರಿನಲ್ಲ ಅಡ್ಡಾಡುತ್ತರೆ ಆ ಮಾತು ಬೇರೆ )ಆತ ವಿಕ್ರಮ ಸಾಧಿಸಿದ್ದ ಇಪ್ಪತ್ತು ನಲವತ್ತಾಗಿ ,ನಲವತ್ತು ಎಂಭತ್ತಾಗಿ ನೂರಕ್ಕಿಂತ ಅಧಿಕ ಕುರಿಗಳ ಒಡೆಯನಾಗಿದ್ದ ಅಲ್ಲದೆ ಎರಡು ಆಳು ಇಟ್ಟು ವೈಜ್ಞಾನಿಕವಾಗಿ ಕುರಿ ಸಾಕಣಿಕೆ ಮಾಡಿದ , ಕುರಿಗಳಗೆ ರೋಗ ಬಂದರೆ ತಾನೆ ಅವುಗಳಿಗೆ ಉಪಚರಿಸಿ ಔಷದ ನೀಡುವ ಪರೀಣಿತಿ ಸಾಧಿಸಿದ.ಆದಾಯ ದ್ವಿಗುಣವಾಗಿ ಯಾರಾದರು ಹೊಲ ಮಾರಲು ತಯಾರಿಯಾದರೆ ಎಲ್ಲರಿಗಿಂತ ಹೆಚ್ಚು ನೀಡಿ ಖರೀದೀಸುವ ಹಂತಕ್ಕೆ ಬಂದಿತು ಕುಟುಂಬ. ಇನ್ನು ಮೂರನೆ ಮಗನೆ ಹಾಲಪ್ಪ ,ಕೊನೆಯವನೆಂದರೆ ಕೇಳಬೇಕೆ ಅತಿಯಾದ ಪ್ರೀತಿ ಹಾಗಾಗಿ ಅವನು ಸರಿಯಾಗಿ ಓದಬೇಕು ಮನೆ ಗೌರವ ಎತ್ತಿ ಹಿಡಿಯಬೇಕು ಎನ್ನುವುದು ಎಲ್ಲರ ಮಹದಾಸೆ . ಸರಕಾರಿ ಹುದ್ದೆ ಪಡೆಯಲಿ ಇಲ್ಲವೆ ಯಾವುದಾದರು ಎತ್ತರದ ಸ್ಥಾನವೇರಲಿ ಎಂದು ಕಾಲೇಜು ಮೆಟ್ಟಿಲನ್ನು ತುಳಿಸಿದರು.ಕಾಲೇಜಿನಲ್ಲಿ ಹೇಳಿ ಕೊಳ್ಳುವ ಸಾಧನೆಯನ್ನು ಮಾಡದೆ ಹೋದರು ಪದವಿ ಪಡೆಯಲು ಸಫಲನಾಗಿದ್ದ.ಕೇವಲ ಪಾಸಿಂಗ್ ಸರ್ಟಿಫಿಕೇಟ್ ನಿಂದ ಯಾವ ಸರಕಾರಿ ಹುದ್ದೆ ಸಿಗುತ್ತೆ ಹೇಳಿ ? ಮನೆಯಲ್ಲಿ ಹಣಕ್ಕೂ ಕೂರತೆಯಿಲ್ಲ, ಆಳುಕಾಳುಗಳಿಗೂ ಕೊರತೆ ಇಲ್ಲ .ಇದೆ ಅವಧಿಯಲ್ಲಿ ಐದು ವರ್ಷಗಳಿಗೆ ಬರುವ ತಾಲೂಕು ಪಂಚಾಯತ್ ಚುನಾವಣೆಗಳು ಹತ್ತಿರ ಬರುತ್ತಿದ್ದವು ಇದೆ ಸಮಯದಲ್ಲಿ ಎಲ್ಲರ ಕಣ್ಣಿಗೆ ರಾಚಿದವನೆ ಹಾಲಪ್ಪ. ಚುನಾವಣೆ ಗಳೆಂದರೆ ಸಾಮಾನ್ಯವೆ ಹಿಂದೆ ಮುಂದೆ ಸುಳಿದಾಡದವರನ್ನು ಚನ್ನಾಗಿಯೇ ಸಾಕಬೇಕು, ಸಾಕಲು ನೀರನಂತೆ ಹಣ ಹರಿಸಬೇಕು ಅಂತಹ ಹಣದ ಕೊರತೆ ಇಲ್ಲದೆ ಹೋದರು ಜನರನ್ನು ಕೊಡಿಸಬೇಕಲ್ಲವೆ.! ಜನರನ್ನು ಸೇರಿಸಲು ಪ್ರಯತ್ನಿಸಿ ಸೋತಂತೆ ಭಾಸವಾದರು ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡಲು ಹೇಗ ಸಾಧ್ಯ ? ಮುಂದೆ ಮುಂದೆ ಸಾಗಿದ.ಚುನಾವಣೆ ನಡೆದವು ಪರಿಣಾಮವಾಗಿ ತಾಲೂಕಾ ಪಂಚಾಯತ್ ಸದಸ್ಯನಾಗಿ ಆಯ್ಕೆ ಯಾಗಿದ್ದ. ಬರಿ ಆರಿಸಿ ಬರುವುದು ಮುಖ್ಯವಲ್ಲ ಅಧಿಕಾರ ಬಂದ ಮೇಲೆ ಅದನ್ನು ಬಳಸಿಕೊಳ್ಳವ ಇಲ್ಲವೆ ಉಳಿಸಿಕೊಳ್ಳುವ ಜಾಣ್ಮೆಯಿಂದ ಆತನ ಭವಿಷ್ಯತ್ ನಿರ್ಧಾರ ವಾಗುತ್ತದೆ.ಇರಲಿ ಇವನಿಂದ ಕೆಲಸ ಬಯಸಿ ಬರುವ ಜನರು ಅದನ್ನು ಮಾಡಿಕೊಳ್ಳಲು ಹಾಲಪ್ಪನನ್ನು ಪಬ್ ಬಾರ ದಾರಿ ಹಿಡಿಸಿದರು. ಆರಂಭದಲ್ಲಿ ಹಣ ಖರ್ಚಾಗದೆ ಸಿಗುವ ಉಲ್ಲಾಸ, ವಿಲಾಸ ಜೀವನ ಮಜವಾಗಿ ಖಂಡಿತು.ಈ ಮೋಜು ಮಸ್ತಿ ಎಲ್ಲಾ ಕಾಲದಲ್ಲಿ ಹೇಗೆ ಸಿಗುತ್ತದೆ ? ಈ ಮೋಜಿನ ಜೀವನಕ್ಕೆ ಹೊಂದಿಕೊಂಡಿದ್ದ ಹಾಲಪ್ಪ ಕ್ರಮೇಣ ಇದನ್ನು ತನ್ನ ಸ್ವಂತ ಹಣದಲ್ಲಿಯೂ ಪ್ರಾರಂಭಿಸಿದ .ಅಲ್ಪ ,ಸ್ವಲ್ಪ ಕೆಲಸದ ಜನ ಇವನನ್ನು ಸಾಹೇಬರೆಂದು ಅಟ್ಟಕ್ಕೇರಿಸಿ ಅನುಕೂಲ ಪಡೆಯಲು ಪ್ರರಂಭಿಸಿದಾಗ ನಿರಾಕರಿಸಲು ಹೇಗೆ ಸಾಧ್ಯ ಸ್ವಾಭಿಮಾನಿ ಹಾಲಪ್ಪ ನೀರಿನಂತೆ ಹಣ ಖರ್ಚು ಮಾಡಿದ ಅಣ್ಣಂದಿರ ಕಾರ್ಯ ದಲ್ಲಿ ಸಹಾಯ ಮಾಡಲು ಆತನಿಗೆ ವ್ಯವಧಾನ ಹೇಗೆ ಬಂದೀತು ? ಇದಕ್ಕೂ ಹೆಚ್ಚಾಗಿ ತನ್ನ ತಾಲೂಕು ಪಂಚಾಯತ್ ವ್ಯಾಪ್ತಿಯ ಮಲ್ಲಾಪೂರದ ಗ್ರಾಮ ಪಂಚಾಯತ್ ಸದಸ್ಯೆ, ವಿಧವೆ ನಾಗವ್ವಳೊಂದಿಗೆ ಸಂಬಂಧ ಬೆಳೆಸಿದ ಆರಂಭದಲ್ಲಿ ಮಗ ಚಿಕ್ಕವನಿದ್ದಾಗ ನಾಗವ್ವ ಈತನನ್ನು ರಾಜನಂತೆ ನೋಡಿಕೊಂಡಳು ಅಲ್ಲದೆ ಮಗನ ನೌಕರಿಗಾಗಿ ಇವನಿಂದ ಲಕ್ಷಾಂತರ ಸಹಾಯ ಪಡೆದು ತನ್ನ ಮನೆತನ ಗಟ್ಟಿಗೊಳಿಸಿದಳು.ಈ ಸುದ್ದಿ ಕಾಡ್ಗಿಚ್ಚಿನಂತೆ ತನ್ನ ಮನೆ ತಲುಪಲು ಬಹಳ ಅವಧಿ ತೆಗೆದು ಕೊಳ್ಳಲಿಲ್ಲ ಕೇವಲ ಮನೆಯಲ್ಲದೆ ಮಡದಿಗೂ ತಲುಪಿ ಸಂಸಾರದಲ್ಲಿ ಬಿರುಕು ಪ್ರಾರಂಭವಾಯಿತು. ಹೆಂಡತಿಯ ತಮ್ಮ ಶ್ರೀಧರ ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದ ಹೇಗಾದರೂ ಮಾಡಿ ಅಕ್ಕನ ಬಾಳನ್ನು ಸರಿಪಡಿಸಲು ಹರಸಾಹಸ ಪಟ್ಟ.ಒಂದು ದಿನ ತಾಲೂಕು ಬಸ್ ನಿಲ್ದಾಣದಲ್ಲಿ ಹಾಲಪ್ಪ ಹೋಗುತ್ತಿದ್ದ. ಶ್ರೀ ಧರನಿಗೆ ಮಾವನನ್ನು ಗುರುತು ಹಿಡಿಯಲು ಬಹಳ ಸಮಯವೇನು ಹಿಡಿಯಲಿಲ್ಲ ಸಮೀಪ ಹೋದಾಗ ಸತ್ಯದರ್ಶನವಾದ್ದೆ ಬೇರೆ .ಯಾರ ಯಾರದೊ ಪಾರ್ಟಿ ಹಗಲು ಹೊತ್ತಿನಲ್ಲೆ ಕುದುರೆ ಏರಿದ್ದ ಶ್ರೀಧರ ಮಾವನಿಗೆ ನಮಸ್ಕಾರ ತಿಳಿಸಿ " ಮಾವನವರೆ ನಾನು ನಿಮಗಿಂತ ಸಣ್ಣವ ಬುದ್ದಿ ಹೇಳಬಾರದು ಆದರೂ ಅಕ್ಕನ ಬಾಳು ಹಾಳಾಗ ಬಾರದೆಂದು ತಮ್ಮಲ್ಲಿ ಶಿರಬಾಗಿ ಕೇಳುವೆ.ಅಕ್ಕನೊಂದಿಗೆ ಹೊಂದಿ ತಮ್ಮ ಮುದ್ದಾದ ಮಗುವಿನೊಂದಿಗೆ ಸುಂದರವಾದ ಬದುಕು ಕಟ್ಟಿಕೊಳ್ಳಿ ಎಂದು ಕೈಮುಗಿದ. ಶ್ರೀಧರ " ನಾನು ಈಗ ಬಹು ದೊರ ಬಂದು ಆಗಿದೆ , ನೀನು ಹೇಳಿದ್ದು ಎಲ್ಲವೂ ಸರಿಯಾಗಿದೆ ಆದರೆ ನನಗೆ ಹಿಂದೆ ಹೋಗಲು ಸಾಧ್ಯವಾಗುತ್ತಿಲ್ಲ ಕ್ಷಮಿಸು "ಎಂದು ತನ್ನ ಗೆಳೆಯರ ಹುಡುಕುತ್ತಾ ಮುನ್ನಡೆದ.ಶ್ರಿಧರನಿಗೆ ಆಕಾಶ ಕಳಚಿ ಬಿದ್ದಂತಾಯಿತು .ನಿಧಾನವಾಗಿ ಮನೆಗೆ ನಡೆದು ಅಕ್ಕನಿಗೆ ಸಂತೈಸಲು ಪ್ರಯತ್ನ ಮಾಡಿದ .ತಮ್ಮ ನ ಸಂತೈಸುವಿಕೆ ಅರ್ಥ ತಿಳಿಯದವಳೇನು ಸೀತಮ್ಮ. ಕೆಲವೆ ದಿನಗಳಲ್ಲಿ ಹಾಸಿಗೆ ಹಿಡಿದು ಶಿವನ ಪಾದ ಸೇರದಳು .ಮಗನ ಮೇಲೆ ಆಶಾ ಗೋಪರ ಕಟ್ಟಿದ್ದ ಹನಮಂತ ಹಾಗೂ ಆತನ ಹೆಂಡತಿ ಬಾಲಮ್ಮ ಒಬ್ಬರಾದ ಮೇಲೆ ಒಬ್ಬರಂತೆ ಇಹ ಲೋಕ ತ್ಯಜಿದರು.ತಂದೆ ತಾಯಿಲ್ಲದ ಅಣ್ಣಂದಿರು ಬದುಕಿನ ಪ್ರತ್ಯೇಕ ಬಂಡಿ ಹೂಡಲು ತಯಾರಿಯಾದರು. ಹೆತ್ತವರೆಂಬ ಮೇಟಿ ಇರುವಾಗ ತಿರುಗದವರು ಇಲ್ಲದಾಗ ತಿರುಗುವದು ಹೇಗೆ ? ಅಣ್ಣಂದಿರ ತಮಗೆ ಬಂದ ಆಸ್ತಿ ತೆಗೆದು ಕೊಂಡು ಬೇರೆಯಾದರು.ಇತ್ತ ಕಡೆ ನಾಗವ್ವ ಮಗ ದೊಡ್ಡವನಾಗಿ ನೌಕರಿ ಹಿಡಿದು ಹಂತಕ್ಕೆ ಮುಟ್ಟಿದಾಗ ಮಗನ ಹಿಂದೆ ದಾರಿ ಹಿಡಿದಳು. ಒಂದು ಮಾತಿದೆ ಕಟ್ಟಿ ಕೊಂಡವಳು ಕೊನೆಯತನಕ ಇಟ್ಟುಕೊಂಡವಳು ಇರುವತನಕ,ಆದರೆ ಈಗ ಆಗಿದ್ದು ಇದೆ ,ಕಟ್ಟಿ ಕೊಂಡವಳನ್ನು ಕಳೆದು ಕೊಂಡಿದ್ದಾನೆ ಇಟ್ಟು ಕೊಂಡವಳು ಗಟ್ಟಿ ಯಾಗಿ ದೂರ ಸರದಿದ್ದಾಳೆ, ಮಾಡುವುದೇನು ? ನೆಲಗೀರುತ್ತಾ ಮಲಗಿದ್ದಾನೆ ಹಾಲಪ್ಪ . ಮಗು ಅನಾಥವಾಗಿದೆ, ಹಾದಿ ತಪ್ಪಿದವನು ಹಾಸಿಗೆ ಪಾಲಾಗಿದ್ದಾನೆ.
Saturday, May 1, 2021
Subscribe to:
Post Comments (Atom)
"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"
ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...
-
🌺 ಪ್ರಿಯ ಮಿತ್ರರೇ 💐🙏 ಭಾರತದ ಇತಿಹಾಸದಲ್ಲಿ ಗುಪ್ತರ ಕಾಲವನ್ನು "ಸುವರ್ಣಯುಗ" ಎಂದು ಕರೆಯಲಾಗುತ್ತದೆ, ಆದ್ದರಿಂದ ಕೆಎಎಸ್, ಪಿಎಸ್ಐ, ಇಎಸ್ಐ, ಎಸ್ಡಿಎ, ...
-
ಬಸವೇಶ್ವರರ ಸಾಮಾಜಿಕ –ಧಾರ್ಮಿಕ ಸುಧಾರಣೆಗಳು ಬಸವೇಶ್ವರರು ಬಾಗೆವಾಡಿಯಲ್ಲಿ ಮಾದರಸ ಮಾದಲಾಂಬಿಕೆಯ ಮಗನಾಗಿ ಜನಿಸಿ ಜಾತವೇದ ಮುನಿಗಳಲ್ಲಿ ವಿದ್ಯಾಭ್ಯಾಸ ಮಾಡಿ ಬಿಜ್ಜಳನ ಆಸ...
-
ಅಕ್ಬರನ ಸಾಧನೆಗಳು ಮೊಗಲರ ಅರಸರಲ್ಲಿಯೇ ಅಕ್ಬರ ಅತ್ಯಂತ ಶ್ರೇಷ್ಟ ಅರಸ.ಶೂರ ಸೇನಾನಿಯಾಗಿ ,ದಕ್ಷ ಆಡಳಿತಗಾನಾಗಿ, ಧರ್ಮ ಸಹಿಷ್ಣುವಾಗಿ,ಕಲೆ & ಸಾಹಿತ್ಯ ಫೋಷಕನಾಗ...
No comments:
Post a Comment