Friday, May 28, 2021

* ಹೀಗೊಂದು ಕೊರೋನಾ ಪುರಾಣ *

         ಕಾಲಪುರುಷನಿಗೆ ಕರಣೆ ಎಂಬ ಮೂರಕ್ಷರದ ಅರ್ಥವೆ ತಿಳಿಯದು ಅದು ಇತ್ತೀಚೆಗಂತು ಆತ ತಲೆ ಕೆಟ್ಟವರಂತೆ ವರ್ತಿಸುತ್ತಿದ್ದಾನೆ,ಅದಕ್ಕೆ ಅವನಿಗೆ ಸ್ವರ್ಗ ಲೋಕದಲ್ಲಿ ಶಿಕ್ಷಣದ ಕೊರತೆ ಎಂದು ಕಾಣಿಸುತ್ತದೆ.ಅಲ್ಲಿಯ ಪ್ರಭುತ್ವದ ಅಸಮರ್ಥ ಆಡಳಿತದ ಫಲಶ್ರುತಿ ಇದಕ್ಕೆ ಕಾರಣವಿರಬಹುದೇನೊ?  ನಮ್ಮ ಪಕ್ಕದ  ಹಳ್ಳಿ ಪರಂಧಾಮಯ್ಯ  ಗೊಣಗುತ್ತ ಹೊರಟಿದ್ದರು ....ಅದೆ ಸಮಯಕ್ಕೆ ಬಂದ ಮೇಸ್ಟ್ರು ಗುರುಶಾಂತಯ್ಯ ಲಗುಬಗೆಯಿಂದ ಕಾಯಿಪಲ್ಲೆ  ಖರೀದಿಸಿ ಮರಳಿ ಮನೆಗೆ ತೆಗೆದು ಕೊಂಡು ಮನೆ ಸೇರುವ ದಾವಂತದಲ್ಲಿದ್ಧರು.ಪರಂಧಾಮಯ್ಯನನ್ನು  ನೋಡಿದ್ದೆ ತಡ ಅವನಿಗಾಗಿ ಕಾಯಲೆ ಬೇಕಾಯಿತು,ಯಾಕಂದ್ರೆ ಬಿಟ್ಟು ಹೋದರೆ ಸುಮ್ಮನೆ ಬಿಡುವ ಆಸಾಮಿಯಲ್ಲ ,ಮತ್ತ ಒಂದ ಓಣಿಯಾವ ಬೇರೆ, ಇವನು ಯಾವಾಗಲೂ ಜಗತ್ತು ತನ್ನ ಮೇಲೆ ಬಿದ್ದವರಂತೆ ದೇಶದ ಬಗ್ಗೆ ಮಾತಾಡುತ್ತಿದ್ದ, ಆದರೆ ಆಸಾಮಿ ಕೆಟ್ಟ ವನಂತೂ ಅಲ್ಲ, ಹೀಗಾಗಿ ಗುರುಶಾಂತಯ್ಯ ಮೇಷ್ಟ್ರು ತನ್ನ  ಖರೀದಿ ಮುಗಿದಿದ್ದರೂ ಅವರಿಗಾಗಿ ಹತ್ತ ನಿಮಿಷ ಕಳೆಯಬೇಕಾಯಿತು. ಮೇಷ್ಟ್ರು ತನಗಾಗಿ ನಿಂತಿರುವದನ್ನು ಗಮನಿಸಿದ ಪರಂಧಾಮಯ್ಯ ಎಷ್ಟು ತೆಗೆದುಕೊಂಡನೋ ಏನೂ, ತನಗಾಗಿ ನಿಂತವರನ್ನು ಕಾಯಿಸಿದ ಜಾಯಮಾನ ಅವನದಲ್ಲ ಹೀಗಾಗಿ ಐದೆ ನಿಮಿಷದಲ್ಲಿ ಹಾಜಾರಾದ ಎಷ್ಟು ಕೊಂಡನೋ ಆ ದೇವರೆ ಬಲ್ಲ ... ಇಬ್ಬರು ದಾರಿಯಲ್ಲಿ ಹರಟುತ್ತಾ ಮನೆಯ ಕಡೆ ಹೆಜ್ಜೆ  ಹಾಕಲು ಪ್ರಾರಂಭಿಸಿದರು. ಪರಂಧಾಮಯ್ಯ ಸುಮ್ಮನೆ ಇರುವ ಮನಷ್ಯನೆ ಅಲ್ಲ ಬಿಡಿ ,ತನ್ನ ಲೋಕ ಪ್ರೀತಿ ಪ್ರಾರಂಭಿಸಿಯೆ ಬಿಟ್ಟ, ಅಲ್ಲ ಶಾಂತಯ್ಯ ಸರಕಾರದವರು ಸಂತೇ ಮಾಡಲು 6.0 ರಿಂದ 10.00 ವರೆಗೆ ಟಾಯಂ ಕೊಟ್ಟಾರು ಅಂದರೆ ಎಷ್ಟುಗಂಟೆಯಾಯಿತು 4.00 ಗಂಟೆಯಾಯಿತು, ಈ ನಾಲ್ಕು ಗಂಟೆ ಮುಗಿದ ಮೇಲೂ ರಸ್ತೆಗೆ ಇಳಿದು ಮಸ್ತ್ ಬಾರಿಸಿಕೋತರ ಅಂದರ ಏನಿದರ ಅರ್ಥ ? "ಮೈಯಾಗ ಕೊರೋನಾ ಇದ್ದರ ಓಡಿ ಹೋಗಲಿ" ಅಂತ ಶಾಂತಯ್ಯ ಮೇಷ್ಟ್ರು  ನಕ್ಕರು.ಇರಲಿ "ಶಾಂತಯ್ಯ ಕೊರೋನಾ ಓಡಿ ನಮ್ಮ ಪೋಲೀಸರ ಬಡಗೀಗೆ ಬಂದರ ಹೇಂಗ " ಮತ್ತೆ ಪರಂಧಾಮಯ್ಯ ಪೋಲೀಸರ ಕಾಳಜಿ ಪ್ರಾರಂಭ ಆಯಿತು. ಶಾಂತಯ್ಯ ಹೇಳಿದರು "ಇಲ್ಲಾರಿ ಅದಕ ನಮ್ಮ ಕಮೀಷನರ್ ಸಾಹೇಬರು ಬಡಿಬ್ಯಾಡರಿ ಅಂತ  ಆರ್ಡರ್ ಮಾಡ್ಯಾರಿ ಟಿವ್ಯಾಗ ನೋಡಿರಿಲ್ಲ ನಾಲ್ಕು ಹುಡುಗರನ್ನ ನಿಲ್ಲಿಸಿ ಹೂವಿನ ಹಾರ ಹಾಕಿ ಮೇಲ ಆರತಿ ಮಾಡಿ, ಚಂದ್ರಮಾ ಬಳದದ್ದನ್ನ ನೋಡಿರಿಲ್ಲ" ಶಾಂತ ಯ್ಯ ನಿನಗ ಗೊತ್ತದ ಇಲ್ಲ ಹಳ್ಳಿಯ ಮಂದಿ ಮಾರಮ್ಮನ ಜಾತ್ರೆಯಲ್ಲಿ ಬಲಿ ಕೊಡುವದಕಿಂತ ಮೊದಲ ಹಿಂಗ ಹಾಕತಾರೇನಪ. ಇಷ್ಟಕ ನಮ್ಮ ಜನ ತಿಳಕೋ ಬೇಕು ಇಲ್ಲಾ ಹಂದಿಗೆ ಹೊಡದಂಗ ಹೊಡಿತಾರ .ಈ ಜನ ಸುಮ್ಮನೆ ಇರುವರಲ್ಲರಿ ಅದನ್ನ ಕೋರ್ಟಿಗೆ ಪೋಲೀಸರ ವಿರುದ್ಧವಾಗಿ ಹೋಗ್ಯಾರ, ಶಾಂತಯ್ಯ ಹೇಳಿದರು" ಬಡಿದದ್ದಕ್ಕೆ  ಕೋರ್ಟ ಏನ ಹೇಳತಂದರ ಮತ್ತ ಬಡಗೆ ಅಂದರೆ ಪೂಜೆ ಮಾಡಾಕ ಇಡಾಕ ಇರತಾವ ಏನ ?  ಅವರಿಗೂ ಮನಸ್ಸು ಒಂದು ಇರತದ ಜನರು ಅರ್ಥ ಮಾಡಕೊಳ್ಳಬೇಕು ಅಂತ ಕ್ಯಾಕರಸಿ ಉಗಳಿ ಕಳಿಸಿತು.ಸರಕಾರ ಇರೊದ ನಮ್ಮ ಸಲುವಾಗಿ ಅನ್ನೋದ ಅರ್ಥ ಮಾಡಿಕೊಳ್ಳಬೇಕು ಜನ. ಪರಂಧಾಮಯ್ಯನ ಪುರಾಣ ಮತ್ತ ಪ್ರರಂಭಿಸಿಯೆ ಬಿಟ್ಟ ಸರ್ "ಎನ ಇರಲಿ ಏನ ಆಗತ್ತ ಅದು ಒಳ್ಳೆಯದಕ್ಕದಕ್ಕಂತ ಹೆಂಗ ಕಾಲ ಅದ ಹಂಗ ಹೊಂದಿಕೊಳ್ಳ ಬೇಕು "ಅಲ್ಲ ರಿ ,ಮದುವೆ ಲಕ್ಷ,ಲಕ್ಷ ಖರ್ಚು ಮಾಡಿ ಮಾಡುವದು ತಪ್ಪಿದೆ ,ಪ್ರೆಸ್ಟೆಜ ಅಂತ ನೂರಾ ಎಂಟ ಐಟಂ ಮಾಡಿ ತಿಪ್ಪಿಗೆ ಎಸೆಯುವದು ತಪ್ಪಿದೆ. "ಅಂದರ ಇನ್ನು ಮುಂದ ಜನಸಂಖ್ಯೆ ಕಡಿಮೆ ಆಗತ್ತ ಅನ್ನವನ ಮತ್ತ ನೀನು...

ಹಾಂಗಲ್ಲರಿ ಮಾಸ್ತರ ಸೊಚ್ಚತೆ ಬಗ್ಗೆ ಹೇಳಿದರ ಯಾರು ತೆಲಿನ ಕೆಡಸಿಕೂಳ್ಳತಿರಲಿಲ್ಲ ಈಗ ನೋಡರಿ ಹೇಗ ಹಾದಿಗ ಬಂದಾರ ,ನೀವು ಏನ ಅನ್ನರಿ ಸರ್, ಕೊರೋನಾ ಚನ್ನಾಗಿಯೇ ಪಾಠ ಕಲಿಸಿದೆ ಬಿಡ್ರಿ ಸರ್. 

ಅಲ್ಲ ರಿ ಪರಂಧಾಮಯ್ಯ ಜಗತ್ತು ದಿನ ಸಾವಿರಾರು ಜನ ಸಾಯಕ ಹತ್ಯಾರ ಅವರಿಗೆ ಹಾಸಿಗೆ, ಹೆಡ್, ಆಕ್ಸಿಜನ್ ಅಂತ ಚಿಂತಿ ಮಾಡಿದರ ಒಳ್ಳೆಯದು ಆತು ಅಂತೀರಲ್ಲರಿ...ಅಲ್ಲರಿ ಮಾಸ್ತರ್, ನಮ್ಮ ಜನರಿಗೆ ಬುದ್ಧಿ  ಯಾವಾಗ ಬರುತ್ತೋ ಯಾರಬಲ್ಲ ಸರಕಾರ ಜನರಿಗೆ ಅನುಕೂಲ ಆಗಲಿ ಅಂತ ವ್ಯಾಕ್ಸಿನ್ ಔಷದ ಪ್ರೀ ಕೊಟ್ರು ಅದರಾಗೂ ರೊಕ್ಕ ಕಮಾಯ ಮಾಡಕ ಹತ್ಯಾರಲ್ಲ ಅದಕ್ಕೇನ ಅಂತೀರಾ, ಜಗತ್ತು ಅಂದರ ಎಲ್ಲಾ ತರ ಜನ ಇರೂದ ಅಂತವರಿಗೆ ಅಂತಾ ಒಂದು ವ್ಯವಸ್ಥೆ ಇದೆ ಅವರಿಗೆ ಏನು ಪಾಠ ಕಲಿಸಬೇಕು ಅದನ್ನು ಕಲಸತದ " ನೀವು ವ್ಯಾಕ್ಸಿನ್ ಹಾಕಿಸಿಕೊಂಡೀರ ಇಲ್ಲ"

ಶಾಂತಯ್ಯ ಕೇಳಿದರು ,ಸರ್ ನಿನ್ನೆ ಹೋಗಿದ್ದೆವು ಸ್ಟಾಕ ಕಾಲಿ ಆದವು ಬರತಾವ ಅಂತ ಹೇಳಿದರು .ಮತ್ತೊಂದು ಸಾರಿ ಹೋಗಬೇಕರಿ."ಅಲ್ರಿ ಸರ್ ನಿನ್ನೆ ಪೇಪರಿನಾಗ ಓದಿದೆ ದೊಡ್ಡ ದೊಡ್ಡವರು ಏನ ಹೇಳಿದರಂದರ ಇವು ಅಲೆ ಮ್ಯಾಗ ಅಲೆ ಬರತಾವು ಆದರ ಜೊತೆ ಹೇಗೆ ಬದಕಬೇಕು ಅನ್ನುದನ್ನ ಕಲಕೊ ಬೇಕು ಅಂತ ಬರದಿದ್ದರ ನೋಡರಿ.ಅದಕ್ಕೂ ಟ್ಯೂಷನ ತೊಗೊಳೊ ಕಾಲ ಬರತ್ತ ಏನ, ನೋಡರಿ.ಆ ಕೆಲಸ ಈಗಾಗಲೇ ಮಾಧ್ಯಮದವರು ಮಾಡ್ಯಾರಿ,ಸರಕಾರದವರು ಮಾಡ್ಯಾರ ಅದರಂಗ ನಡೆದರ ಇಂತಹ ಹತ್ತ ಕೂರೋನ ಬಂದರು ಎದುರಿಸಬಹುದು ಅನ್ನುವದರೊಳಗಾಗಿ ಪರಂಧಾಮಯ್ಯನ ಮನೆ ಸಮೀಪ ಬಂತು ಬದುಕಿದೆಯಾ ಬಡಜೀವ ಎಂದು ಮನೆ ದಾರಿ ಹಿಡಿದರು ಶಂತಯ್ಯ.

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...