ತಲೆಮಾರು ಬೆಳೆದು ಬಂತು, ನಿಂತು
ನೆಲದ ಹಿಡಿಮಣ್ಣಿನ ಚಂದದ ಬೇರಿಂದ
ನೆಲದ ಹಿಡಿಮಣ್ಣಿನ ಚಂದದ ಬೇರಿಂದ
ತಲೆಯಲ್ಲಿ ಚಿಗುರಲಿಲ್ಲ ಅಪ್ಪ ಅಜ್ಜನಿಗೆ
ಕುಲವೆ ಧರಿಯಲ್ಲಿ ಸಕಲವೂ ಎಂದು//
ಕುಲವೆ ಧರಿಯಲ್ಲಿ ಸಕಲವೂ ಎಂದು//
ಮಗನ ತಲೆಯಲ್ಲಿ ಆಸೆಯ ಚಿಗುರೆಲೆ
ಬಾಗಿನಡೆವ ಭಾವನೆ ಮಾಡಿದ ಕೊಲೆ
ಸಾಗಿನೆಡೆದ ಕಾಣಲಿಲ್ಲ ಸಾಗರದ ಅಲೆ
ಸುತ್ತವರಿದಾಗ ಕಡಲಿವನಿಗೆ ಜ್ವಾಲೆ//
ಶರಧಿಯ ಸರಿಸುವ ಹರಸಾಹಸ
ಕೊರಕಲು ಕಂಡಾಗ ತಲೆಯ ಬಿರುಕು
ಗೊರಕೆ ಹೊಡೆದವರಿಗೆ ಈಗ ಮರುಕ
ಬೇರು ಭದ್ರಪಡಿಸ ನಿಂತ ತಲೆ ತಿರುಕ//
ಕಾಲ ಕಳೆಯುವ ಮುನ್ನ ಸಾಲಿಗೇರಲಿ
ಶೂಲವದು ಸಕಲವು ತನಗಾಗೆಂದಲಿ
ಬಾಲಕಳದು ಬೆಳದು ಬೆಳಕಾಗು ಜಗದಿ
ಛಲವಿರಲಿ ಕಟ್ಟುವೆ ಕಾಡಿನ ನಾಡನು//
ಬಸನಗೌಡ ಗೌಡರ
No comments:
Post a Comment