ಕರವಲ್ಲವಿದು ಸೃಷ್ಟಿಯ ವರ
ಬೆರುಳು ಬಂಧನದಿ ಅರಳಿದೆ ವನ/
ಸೆರಗೊಡ್ಡಿ ಬೇಡುವೆ ಸ್ಮಶಾನ ಶಿವನ
ಮರದ ರೂಪದಲ್ಲಿ ತೋರು ವದನ //
ಬೆರುಳು ಬಂಧನದಿ ಅರಳಿದೆ ವನ/
ಸೆರಗೊಡ್ಡಿ ಬೇಡುವೆ ಸ್ಮಶಾನ ಶಿವನ
ಮರದ ರೂಪದಲ್ಲಿ ತೋರು ವದನ //
ಅಂದು ಪಶುಪತಿ ಸಿಂಧೂ ಕೊಳ್ಳದ
ಇಂದು ಹರ, ಹೆಸರಿಗೇನು ಇಲ್ಲ ಬರ/
ತಂದು ನಮಿಸಿ ಬೇಡುವೆವು ವರ
ತುಂಬಿ ಹರಡಲಿ ಶ್ರೀಗಂಧದ ಪ್ರವರ//
ಹಸಿದು ಮುಕ್ಕುವ ಕಾಡು ಹೆಬ್ಬುಲಿಯ
ಹೊಸಿಕಿ ಹಾಕುವ ಭಯವ ಕಳೆದು /
ಹರಣಿ ತಾ ಸ್ವಚ್ಛಂದವಾಗಿ ಬೆಳೆದು
ಹೊಸ ಸಂದೇಶ ಹಾಡಿದೆ ಜಗದಲಿ//
ಪಶು ಪಕ್ಷಿಗಳಿಗೆ ಸ್ವಚ್ಛಂದ ಕನಸು
ಯಶ ಕಂಡು ಹಾರುವವು ನಭ ಏರಿ
ಪಾಶವಿ ಕೃತ್ಯ ಎಸಗುವರಿಲ್ಲ ಈ ಬಾರಿ
ನಿಸರ್ಗದ ನರನ ಸೃಷ್ಟಿಸು ಮುರಾರಿ //
ಬಸನಗೌಡ ಗೌಡರ
ಗುಳೇದಗುಡ್ಡ
No comments:
Post a Comment