Monday, May 31, 2021

* ಉರಿಬಿಸಿಲಿನಲ್ಲಿ ಕೂಗಿದ ಕೊಗಿಲೆ *

 ಇದು ಕವನವೂ ಅಲ್ಲ ,ಕತೆಯೂ ಅಲ್ಲ, ಕನಸಂತೂ ಮೊದಲೆ ಅಲ್ಲ, ಇಂದು ಮಧ್ಯಾಹ್ನ ಮನೆಯ ಮುಂದಿನ ಮರದಲ್ಲಿ ಕೇಳಿದ ಕೊಗಿಲೆ, ಕಾಗೆಯ ಗಾನ


* ಉರಿಬಿಸಿಲಿನಲ್ಲ ಕೂಗಿದ ಕೊಗಿಲೆ *

ಎನ್ನಂಗಳದ ಸೊಬಗು ಏನೆಂದು ವರ್ಣಿಸಲಿ...  
ಒಂದು ತೆಂಗು, ಎರಡು ಬಾದಾಮಿ ಮೂರು ಹೊಂಗೆ, ಇನ್ನರೆಡು ಬೇವು ಒಂದು ಸಾಗವಾನಿ,ಇದು ಎಣಿಕೆಯಲ್ಲ, ಗೌರವ ಪಡೆಯುವ 
ಹವಣಿಕೆಯೂ ಅಲ್ಲ, ನನ್ನದೆನ್ನವ ಅಧಿಕಾರವು ನನಗಿಲ್ಲ, ಪುರಸಭೆಯ ದಾರಿ 
ಭಗವಂತ ಬೀಸಿದ ಗಾಳಿ 
ಅವರೆ ಹರಿಸಿದ ನೀರು 
ಬಿಲ್ಲು ಕಟ್ಟಿ ದೆನೆಂದರೆ ಬಡಿವಾರವೆಲ್ಲ. . 
ಅದು ಸರ್ಕಾರ ನೀಡಿದ ಸಂಬಳದಿಂದ 
ನನ್ನದೆನ್ನುವುದೆನಿಲ್ಲ ....
ನನ್ನ ಮರಗಳೆಂದರೆ ನಗಲಾರರೆ 
ಇಂದು ಮಟ ಮಟ ಮಧ್ಯಾಹ್ನ 
ಮಲಗಿ ನಿದ್ರೆಗೆ ಜಾರುವ ಮುನ್ನ 
ಇಂಪಾದ ದ್ವನಿಯೊಂದು ಇಣುಕಿ  ನೋಡಿತು 
ಕರ್ಣ ಕುಟೀರದ ಮೇಲೆ ಕೂಹೂ ,ಕೂಹೂ ....
ಕತ್ತೆತ್ತಿ ನೋಡಿದೆ ಬಣ್ಣ ಕರಿದು ದ್ವನಿ ಬಂಗಾರ 
ಉರಿ ಬಿಸಿಲಿನಲ್ಲಿ ಸೃಷ್ಟಿಯಾಯೀತು ಸ್ವರ್ಗ ಸೃಂಗಾರ
ಸೆರೆಹಿಡಿದೆ ನನ್ನ ಕೆಮರಾ ಕಣ್ಣಿಂದ 
ಸುರಸುಂದರ ಉಲಿದಾಗ ನೆಲಮುಗಿಲೆ ತಂಪು 
ಕೂಹೂ ಕೊಹೂ........
ಗಂಧರ್ವ ಲೋಕವೆಂಬುದು ನಾನರಿಯೆ,
ಎಡಬಲದಿ ಅರಳಿರುವ ಎರಡು ಬದಾಮಿ, 
ಎಡದಲ್ಲಿ ಕೋಗಲೆ, ಬಲದಿಂದ ಕಾಗೆ 
ಕರ್ಕಸವೆಂದು ಅನಿಸಲಿಲ್ಲ ಕಾಗೆಯ ಕೂಗು..
ಸಾಗಿ ಬಂದುದೆ ನಾನರಿಯದ ನಾಕ. 
ನವಿಲೊಂದೆ ಬಾಕಿ..... ನಾನಿರುವೆನಲ್ಲ..!
ಕುಣಿದು ಕುಪ್ಪಳಿಸಲು... 
ಹನಿಯಬಂದ ರವಿ ಕಿರಣದಿಂದ... 
ಸೋತ ಓಡುತಿರುವನು ಜಾರಿಕೊಂಡು.
ರಜೆಯ ಮಜಾ ಹೇಗೆಂದು ತಿಳಿಯಿತು 
ಕಾಗೆ ಕೋಗಿಲೆಯಿಂದ ...
ಅದಕ್ಕಾಗಿ ನಾನು ಶರಣಾದೆ 
ಮನೆಯ ಮುಂದಿನ ಮರಗಳಿಗಿಂದು 
ಮರೆಯದೆ ಗಿಡನೆಡಬೇಕು ಜೂನ 
ಐದರಂದು ಎಂದೆಂದೂ.....

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...