ಚುನಾವಣೆ ಅಂದರೆ ಹೀಗೆ , ನನಗೆ ಒಂದು ಅಪರೂಪದ ಘಟನೆ ಹಂಚಿಕೊಳ್ಳುವ ಮನಸ್ಸಾಯಿತು . ಅದೇನಂದರೆ ಸುಮಾರು 30 ವರ್ಷದ ಹಿಂದಿನ ಮಾತು ಪ್ರಕಾಶ ಎಂಬ ಹುಡುಗ ಇದ್ದ, ಆತ ಡಿಗ್ರಿ ಓದುತ್ತಿದ್ದ ಸಮಯ. ಎಲೆಕ್ಷನ ಪ್ರಚಾರ ಜೋರಾಗಿಯೆ ನೆಡೆಯುತ್ತಿತ್ತು ಹಾಗಾಗಿ ಪಕ್ಷದವರು ಪ್ರಚಾರಕ್ಕಾಗಿ ಕಾಲೇಜು ಹುಡುಗರನ್ನು ಬಳಸಿಕೊಳ್ಳುತ್ತಿದ್ದರು ಪರಿಣಾಮ ಈ ವಿದ್ಯಾರ್ಥಿಯನ್ನು ಪ್ರಚಾರಕ್ಕಾಗಿ ಬಳಸಿಕೊಂಡಿದ್ದರು( ಈಗ ಆ ಪಾರ್ಟಿ ಹೆಸರು ಬೇಡ) ಪಾರ್ಟಿ ಮೀಟಿಂಗ್ ಗೂ ಕರೆಯುತ್ತಿದ್ದರು, ಹೋಗುತ್ತಿದ್ದರು ಪ್ರಚಾರ ಎಷ್ಟರಮಟ್ಟಗೆ ಮಾಡಿದರೊ ಗೊತ್ತಿಲ್ಲ . ಊಟ, ಚಹಾ ಪಾನಿ ಟಾಯಂ ಪಾಸ್ ಮಾತ್ರ ಆಗುತ್ತಿತ್ತು ಇಲೆಕ್ಷನ್ ಜೋರಾಗಿ ನಡೆಯಿತು ಮತದಾನ ಮುಗಿದ ಮೇಲೆ ಎಲ್ಲರ ಚಿತ್ತ ಎಣಕೆಯತ್ತ ಎನ್ನವ ಹಾಗೆ ಎಣಿಕೆ ದಿನ ಬಂದೆ ಬಿಟ್ಟಿತು.ಪಾರ್ಟಿಗಳ ಕಾರ್ಯ ಕರ್ತರು ಮಹಿಂದ್ರ ಗಾಡಿ ಮಾಡಿ ಕರೆದುಕೊಂಡು ಹೋದರು. ಅವನಿಗೂ ಉದ್ಯೋಗ ಇರಲಿಲ್ಲ ಬೇಸಿಗೆ ಬೇರೆ,ಕೆಲಸ ಇರಲಿಲ್ಲ, ಇಲ್ಲದಿದ್ದರೆ ಅವರ ಅಪ್ಪ ಅವನ್ನು ಕಳುಹಿಸುವ ಆಸಾಮಿಯೇನಲ್ಲ ಹೊಲದ ದಾರಿ ಹಿಡಿಯಿಸಿ ಬಿಡುತ್ತಿದ್ದ . ಅವರ ಊರಿನಲ್ಲಿ ಮಸಾರಿ ಜಮೀನು , ಬೇಸಿಗೆಯಲ್ಲಿ ರೈತಾಪಿ ಮಕ್ಕಳ ಕೆಲಸ ಏನಂದರೆ ಎತ್ತಿನ ಚಾಕ್ರಿ ಮಾಡಬೇಕು ಮಾಡಿದರೆ ಮುಗಿಯಿತು.ಅವರು ರಾಜರೆ ಆವಾಗ . ಸರಿ ಎಣಿಕೆಗೆ ಹೋಗಬೇಕು ಎಂದು ಮುಂಜಾನೆಯೆ ಎತ್ತುಗಳಿಗೆ ಹೊಟ್ಟು ಮೇವು ತಂದು ಕೊರೆದು ರೆಡಿ ಮಾಡಿದ ಇನ್ನೇನು ಅವನ ಅವಶ್ಯಕತೆ ಮನೆಯವರಗೆ ಇಲ್ಲ ಅನ್ನುವಂತೆ ಮನವರಿಕೆ ಯಾದ ಮೇಲೆ ಎಣಿಕೆಗೆ ಹೊರಟು ನಿಂತ, ಆಗ ತಾನು ಒಬ್ಬ ನಿಷ್ಠಾವಂತ ಕಾರ್ಯ ಕರ್ತನಂತೆ ಪೋಜು ನೀಡಿದ. ತನ್ನಂತೆ ತಯಾರದ ಯುವಕರ ಜೊತೆ ವಾಹನವೇರಿ ಎಣಿಕೆ ಕೇಂದ್ರದ ದೊರದ ಸ್ಥಳದಲ್ಲಿ ಟಿಕಾಣಿ ಹೂಡಿದರು ಎಣಿಕೆ ಸುತ್ತುಗಳು ಪ್ರಾರಂಭವಾಯಿತು ಒಂದು, ಎರಡು ಹೀಗೆ ಮುಂದುವರೆಯುತ್ತಿತ್ತು ತಮ್ಮ ಅಭ್ಯರ್ಥಿಯ ಮತ ಲೀಡಾದಾಗ ಇವರು ಕೇಕೇ ಹಾಕುತ್ತಿದ್ದರು. ಇನ್ನೊಂದು ಅಭ್ಯರ್ಥಿಯ ಲೀಡ ಬಂದಾಗ ಅವರು ಕೆಕೆ ,ಜೈಕಾರ ಹಾಕುತ್ತಿದ್ದರು .ನೆಕ್ ಟು ನೇಕ್ ಪೈಟ ಹೀಗೆ ಏರಿಳಿತ ನಡೆಯುತ್ತಿತ್ತು ಇನ್ನೇನು ಕೊನೆಯ ಸುತ್ತಿನ ಎಣಿಕೆ ಎಲ್ಲರಿಗೂ ಕಾತರ ಇವನ ಅಭ್ಯರ್ಥಿಯೆ ಗೆಲ್ಲಬೇಕು ಗುಲಾಲು ಹಾಕಿಕೊಳ್ಳಬೇಕು ಎನ್ನುವ ಉತ್ಸಾಹ ದಲ್ಲಿ ಇದ್ದರು ಅ ಕಾಲ ಬಂದಾಗ ಒಂದು ಗೂಂದಲು ಸೃಷ್ಟಿಯಾಯಿತು, ಇವರ ಅಭ್ಯರ್ಥಿಯು ಗೆದ್ದಂತೆ ಸುದ್ದಿಯ ಹರಿದಾಡಿ ಜೈಕಾರದ ಮೇಲೆ ಜೈಕಾರ ಸಮೀಪ ಸ್ಪರ್ಧೆಯನ್ನು ಕೆಲವರು ನಿಂದಿಸುವ ಕೆಲಸ ಮಾಡಿದರು ಇವರು ಮಾತ್ರ ಅಂತಹ ನಿಂದಿಸುವ ಕೆಲಸ ಮಾಡಲಿಲ್ಲ ಯಾಕೆಂದರೆ ಅಷ್ಟು ಹಚ್ಚಿಕೊಂಡು ರಾಜಕೀಯ ಮಾಡುವವರು ಇವನಾಗಿರಲಿಲ್ಲ.ಆ ಮಾತು ಹಾಗಿರಲಿ ಇವರ ಪಕ್ಕದಲ್ಲಿ ಇನ್ನೊಂದು ಊರಿನಿಂದ ಬಂದ ಕಾರ್ಯಕರ್ತರು ಸೇರಿದ್ದರು ಅವರಲ್ಲಿ ಒಬ್ಬಾತ (ಅವನ ಬಗ್ಗೆ ಇವರಿಗೆ ಪರಿಚಯ ಇರಲಿಲ್ಲ ಆ ಮಾತು ಬೇರೆ) ಆತ ಇವರಿಗಿಂತ ಇವರ ಅಭ್ಯರ್ಥಿಯನ್ಷು ಹಾಡಿ ಹೊಗಳಿದ ಜೈಕಾರ ಹಾಕಿದ ಕುಣಿದು ಕುಪ್ಪಳಿಸಿದ .ಅವನಂದುಕೊಂಡ, ಅಭಿಮಾನ ಅಂದರೆ ಹೀಗೆ ಇರಬೇಕು... ನಾವು ಇದ್ದೇವೆ ಗಾಡಿಗೆ ಮೂಲಾಗಿ ಬಂದಿದ್ದೇವೆ ಎಂದುಕೊಂಡ. ಐದು ನಿಮಿಷ ಕಳೆದಿರಲಿಲ್ಲ ವಿಜಯದ ಚಿತ್ರಣ ಬದಲಾಗಿ ಹೋಗಿತ್ತು ಪ್ರಕಾಶನ ಅಭ್ಯರ್ಥಿಯೆ ಸೋತಿದ್ದ. ಪ್ರಕಾಶನ ತಂಡ ಈಗ ಸೋತ ಪಾರ್ಟಿ ಕಾರ್ಯಕರ್ತರು. ಒಂದು ಕಡೆ ಚಾ ಕುಡಿಯುತ್ತಾ ಅಸಾಹಯಕರಾಗಿ ನಿಂತರು. ಇಲ್ಲಿ ಯವರೆಗೆ ಇವರ ಅಭ್ಯರ್ಥಿಯನ್ಷು ಹಾಡಿ ಹೊಗಳಿದೆ ಅಂತ ಹೇಳಿದೆ ಅಲ್ಲವಾ ಆತ ಈಗ ಸಂಪೂರ್ಣ ಬದಲಾಗಿ ಹೋಗಿದ್ದ (ಇವರ ಅಭ್ಯರ್ಥಿಯನ್ನು ಬೈದ, ಏನು ಮಾಡುವ ಹಾಗಿಲ್ಲ) ಈಗ ನಿಜವಾಗಿ ಗೆದ್ದ ಅಭ್ಯರ್ಥಿಯ ಕಡೆ ಸರಿದು ಜೈಕಾರ ಹಾಕಲು ಪ್ರಾರಂಭಿಸಿದ, ಕುಣಿದು ಕುಪ್ಪಳಿಸಿದ ಸಂಭ್ರಮದಲ್ಲಿ ಮುಳುಗಿದ ಯಾರೊ ಒಬ್ಬ ಹೂಮಾಲೆ ತಂದೂ ಹಾಕಿದರು.ಗುಲಾಲ ಬೇರೆ ಗುರುತು ಹಿಡಿಯುವವರು ಯಾರು ?. ಆಗ ಇವನಿಗೆ ತಾನು ಓದಿದ ಷೇಕ್ಸ್ ಪಿಯರ್ ನ ಮಾತು ನೆನಪಿಗ ಬಂದಿತು " Mob has no mind" ಎಂದು. ಅದೆ ತಾನೆ ಓದಿದ ಜ್ಯೂಲಿಯಸ್ ಸೀಜರನ ನಾಟಕ ನೆನಪಿಗೆ ಬಂತು ,ಬ್ರೂಟಸ್ ಸೀಜರನನ್ನು ಕೊಂದು ಹೇಳ್ತಾನೆ " ನಾನು ಸೀಜರನ ನನ್ನು ಯಾಕೆ ಕೊಂದೆ ಎಂದರೆ ಅವನೊಬ್ಬ ಸರ್ವಾಧಿಕಾರಿ ಆಗಿದ್ದ ಹಾಗಾಗಿ ಕೊಂದೆ" ಎಂದಾಗ ಜನ ಚಪ್ಪಾಳೆ ಹೊಡೆಯುತ್ತಾರೆ .ಅದೆ ಮಾರ್ಕ ಅಂಟೋನಿ ಬಂದು ಸೀಜರನನ್ನು ಗುಣಗಾನ ಮಾಡುತ್ತಾರೆ ಆವಾಗ ಮತ್ತೆ ಆದೆ ಜನ ಚಪ್ಪಾಳೆ ಹೊಡೆಯುತ್ತಾರೆ ಇದೆ ಅಲ್ಲವೆ ಜನ ಸಮೂಹ. ಅದೇನೆ ಇರಲಿ ಅಪ್ಪನನ್ನು ಒಪ್ಪಿಸಿ ಬಂದ ಪ್ರಕಾಶ ಸಪ್ಪೆ ಮಾಾರಿ ಮಾಡಿಕೊಂಡು ಮನೆ ದಾರಿ ಹಿಡಿಯಬೇಕಾಯಿತು. ಇದೆ ಅಲ್ಲವೆ ಜಗತ್ತು .ಹದಿನಾರನೆ ಶತಮಾನದಲ್ಲಿಯೂ ಇತ್ತು ,ಇಗೂ ಇದೆ. ಮುಂದೆಯೊ ಇರುತ್ತೆ ಬಿಡಿ.ಒಟ್ಟಾರೆ ರಾಜಕೀಯ ಅಂಟಿಸಿಕೊಳ್ಳದೆ ಬೆಳೆದು ಬಂದದ್ದೆ ಈತನ ಒಂದು ಸಾಧನೆ ನೀವೇನಂತಿರಿ ....
No comments:
Post a Comment