ಕೊರೋನಾ ಕಾಲದ ಈ ಸಂಕಟದ ಸಂದರ್ಭದಲ್ಲಿ ಏನಾದರೂ ಒಂದಷ್ಟು ಜಾಗೃತಿ ವಿಷಯ ಬರೆಯಬೇಕು ಅಂತ ಅನಿಸಿತು ಅದಕ್ಕೆ ನನ್ನ ಲೇಖನ ಪ್ರಾರಂಭಿಸುತ್ತಿದ್ಧೇನೆ. ಇದು ಒಂದು ಜಿಲ್ಲೆ, ರಾಜ್ಯ, ದೇಶದ ಸಮಸ್ಯೆ ಅಲ್ಲ ಇದು ಜಗತ್ತಿನ ಸಮಸ್ಯೆ ಹಾಗಾಗಿ ಯರೋ ಒಬ್ಬರನ್ನು ದೂರುತ್ತ ಕುಳಿತು ಕೊಳ್ಳುವ ಕಾಲುವು ಇದಲ್ಲ. ಅದು ನಮ್ಮ ಕೆಲಸವು ಅಲ್ಲ. ಹಾಗಾದರೆ ಒಬ್ಬ ನಿಷ್ಠಾವಂತ ಪ್ರಜೆಯಾಗಿ ನಮ್ಮ ಕರ್ತವ್ಯಗಳೇನು ಮತ್ತು ನನ್ನ ಕುಟುಂಬಕ್ಕಾಗಿ ನನ್ನ ಕರ್ತವ್ಯ ವೇನು ಎನ್ನುವುದು ನಮ್ಮ ಮೂಲ ಭೂತ ಪ್ರಶ್ನೆ, ಅದಕ್ಕಾಗಿ ಎರಡು ಮುಖ್ಯವಾದ ಘಟನೆ ಮುಂದೆ ಇಡಲು ಬಯಸುತ್ತೇನೆ .ಘಟನೆ ನಂಬರ ಒಂದು ಈಗ್ಗೆ ಒಂದೆರಡು ವರ್ಷ ಗಳ ಹಿಂದೆ ನಮ್ಮ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಸಹ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮಾನ್ಯ ಶ್ರೀ ವಾಯ್ ಎಚ್ ಇಲಾಳ ಸರ್ ಎರಡು ದಿನಗಳ ಹಿಂದಷ್ಟೇ ನನಗೆ ಪೋನ್ ಮಾಡಿ ಕುಶಲೋಪರಿ ಮಾತಾಡಿ ಕೊನೆಗೆ ಕೊರೋನಾದ ಕಟು ಸತ್ಯ ಬಿಚ್ಚಿಟ್ಟುರು " ಆದಷ್ಟು ಹುಷಾರಾಗಿ ಇರಬೇಕು ಗೌಡ್ರೆ ,ಸಾಧ್ಯ ವಾದಷ್ಟು ಮನೆಯಲ್ಲಿ ಇರಿ ಅಕಸ್ಮಾತ್ ಹೊರಗೆ ಹೋಗುವ ಅನಿವಾರ್ಯತೆ ಬಂದರೆ ಮಾಸ್ಕ ಅಂತೂ ಬಿಡುವ ಹಾಗೆಯೇ ಇಲ್ಲ. ಅದೆಷ್ಟೋ ಜನ ಉಸಿರಾಡುವ ತೊಂದರೆ ಯಿಂದ ಸಾಯಿತಾ ಇದ್ದರೆ ಎಂದರು ಅದಕ್ಕೆ ನಾನು ಹೇಳದೆ ಸರ್ " ನೀವು ನಿವೃತ್ತಿ ಯಾದ ಮೇಲೆ ನಿಸರ್ಗದ ಮಡಿಲಿಗೆ ಹೋಗಿದ್ದರಿ ನಿಮಗೆ ಅಂತಹ ಯಾವುದೇ ತೊಂದರೆ ಇಲ್ಲ ಬಿಡಿ (ತೋಟದಲ್ಲಿ ವಾಸವಾಗಿದ್ದಾರೆ) ಅದೆಲ್ಲ ನಗರ ವಾಸಿಗಳಿಗೆ ಅಂದೆ ಅದಕ್ಕೆ ಅವರು ಹೇಳಿದರು " ಕೇವಲ ನಮ್ಮದು ಅಲ್ಲ ಗೌಡ್ರೆ ನಮ್ಮವರೂ ಕೂಡಾ ಚೆನ್ನಾಗಿ ಇರಬೇಕು ಅಲ್ವಾ ಅದಕ್ಕೆ ಹುಷಾರಾಗಿ ಎಂದರು.ಏಕೆ ನಾನು ಈ ಮಾತನ್ನು ಇಲ್ಲಿ ಪ್ರಸ್ತಾಪ ಮಾಡಿದೆ ಎಂದರೆ ಪ್ರತಿಯೊಬ್ಬರಿಗೂ ತನ್ನದೇ ಅದ ಸರ್ಕಲ್ ಅಂತ ಇರುತ್ತೆ, ಅದರೊಳಗೊಂದು ಜಾಗೃತಿ ಬೀಜ ಹಾಕಿದರೆ ಅದು ಹೆಮ್ಮರವಾಗಿ ಬೆಳೆದು ಖಂಡಿತವಾಗಿಯೂ ಹೂ ಹಣ್ಣು ಕೊಡದೆ ಇರದು .ಮಾನ್ಯ ಶ್ರೀ ಇಲಾಳ ಸರ್ ಗೆ ನಮ್ಮಂತವರಿಂದ ಏನು ಆಗಬೇಕಿಲ್ಲ ಆದರೂ ಕೊಡ ಪೋನ್ ಹಚ್ಚಿ ಎಚ್ಚರಿಸಿದರು , ಕೇವಲ ನನಗೆ ಅಷ್ಟೇ ಅಲ್ಲ ತಮ್ಮ ಸರ್ಕಲ್ ಗಳಲ್ಲಿ ಬರುವವರಿಗೆ ಪೋನ್ ಹಚ್ಚಿದ ಬಗ್ಗೆಯೂ ಹೇಳಿದರು ಇದು ಜಾಗೃತಿ ಅಲ್ಲದೆ ಏನು ಹೇಳಿ ? ಇನ್ನೂಂದು ಘಟನೆ ಹೇಳಲು ಬಯಸುತ್ತೇನೆ ಈ ಪೂರ್ವ ದಲ್ಲಿ ನಾನು ಪ್ರೌಢ ಶಾಲೆ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೆ .ಅಲ್ಲಿ ಒಬ್ಬರು ಆದರ್ಶ ಗಣಿತ ಶಿಕ್ಷಕಿ ಇದ್ದರು.ಈ ಪದ ನಾನು ಏಕೆ ಬಳಸಿದೆ ಅಂದರೆ ನನ್ನ 27 ವರ್ಷದ ಸೇವೆಯಲ್ಲಿ ಅಂತಹ ಗುರಮಾತೆಯನ್ನು ನಾನು ಕಂಡಿಲ್ಲ ಅವರಿಗೆ ಆದರ್ಶ ಶಿಕ್ಷಕಿ ಪ್ರಶಸ್ತಿ ಸಿಕ್ಕಿದೆ ಆ ಮಾತು ಬೇರೆ. ಈಗ ಅವರು ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಅವರ ಬಗ್ಗೆ ಹೊಗಳುತ್ತೇನೆ ಅಂತ ಅಲ್ಲ ಸುಮಾರು ಇಪ್ಪತ್ತೈದು ವರ್ಷಗಳಿಂದ ಒಂದೆ ಊರಿನಲ್ಲಿ ಸೇವೆ ಸಲ್ಲಿಸಿ ಇಡಿ ಊರಿನ ಮನ್ನಣೆ ಪಡೆದಿದ್ದಾರೆ ಅಂತವರ ಬಗ್ಗೆ ಹೇಳುವುದೆಂದರೆ ವಜ್ರ ಹೊಳೆಯುತ್ತದೆ ಎಂದು ಹೇಳಲು ಹೊರಟ ಹಾಗೆ.ಇರಲಿ ಮುಖ್ಯ ವಿಷಯಕ್ಕೆ ಬರುತ್ತೇನೆ ಇಂದು ಬಹುತೇಕ ಜನ ಫೇಸ ಬುಕ್ ಬಳಸುತ್ತಾರೆ ಮತ್ತು ತಮ್ಮದೆ ಪ್ರೊಫೈಲ್ ಇಟ್ಟು ಕೊಳ್ಳುತ್ತಾರೆ .ಇಟ್ಟುಕೊಳ್ಳಿಲಿ ಬಿಡಿ, ಅದು ಅವರ ವೈಯಕ್ತಿಕ ವಿಚಾರ ಅದನ್ನು ಯಾರು ಪ್ರಶ್ನೆ
ಮಾಡಲು ಬರುವುದಿಲ್ಲ ಆದರೆ ಈಗ ನಾನು ಇದರ ಬಗ್ಗೆ ಏಕೆ ಹೇಳುತ್ತಿದ್ದೇನೆ ಎಂದರೆ ಇವತ್ತು ಅವರು ಪಾರವರ್ಡ ಮಾಡಿದ ಸಂದೇಶ ಮನಕಲಕುವಂತೆ ಇತ್ತು ಯಾವುದೇ ಪೂರ್ವಾಗ್ರಹ ಇಲ್ಲದೆ ಸಾಮಾಜಿಕ ಚಿಂತನೆ ಒಳಗೊಂಡಿತ್ತು. ಇನ್ನೂಂದು ,ಅವರು ಇವತ್ತು ಇಟ್ಟ ಪ್ರೊಫೈಲ್ ನನ್ನ ಮೇಲೆ ಅಗಾದ ಪರಿಣಾಮ ಬೀರಿತು. ತಕ್ಷಣವೇ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದೆ ಆ ಮಾತು ಬೇರೆ. ಆ ಪ್ರೊಫೈಲ್ ಸಂದೇಶ ಇಷ್ಟೇ ಜಗತ್ತಿಗೆ ಅಂದರೆ ಮನುಕುಲಕ್ಕೆ ಗಂಡಾಂತರ ಬಂದಾಗ ಮಾನವೀಯತೆಯನ್ನು ಹೊಂದಿರುವ ನಾಗರಿಕರು ಹೇಗೆ ವರ್ತಿಸಬೇಕೆನ್ನುವ ಸಂದೇಶ ಅದರಲ್ಲಿದೆ . ಒಟ್ಟಾರೆ ನಾವುಗಳು ಯಾವ, ಯಾವದೆ ಸಂದೇಶವನ್ನು ರವಾನೆ ಮಾಡದೆ ಒಂದಷ್ಟು ಜಾಗೃತಿ ಸಂದೇಶಗಳನ್ನು ಕಳುಹಿಸಿ ಸಂಕಷ್ಟ ದಲ್ಲಿರುವ ಮನಸ್ಸುಗಳಿಗೆ ಧೈರ್ಯ ತುಂಬುವ ಮತ್ತು ಜಾಗೃತಿ ಯುಂಟು ಮಾಡುವ ಅಳಿಲು ಸೇವೆ ನಮ್ಮ ದಾಗಬೇಕೆಂಬುದು ನನ್ನ ಬರಹದ ಉದ್ದೇಶ. ವಂದನೆಗಳು ಎಲ್ಲರಿಗೂ . ಜಾಗೃತಿ ಯಿಂದ ಇದ್ದು ಈ ಸಂಕಷ್ಟದ ಸಂದರ್ಭದಲ್ಲಿ ಪಾರಾಗೋಣ.
No comments:
Post a Comment