Sunday, May 23, 2021

Ramesh video comment

* ಬದುಕಲು ಬೇಕು
ಬದುಕುವ ಮಾತು *

  ಸ್ನೇಹಿತರೆ ,ಇಂದು ಚಿತ್ರರಂಗದ ಹೆಸರಾಂತ ನಟ ರಮೇಶ್ ರವರ ವಿಡಿಯೋ ನೋಡುವ ಅವಕಾಶ ನನಗೆ ಸಿಕ್ಕಿತುಹೇಗೆಂದರೆ ನನ್ನ ಸ್ನೇಹಿತರು,ಸಾಹಿತಿಗಳು ಹಾಗೂ ಸಾಹಿತ್ಯ ಅಕಾಡಮಿ ಸದಸ್ಯರು ಆದ ಶ್ರೀ ಸಿದ್ದಲಿಂಗಪ್ಪ .ಬೀಳಗಿಯವರು ಪಾರವರ್ಡ ಮಾಡಿ

ಹೀಗೆ ಬರೆದಿದ್ದರು " ಸಮಾಧಾನಕ್ಕಾಗಿ ಕೇಳಿ, ಸಾವಧಾನದಿಂದ ಕೇಳಿ " ಎಂಬ ತಲೆಬರಹದಲ್ಲಿ ಕಳುಹಿಸಿದ್ದರು.ಅದನ್ನು ಸಾವಧಾನವಾಗಿ ಕೇಳಿ ಬಂದ ಕೆಲವು ವಿಚಾರಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾಯಿತು, ಅದನ್ನು ನನ್ನದೆ ಆದ ಶೈಲಿಯಲ್ಲಿ  ಹಂಚಿಕೊಳ್ಳುತ್ತಿದ್ದೇನೆ.

      "ಎಂತಹದೆ ಸಂದರರ್ಭದಲ್ಲಯೂ ನಮ್ಮ ಮೂಡ್ ಹಾಳು ಮಾಡಿಕೊಳ್ಳಬಾರದು"ಒಂದು  ಕ್ಷಣ ಮೂಡ್ ಹಾಳಾದರೆ  ಮುಂದಿನ 24 ಗಂಟೆಯ ಸಂತೋಷ ಹಾಳಾಗುತ್ತದೆ.ಇದು  ಬೇಕಾ ? ಕೆಲವು ಜನರು ಇರುತ್ತಾರೆ ಹೆಂಡತಿ ಅನ್ನಕ್ಕೆ  ಉಪ್ಪು ಸ್ವಲ್ಪ  ಹೆಚ್ಚು ಹಾಕಿದರೂ ಸಿಡಮಿಡಿ ಗೂಂಡು ತಮ್ಮ  ಮೂಡ್  ಹಾಳ ಮಾಡಿಕೊಳ್ಳುತ್ತಾರೆ.

"ಎಲ್ಲರೊಳಗೊಂದಾಗು ಮಂಕುತಿಮ್ಮ"ಜನರನ್ನು  ಮೆಚ್ಚಿಸುವದು ಆ ಜನಾರ್ದನಿಂದನೂ ಸಾಧ್ಯವಾಗುದಿಲ್ಲ” ಎನ್ನುವ ಮಾತೊಂದು ಇದೆ ಯಾರನ್ನೂ ಮೆಚ್ಚಿಸಲು ನಾವು ನಮ್ಮ ಅತಿಯಾದ ಶ್ರಮ ಹಾಕಬೇಕಿಲ್ಲ ಮತ್ತು ಒಂದು ಸಣ್ಣ ತಪ್ಪು ನಡೆದರೆ ಜಗತ್ತೆ ಮುಳಿಗಿದ ಹಾಗೆನೂ ವರ್ತಸವ ಅವಶ್ಯಕತೆಯೂ ಇಲ್ಲ, ನಾವು ನಮ್ಮ ಸರಿಯಾದ ದಾರಿಯಲ್ಲಿ ಇದ್ದರೆ ಸಾಕು ತಾವಾಗಿಯೆ ಮೆಚ್ಚುತ್ತಾರೆ. ಮೆಚ್ಚದಿದ್ದರೆ ಬಿಡಲಿ ಬಿಡಿ ! ಆಗುವದಾದರು ಏನು ? ಇನ್ನು ನಮ್ಮನ್ನು ವಿರೋಧಿಸುವವರು ಇರಬಹುದು ! ಅವರು ನಾವು ಕೆಟ್ಟದ್ದನ್ನು ಮಾಡಿದರೆ ವಿರೋಧಿಸಬೇಕೆಂದೂನು ಇಲ್ಲ ಒಳ್ಳೆಯದನ್ನು ಮಾಡಿದರೂ ವಿರೋಧಿ ಸುತ್ತಾರೆ. ವಿರೋಧಿಸುತ್ತಲೆ ಇರಬೇಕು ನಮ್ಮನ್ನು ಸರಿ ದಾರಿಯಲ್ಲಿ ಎತ್ತರಕ್ಕೆ ಬೆಳೆಸುವವರು ಅವರೆ ! ನಮ್ಮನ್ನು ವಿರೋಧಸುತ್ತಾರೆ ಎಂದರೆ ನಾವು ಅವರಿಗಿಂತ ಮುಂದೆ ಇದ್ದೇವೆ ಎಂದೆ ಅರ್ಥ !  ನಾವು ಮುಂದೆ ಹೋಗತಾ ಇರಬೇಕು ಅವರು ವಿರೋಧಿಸುತ್ತಲೆ ಇರಬೇಕು'ನಮ್ಮನ್ನು ಸರಿ ದಾರಿಯಲ್ಲಿ ನಡೆಸಿ ಎತ್ತರಕ್ಕೆ ಏರಿಸುವವರು ಅವರೆ !  ಹಾಗಾಗಿ ಪ್ರಾಜ್ಞರು ಹೇಳಿದ್ದು "ನಿಂದಕರು ಇರಬೇಕು ಹಂದಿಯ ಹಾಗೆ " ಇನ್ನು  ನಮ್ಮ ಸುತ್ತ ಇರುವವರೂ  ಕೂಡಾ ಕೃತ್ರಿಮ ಬಂಧು, ಬಳಗ, ಸ್ನೇಹಿತರು ಆಗಿರಬಾರದು, ಬದಲಾಗಿ  ನಮ್ಮ ಗುಣ ನಡತೆ ನೆಚ್ಚಿ ಬಂದವರಾಗಿರಬೇಕು. ಒಂದು ವೇಳೆ ಬರದಿದ್ದರೆ ಚಿಂತೆ ಮಾಡಬೇಕಾಗಿಲ್ಲ . ಅವಕಾಶಕ್ಕಾಗಿ ಸುತ್ತುವ ಬಹಳಷ್ಟು  ಬಂಧು ಬಳಗ  ಸ್ನೇಹಿತರಗಿಂತ ಬಂದುಗಳಿಲ್ಲದೆ ಒಬ್ಬಂಟಿಯಾಗಿರವುದೆ ಲೇಸು....!  ಯಾರನ್ನೊ ಮೆಚ್ಚಿಸಲು ಬದುಕುವದಕ್ಕಿಂತ ಮೆಚ್ಚಿ ಬಂದ ಕೆಲವರನ್ನು ದೇವರೆಂದು ಭಾವಿಸಿ ಅವರಿಗಾಗಿ ಬದುಕುವದರಲ್ಲೆ ನಿಜವಾದ ಸಂತೋಷ ವಿರುವುದು. ಬದುಕುವಾಗ ಬೇರೆಯವರು ಏನು ಅಂತಾರೆ, ಒಪ್ಪತಾರ , ಒಪ್ಪೊದಿಲ್ಲವಾ ಎನ್ನುವ ಗೊಂದಲವಂತು ಸದಾ ಪ್ರತಿಯೊಬ್ಬನಿಗೂ ಇದ್ದೆ ಇರುತ್ತೆ. ಇದು ಸಹಜವು ಕೂಡಾ ಹೌದು. ಸ್ನೇಹಿತರಾಗಲಿ ಅಥವಾ ನೆರೆ ಹೊರೆಯವರಾಗಲಿ ಅವರು ಕೊಡುವ ವಿಮರ್ಶೆಯು ಅದು ಒಳ್ಳೆಯದೋ ಅಥವಾ ಕಟ್ಟದ್ದೋ..ಮುಖ್ಯವಲ್ಲ , ಒಬ್ಬ ವ್ಯಕ್ತಿಯು ಮನ್ನುಗ್ಗಲು ಇಲ್ಲವೆ ಹಿಂದೆ ಸರಿಯಲು ಕಾರಣವಾಗುತ್ತದೆ.  ಕೆಲವೊಮ್ಮೆ ಒಬ್ಬ ವ್ಯಕ್ತಿಯು ಬೆಳೆಯಲು ಕಾರಣವಾಗುವ ವಿಮರ್ಶೆ ,ಅದು ಆತನ ಪ್ರಗತಿಗೆ ಊರುಗೋಲಾಬೇಕು ವಿನಹ ಜಾರಿ ಬೀಳುವ ಬಂಡೆಯಾಗಬಾರದು. ಇದರ ಅರ್ಥ ತಪ್ಪು ಇದ್ದದ್ದನ್ನು ಸರಿಯಾಗಿದೆ ಎಂದು ಹೇಳುವದಲ್ಲ ಬದಲಾಗಿ ಅದನ್ನು ನವಿರಾಗಿ ಮೈದಡವಿ ಮನವರಿಕೆ ಮಾಡಬೇಕು, ಅದು ಎಲ್ಲಾ ರಂಗಕ್ಕೂ ಅನ್ವಯಿಸುವ ವಿಧಾನ ಅದು ಶಿಕ್ಷಣದ ರಂಗದಲ್ಲಿ ಗುರು ಶಿಕ್ಷಣ ನೀಡುವದಾಗಿರಬಹುದು ಅಥವಾ  ತಂದೆ ತನ್ನ ಮಗುವನ್ನು ಬೆಳೆಸುವಾಗಲಾದರೂ ಆಗಿರಬಹುದು. ಬೆಳವಣಿಗೆ ಇದು ನಿರಂತರವಾಗಿ ನೆಡೆಯುವ ಪ್ರಕ್ರಿಯೆ. ತೀರಾ ಕಾಡು ಸ್ಥಿತಿಯಲ್ಲಿ ಇದ್ದ ಮಾನವ ಸ್ಥಿತಿಗೆ ಬಂದು ತಲುಪಲು ಹಲವಾರು ಏಳು ಬೀಳುಗಳನ್ನು ಕಂಡೆ ಇಲ್ಲಿ ಬಂದು ನಿಂತದ್ದು ಇದರಲ್ಲಿ ತಿದ್ದುವಿಕೆ ನಿರಂತವಾಗಿ ನಡೆಯುತ್ತಲೂ ಬಂದಿದೆ, ತಿದ್ದಲ್ಪಡುವ ವ್ಯಕ್ತಿ ತಿದ್ದುವ ವ್ಯಕ್ತಿಯನ್ನು ಸ್ವೀಕರಿಸುವ ರೀತಿಯೂ ಕೂಡಾ ವ್ಯಕ್ತಿ ಬೆಳವಣಿಗೆಗೆ ಕಾರಣವಾಗುತ್ತದೆ .ವ್ಯಕ್ತಿ ಬೆಳವಣಿಗೆ ಸಂದರ್ಭದಲ್ಲಿ ವಿಮರ್ಶೆ ಯನ್ನು ಸಮಚಿತ್ತದಿಂದ ಸ್ವೀಕರಿಸಬೇಕಾಗುತ್ತದೆ ಅಂದರೆ ಬರುವ ಟೀಕೆ ಟಿಪ್ಪಣಿಗಳನ್ನು ಧನಾತ್ಮಕ ಚಿಂತನೆಯಿಂದ ನೋಡಬೇಕು. ಒಂದು ವೇಳೆ ನಾವಿಡುವ ಹೆಜ್ಜೆಯನ್ನು  ನಮಗರಿವಿಲ್ಲದೆ ತಪ್ಪಾಗಿ ಇಟ್ಟಿದ್ದರೆ ಬರುವ ಟೀಕೆ ಟಿಪ್ಪಣಿಗಳನ್ನು ಪ್ರಾಂಜಲ ಮನಸ್ಸಿನಿಂದ ಸ್ವೀಕರಿಸಬೇಕು, ಜಾಡಿ ಹಿಡಿದು ಪೂರಕವಾದವುಗಳನ್ನು ಆಯ್ದು ಅವುಗಳನ್ನು ಬೆಳವಣಿಗೆಗೆ ಹೇಗೆ ಪೂರಕವಾಗಿವೆ ಎನ್ನುವುದುದನ್ನು ನಿರ್ಧರಿಸಿ ಕಾರ್ಯ ಪ್ರವೃತ್ತರಾಗಬೇಕು. ಇತ್ತೀಚಿನ ದಿನಗಳಲ್ಲಿ ಸಮೂಹ ಮಾಧ್ಯಮಗಳಲ್ಲಿ ಬಹು ವ್ಯಾಪಕವಾಗಿ ಕಂಡು ಬರುವ ಲೈಕ ಮತ್ತು ಡಿಸ್ ಲೈಕಗಳು (ವಿಮರ್ಶೆ ) ಜೋರಾಗಿ ನಡೆಯುತ್ತಿವೆ ಇದು ವ್ಯಕ್ತಿಯೊಬ್ಬನ ನಡೆಯನ್ನು ನೋಡುಗ ಗಮನಿಸುವ ಮತ್ತು ಮಾರ್ಗದರ್ಶನ ಮಾಡುವ ಬಹು  ವ್ಯಾಪಕವಾದ ಪ್ರತಿಕ್ರಿಯೆ. ಹಿಂದಿನ ಕಾಲದಲ್ಲಿ ವ್ಯಕ್ತಿಯೊಬ್ಬನ ನಡೆಯನ್ನು ಗುರುತಿಸುವ ,ನಿರ್ದರಿಸುವ ಮಾಪನ ಬಹು ಕಡಿಮೆಯಾಗಿತ್ತು ಅಂದರೆ ಸೀಮಿತ ವಲಯದಲ್ಲಿ ನಡೆಯುತ್ತಿತ್ತು ಕೆಲವೆ ಕೆಲವರು ನೀಡುವ ಲೈಕ್ ಮತ್ತು ಡಿಸ್ ಲೈಕಗಳಿಂದ ತನ್ನ ನಡೆಯನ್ನು ನಿರ್ದರಿಸಬೇಕಾಗಿತ್ತು, ಇದು ವ್ಯಕ್ತಿಯೊಬ್ಬನು ತೆಗೆದುಕೊಳ್ಳುವ ನಿರ್ಧಾರಕ್ಕೆ ಕಾರಣವಾಗಿ ವ್ಯಕ್ತಿ ವಿಕಸನಕ್ಕೆ ಅಡತಡೆಯಾಗುತ್ತಿತ್ತು. ಈಗ ಹಾಗಿಲ್ಲ ನಿರ್ಧಾರ ಹಾಗೂ ನಿರ್ಣಯ ತೆಗೆದು ಕೊಳ್ಳುಲು ವ್ಯಾಪಕವಾದ ಅವಕಾಶವುಂಟು, ಆದರೆ ಬರುವ ಸಾಕಷ್ಟು ವಿಮರ್ಶೆ, ಟೀಕೆ, ಟಪ್ಪಣೆಗಳ ನೈಜತೆಯನ್ನು ಗುರುತಿಸವುದು ಅಷ್ಟೆ ಮುಖ್ಯ. ಅದು ನಿರ್ದರಿಸುವವನ ಸಾಮರ್ಥ್ಯ ವನ್ನು ಅವಲಂಬಿದೆ, ಆತ ವಿಶ್ಲೇಷಿಸವ, ಆಯ್ದುಕೊಳ್ಳುವ, ನಿರ್ಣಯಿಸುವ ಪರಿ ಸರಿಯಾದ ನಿಟ್ಟಿನಲ್ಲಿ ಸಾಗಬೇಕು.ಅಂದರೆ ನಾವು ನಾವಾಗಿರಬೇಕು ಕ್ಷಣಕ್ಷಣಕ್ಕೂಜೀವನದಲ್ಲಿ  ಬರುವ ಲೈಕ್ ಮತ್ತು ಡಿಸ್ ಲೈಕಗಳಗೆ  ವಿಚಲಿತರಾಗಬಾರದು ಅಂದರೆ ನಮ್ಮ ಮೂಡ್ ಯಾವಾಗಲೂ  ಹಾಳು ಮಾಡಿಕೊಳ್ಳಬಾರದು. ಒಂದು ಕ್ಷಣದಲ್ಲಿ ಹಾಳಾದ ಮೂಡು 24 ಗಂಟೆ ಅಮೂಲ್ಯ ಸಮಯವನ್ನು ನುಂಗಿ ಹಾಕುತ್ತದೆ. ಇಂತಹ ಸಂದೇಶ ಹೊತ್ತು ತಂದ ವಿಡಿಯೋ  ಮನಸ್ಸನ್ನು ಗಟ್ಟಿಗೊಳಿಸುಲು ಇರುವ ಸೈಕೋಥೆರಪಿಯಾಗಿತ್ತು.

 

ಧನ್ಯವಾದಗಳು ರಮೇಶ್ ಸರ್ ಗೆ ಮತ್ತು ಕಳುಹಿಸಿದ ಸಿದ್ದಲಿಂಗಪ್ಪ ಬೀಳಗಿ ಯವರಿಗೆ

 

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...