ನನಗೆ ಈಗ ಇಪ್ಪತ್ತೇಳು ವರ್ಷದ ಬೋಧನಾನುಭವ, ವಯಸ್ಸು ಐವತ್ಮೂರು ಮುಗಿದು ಐವತ್ನಾಲ್ಕನೆ ವರ್ಷದ ತುದಿ ತಲುಪಲು ಕಾಲ ದಾಪುಗಾಲು ಹಾಕಿ ಓಡುತ್ತಿದೆ, ಹಿಡಿದು ನಿಲ್ಲಿಸಲು ಸಾಧ್ಯವೆ ? ಓಡಲಿ ಬಿಡಿ, ಉಳಿದ ಅವಧಿಯನ್ನು ಸಾಧ್ಯವಾದ ಮಟ್ಟಿಗೆ ಆನಂದಿಸಿದರಾಯಿತು.ಬೋಧಿಸುವ ಕೆಲಸ ಉಳಿದ ಕೆಲಸಗಳಿಗಿಂತ ಸಂತಸದ ಮತ್ತು ಸರಳವಾದದ್ದು ಅಂತ ನನ್ನ ಭಾವನೆ ಆದರೆ ಕೆಲವು ಜನರಿಗೆ ಆನಂದಿಸಲು ಪುರಸತ್ತು ಸಿಗದಿರಬಹುದು ಕಾರಣವೆಂದರೆ ಅವರಿಗೆ ಕಾರು ಇಲ್ಲದಿರಬಹುದು, ದೊಡ್ಡದಾದ ಬಂಗಲೆ ಇರಲಿಕ್ಕಿಲ್ಲ,ಸಂಬಳ ಕಡಿಮೆ ಇರಬಹುದೆಂದು ಭಾವಿಸಿರಬಹುದು ಇತ್ಯಾದಿ. ಆದರೆ ಕೆಲವರಿಗೆ ಅವುಗಳು ಯಾವುದು ಇರದಿದ್ದರೂ ಸಂತೋಷದಿಂದ ಇರುವುದನ್ನು ನಾನು ನೋಡಿದ್ದೇನೆ ಅಂತವರ ಪಾಲಿಗೆ ನನ್ನನ್ನು ಸೇರಿಸಿದರೆ ತಪ್ಪಾಗಲಿಕ್ಕಿಲ್ಲ ಇಲ್ಲಿಯವರೆಗೆ ನಾನು ಈ ಪೀಠಿಕೆ ಯಾಕೆ ಹಾಕಿದೆ ಎಂದರೆ ಬೋಧನೆಯ ಅವಧಿಯಲ್ಲಿಯ ಒಂದು ಅನುಭವ ಹಂಚಿಕೊಳ್ಳುವ ಮನಸ್ಸಾಯಿತು ಅದಕ್ಕಾಗಿ ಹೇಳಿದೆ ಅಷ್ಟೆ .ಅದನ್ನು ಬಿಟ್ಟರೆ ಮತ್ತೆ ಯಾವುದೆ ಉದ್ದೇಶ ನನ್ನಲ್ಲಿ ಇಲ್ಲ. ನಾನು ಇತಿಹಾಸ ಪಾಠ ಮಾಡುವ ಉಪನ್ಯಾಸಕ .ಅದು ಬಹಳ ಸರಳ ವಿಷಯ ,ಅದಕ್ಕೆ ಎಕ್ಸ್ಟ್ರಾ ಪಾಠ ಮಾಡಿ ಕಲಿಸುವ ಪ್ರಮೆಯ ಬರುವದು ಕಡಿಮೆ. ಆದರೆ ನಾನು ಮಾತ್ರ ಪಠ್ಯಕ್ರಮ ಮುಗಿಸಲು ರವಿವಾರ ಕ್ಲಾಸ್ ಹಾಕುತ್ತಿದ್ದೆ ನೂರಕ್ಕೆ ನೂರು ವಿದ್ಯಾರ್ಥಿಗಳು ಬಾರದೆ ಹೋದರು 75 ಪ್ರತಿಶತ ವಿದ್ಯಾರ್ಥಿಗಳು ಹಾಜರಾಗುತ್ತಿದ್ದರು ಅದೂ ಸಂತೋಷದ ವಿಷಯವೆ ಹೌದು. ಯಾಕೆಂದರೆ ಮನೆಯಲ್ಲಿ ಓದಿದರೆ ಆಯಿತು ಅಂದರೆ ಏನು ಮಾಡುವುದು ? ಅಂತೂ ಅಂದು ರವಿವಾರ ಬಂದೆ ಬಿಟ್ಟಿತು ಕ್ಲಾಸ್ ತೆಗೆದುಕೊಳ್ಳುವ ಸಲುವಾಗಿ 9.00 ಗಂಟೆಗೆ ರಡಿಯಾಗಿ ಕಾಲೇಜು ಕಡೆ ಮುಖ ಮಾಡಿ ಲಗುಬಗೆಯಿಂದ ಹೋಗುತ್ತಿದ್ದೆ ಆವಾಗ ನಮ್ಮೂರಿನ ವ್ಯಕ್ತಿ ಬೇಟಿಯಾಗಬೇಕೆ ! ಬಹಳ ದಿವಸಕ್ಕೆ ಬೇರೆ ಭೇಟಿಯಾಗಿದ್ದ ಹೀಗಾಗಿ ಕೆಲವು ಕುಶಲೋಪರಿ ವಿಚಾರಿಸಲು ಒಂದು ಹತ್ತು ನಿಮಿಷ ಮಾತಾಡಿದೆ. ಒಂದು ವೇಳೆ ಅವರಿಗಾಗಿ ಒಂದಷ್ಟು ಸಮಯ ಕೊಡದಿದ್ದಲ್ಲಿ ಏನು ತಿಳಿದಾರು ಎನ್ನುವ ಭಯದಿಂದ ಸಮಯ ಕಳೆದಿರಬಹುದು, ಇದು ಸರಿಯೋ ತಪ್ಪೊ ಅದು ಬೇರೆ ಮಾತು. ಕಾಲೇಜು ಕಂಪೌಂಡು ದಾಟಿ ಕಾಲೇಜು ಒಳ ಪ್ರವೇಶ ಮಾಡುವದಕ್ಕೂ ಕೆಲ ವಿದ್ಯಾರ್ಥಿಗಳು ಕ್ಲಾಸ್ ಒಳಗಡೆ ನಡೆಯ ಹತ್ತಿದರು ಅದರಲ್ಲಿ ಒಬ್ಬ ಹುಡುಗ ಒಳಗೆ ಇರುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ "ಹಿಟ್ಲರ್ ನ ಆಗಮನ" ಎಂದು ಜೋರಾಗಿ ಚೀರಿದ ಹುಡುಗರೆಲ್ಲಾ ನಗುತ್ತಾ ಪಾಠಕ್ಕಾಗಿ ತಮ್ಮ ತಮ್ಮ ಆಸನದ ಕಡೆ ಕುಳಿತು ಕೊಳ್ಳಲು ರಡಿಯಾದರು, ನಾನು ಮಾತ್ರ ಸೀದಾ ಸ್ಟಾಪ್ ರೂಮ್ ಗೆ ಹೋಗಿ ಚಾಕ್ ಪೀಸ್ ಡಸ್ಟರ್ ನೊಂದಿಗೆ ವರ್ಗ ಕೊನೆಗೆ ಹಾಜರಾದೆ. ಕರ್ನಾಟಕದ ಏಕೀಕರಣದ ಮಜಲುಗಳನ್ನೂ ಹೇಳಲು ಪ್ರಾರಂಭಿಸಿದೆ ! ...(ಯಾವುದನ್ನು ಕೇಳದವನ ರೀತಿ) ಪಾಠವನ್ನು ಮನಮುಟ್ಟುವಂತೆ ಮಾಡಿದೆ.ಹುಡುಗರು ತಿಳಿದುಕೊಂಡದ್ದೆ ಬೇರೆ , (ಹಿಟ್ಲರ್ ಎಂದು ಕೂಗಿದ ಹುಡುಗನ ಹೆಸರು ಗೊತ್ತಿಲ್ಲ ಆಡ್ರೆಸ್ ಇವತ್ತಿಗೂ ನೆನಪಿದೆ ಬಡಿಗೇರ ಅಂತ) ..ಹುಡುಗರು ತಿಳಿದು ಕೊಂಡುದ್ದು ..ಸರ್ ಕೇಳಿರುತ್ತಾರೆ ಆ ಹುಡುಗನನ್ನು ಬೈದರೆ ಮಜಾ ತೆಗೆಕೊಳ್ಳುವ ವಿಚಾರದಲ್ಲಿ ಇದ್ದಿರಬಹುದು". ಆದರೆ ಆದದ್ದೆ ಬೇರೆ ನಾನು ಪಾಠ ಮಾಡಲು ಪ್ರರಂಭಿಸಿದೆ " ಟಿಪ್ಪುವಿನ ಮರಣದ ನಂತರ ಮೈಸೂರು ಹಂಚಿಹೋದ ಬಗೆ ಅದನ್ನು ಒಂದುಗೂಡಿಸಲು ಕರ್ನಾಟಕದ ನಾಯಕರು ಪರಿಶ್ರಮ ...ಎಳೆ ಎಳೆಯಾಗಿ ಬಿಡಿಸಿ ಹೇಳಿದೆ ವಿದ್ಯಾರ್ಥಿಗಳು ಮನಸ್ಸಿನಲ್ಲಿ ಏನೊ ಒಂದು ತರಹ ಸಂತೃಪ್ತಿಯನ್ನು ಕಂಡ ಭಾವ. ಕ್ಲಾಸ್ ನ ಚಿತ್ರಣವೆ ಬದಲಾಗಿ ಹೋಗಿತ್ತು .ಅವರ ತಲೆಯಲ್ಲಿ ಬರಿ ಕರ್ನಾಟಕದ ಏಕೀಕರಣ ಒಂದೆ ತಿರುಗಾಡುತ್ತಿತ್ತು .ಹುಡುಗ ಕೂಗಿದ ಶಬ್ದ ಸಮಾದಿಯಾಗಿತ್ತು.ಇದಕ್ಕೆ ಸಂವಾದಿಯಾಗಿ ಇನ್ನೊಂದು ಘಟನೆಯನ್ನು ಹೇಳಲು ಬಯಸುತ್ತೇನೆ. ಅದೇನೆಂದರೆ ನಮ್ಮದೆ ಸಂಸ್ಥೆಯ ಒಬ್ಬರು ಉಪನ್ಯಾಸಕರು ಇದ್ದರು ಅವರು ಅಜಾನುಬಾಹು ವ್ಯಕ್ತಿ ಹೆಸರು ಬೇಡ ಅವರ ಗಾತ್ರ ನೋಡಿ ಅವರಿಗೆ ಗಜ ಎಂಬ ಹೆಸರನ್ನು ಇಟ್ಟಿದ್ದರು ಅದು ಕಾಲೇಜಿನ ವಿದ್ಯಾರ್ಥಿಗಳೆಗೆ ಅಷ್ಟೆ ಅಲ್ಲದೆ ಆ ವಿಷಯ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೂ ಹಂಚಿ ಹೋಗಿತ್ತು. ಒಂದು ದಿನ ಅವರು ಬರುವಾಗ ಆ ಕಾಲೇಜಿನಲ್ಲಿ ಇರುವ ಪ್ರೌಢಶಾಲಾ ಹುಡುಗರ ಗಜ ಗಜ ಎಂದು ಸೂಕ್ಷ್ಮವಾಗಿ ಕೂಗಬೇಕೆ ? ಅದನ್ನು ಉಪನ್ಯಾಸಕರು ಕೇಳದಂತ ಜಾಣ ಕುರುಡು ಮಾಡಿದ್ದರೆ ಸರಿಯಾಗುತ್ತಿತ್ತೇನೊ ! ಹುಡುಗರನ್ನು ನಿಲ್ಲಿಸಿ ಹಿಗ್ಗಾ ಮುಗ್ಗಾ ಬೈದು ತರಾಟೆಗೆ ತೆಗೆದುಕೊಂಡು ತಮ್ಮ ಪ್ರತಾಪ ತೋರಿಸಿ ಬಿಟ್ಟರು.ಆದರೆ ಅವರು ಮೊದಲೆ ತಮಗೆ ಸಂಬಂಧವಿಲ್ಲದ ಹೈಸ್ಕೂಲ್ ವಿದ್ಯಾರ್ಥಿಗಳು ಬೇರೆ.. ಬೈದು ಮುಂದೆ ನಡೆಯುವುದು ಒಂದೆ ಬಾಕಿ, ಹುಡುಗರೆಲ್ಲ ಜೋರಾಗಿ ಗಜ ಗಜ ಎಂದು ಜೋರಾಗಿ ಕೂಗಿ ಉಪನ್ಯಾಸಕರಿಗೆ ಇರುಸು ಮುರುಸು ಉಂಟು ಮಾಡಿದರು.ನಾವು ವಸ್ತುಗಳ ಜೊತೆ ಬದುಕುವವರಲ್ಲ ಬದಲಾಗಿ ಜೀವಂತ ಮೂರ್ತಿಗಳ ಜೊತೆ ಬದುಕಿ ಬದುಕು ಕಟ್ಟಿಕೊಡುವವರು ನಮಗೆ ಯಾವುದು ಮುಖ್ಯ ಅಮುಖ್ಯ ಎನ್ನುವುದು ತಿಳಿದಿರಬೇಕು ಹಾಗಾಗಿ ಅವರು ನಮಗೆ ಹೆಸರು ಇಟ್ಟಿದ್ದಾರೆಂದರೆ ಅದು ಪರಿಣಾಮ ದಿಂದಾಗಿಯೆ ಇರುತ್ತದೆ. ಹಿಟ್ಲರ್ ಎಂದರೆ ಕ್ರೂರ ಸರ್ವಾಧಿಕಾರಿ ಎಂದು ಎಲ್ಲರಿಗೂ ಗೊತ್ತು ಆದರೆ ಅವನ ಜೀವನ ಚರಿತ್ರೆ ಪುಟಗಳನ್ನು ನೋಡಿದರೆ ಬಹಳಷ್ಟು ಸಂಕಷ್ಟದ ಬದುಕು ಸಾಗಿಸಿದವನು ಸೈನಿಕನಾಗಿ ಸೇವೆಗೆ ಸೇರಿ ಒಂದನೇ ಮಹಾಯುಧ್ಧದ ನಂತರ ವಜಾಗೊಂಡು ಮನೆ ಮನೆಯ ಬಣ್ಣ ಬಳಿದು ಜೀವನ ಸಾಗಿಸಿ ಛಲದಿಂದ ಜರ್ಮನಿಯ ಸರ್ವಾಧಿಕಾರಿ ಯಾದವನು .ಶಿಸ್ತಿನ ಇನ್ನೊಂದು ಹೆಸರಾಗಿದ್ದ ಆತ ಜಗತ್ತಿನ ನಕಾಶೆ ಬದಲಿಸಲು ಹೋಗಿ ದುರಂತದ ಸಾವು ಕಂಡವನು.ಅದೇನೆ ಇರಲಿ ಆತ ಕೆಟ್ಟವನಾದರು ಅತನಲ್ಲಿರುವ ಛಲ ಮತ್ತು ಶಿಸ್ತನ್ನು ನನ್ನ ವಿದ್ಯಾರ್ಥಿಗಳು ನನ್ನ ಲ್ಲಿ ಕಂಡಿರಬಹುದೆಂದು ನಾನು ಭಾವಿಸಿದ್ದೆನು. ಯಾವದೆ ಒಂದು ನಾಟಕದಲ್ಲಿ ವಿಲನ್ ಪಾತ್ರ ಮಾಡಿದ ಒಬ್ಬರನ್ನು ನಾಟಕ ಮುಗಿದ ಮೇಲೆ ಪ್ರೇಕ್ಷಕರಾಗಿ ಕುಳಿತು ಸ್ತ್ರೀ ಯರು ಬಡಿಯಲು ಹೋಗಿದ್ದರಂತೆ ಕಾರಣ ನಾಟಕದ ನಾಯಕಿ ನಟಿಯನ್ನು ಆತ ಭಯಂಕರ ವಾಗಿ ಕಾಡಿ ಗೋಳು ಹೊಯ್ದುಕೊಂಡಿದ್ದನಂತೆ. ಆಗ ಪಾತ್ರದಾರಿ ನಾಟಕದಲ್ಲಿ ವ್ಹಿಲನ್ ಪಾತ್ರ ಮಾಡಿದ್ದು ಸಾರ್ಥಕವಾಯಿತು ಎಂದನಂತೆ. ಒಟ್ಟಾರೆಯಾಗಿ ಬೋಧಕನ ಬೋಧನೆ ಸಾರ್ಥಕವಾಗಬೇಕಾದರೆ ಆತನು ಮಕ್ಕಳ ಮೇಲೆ ವಿಷಯದ ಬೋಧನೆಯ ಜೊತೆಗೆ ವಿದ್ಯಾರ್ಥಿಗಳಲ್ಲಿ ಪರಿಣಾಮಕಾರಿ ಬದಲಾವಣೆ ತರುವಂತಿರಬೇಕು .
Subscribe to:
Post Comments (Atom)
"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"
ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...
-
🌺 ಪ್ರಿಯ ಮಿತ್ರರೇ 💐🙏 ಭಾರತದ ಇತಿಹಾಸದಲ್ಲಿ ಗುಪ್ತರ ಕಾಲವನ್ನು "ಸುವರ್ಣಯುಗ" ಎಂದು ಕರೆಯಲಾಗುತ್ತದೆ, ಆದ್ದರಿಂದ ಕೆಎಎಸ್, ಪಿಎಸ್ಐ, ಇಎಸ್ಐ, ಎಸ್ಡಿಎ, ...
-
ಬಸವೇಶ್ವರರ ಸಾಮಾಜಿಕ –ಧಾರ್ಮಿಕ ಸುಧಾರಣೆಗಳು ಬಸವೇಶ್ವರರು ಬಾಗೆವಾಡಿಯಲ್ಲಿ ಮಾದರಸ ಮಾದಲಾಂಬಿಕೆಯ ಮಗನಾಗಿ ಜನಿಸಿ ಜಾತವೇದ ಮುನಿಗಳಲ್ಲಿ ವಿದ್ಯಾಭ್ಯಾಸ ಮಾಡಿ ಬಿಜ್ಜಳನ ಆಸ...
-
ಅಕ್ಬರನ ಸಾಧನೆಗಳು ಮೊಗಲರ ಅರಸರಲ್ಲಿಯೇ ಅಕ್ಬರ ಅತ್ಯಂತ ಶ್ರೇಷ್ಟ ಅರಸ.ಶೂರ ಸೇನಾನಿಯಾಗಿ ,ದಕ್ಷ ಆಡಳಿತಗಾನಾಗಿ, ಧರ್ಮ ಸಹಿಷ್ಣುವಾಗಿ,ಕಲೆ & ಸಾಹಿತ್ಯ ಫೋಷಕನಾಗ...
No comments:
Post a Comment