*ವಿಷಯ* : ಚಿತ್ರ ಕವನ
ಮಗುವಾಗುವಾಸೆ ಮತ್ತೆ
ಮಡಿಲು ಸೇರುವಾಸೆ
ಸುತ್ತ ಸುಳಿದ ಬಲೆಯ ಸೆಳೆತ ಸಾಕು
ನಿತ್ಯ ನಿನ್ನ ಉದರಲ್ಲಿ
ಸತ್ಯ ಕಾಣುವಾಸೆ !
ಜೀವವಿತ್ತ ಮಮಕಾರ ಎನಗೆ ಬೇಕು /
ನೀನಿತ್ತ ಭವದ ಬಡಿವಾರ
ಬದುಕು ಸಾಕು /
ತಾಯಿ ಮಾಂಸ ಮುದ್ದೆ
ನೀನಿತ್ತ ಹಾಸಿಗೆ /
ಕರಳು ಬಳ್ಳಿ ಯಿಂದ ಸೇರಿ
ಕಸುವು ತಂದ ಕೆಸರಿನಂತ
ಹಾಲು ಎನೆಗೆ ಅಂದ /
ಕಾಸಿಗಾಗಿ ಕಲಬೆರಕೆ ಹಾಲು ಕುಡಿದು
ಕಣ್ಣು ಕರಗಿ ನಾನಾದೆ ಅಂದ /
ಕಡಲು ಕರಗಿಸಿ ಒಡಲು
ತುಂಬಿಸಿ ಮಹಡಿ ಏರಿಸಿದರು ಚಂದ /
ಗುಡಿಯ ಕಟ್ಟಿ ಗಡಿಯ ಹಾಕಿದ
ಪುಂಡರ ತಂಡ ನಮಗೇಕೆ ಬೇಕು /
ನಿನ್ನ ಗರ್ಭ ಗುಡಿಯೆ ಎನಗೆ ಸಾಕು /
ಹಾಲಾಹಲ ಉಂಡು
ಹಾಲು ಹಾಕಿ ಬೆಳೆಸಿದ ನಿನ್ನ ಮಡಿಲೆ
ಎನಗೆ ಸಾಕು /
ಎತ್ತ ನೋಡಿದರತ್ತತ್ತ ಬರಿ
ಬ್ರಮಗಳೆ ತುಂಬಿದ ಡೌಲತ್ತು /
ಬರಿ ಮತ್ಸರದಿಂದ ಉರಿವ
ಜನಗಳ ಮಧ್ಯ ಬೆರೆವ ಬದುಕು ಸಾಕು /
ಮತ್ತೆ ಮಮಕಾರ ಹಾಸು ಹೊದ್ದ
ನಿಷ್ಕಲ್ಮಷ ಗರ್ಭ ಗುಡಿಯಲಿ
ಬಂದು ಸೇರುವಾಸೆ /
ಮಡಿಲು ಸೇರುವಾಸೆ
ಸುತ್ತ ಸುಳಿದ ಬಲೆಯ ಸೆಳೆತ ಸಾಕು
ನಿತ್ಯ ನಿನ್ನ ಉದರಲ್ಲಿ
ಸತ್ಯ ಕಾಣುವಾಸೆ !
ಜೀವವಿತ್ತ ಮಮಕಾರ ಎನಗೆ ಬೇಕು /
ನೀನಿತ್ತ ಭವದ ಬಡಿವಾರ
ಬದುಕು ಸಾಕು /
ತಾಯಿ ಮಾಂಸ ಮುದ್ದೆ
ನೀನಿತ್ತ ಹಾಸಿಗೆ /
ಕರಳು ಬಳ್ಳಿ ಯಿಂದ ಸೇರಿ
ಕಸುವು ತಂದ ಕೆಸರಿನಂತ
ಹಾಲು ಎನೆಗೆ ಅಂದ /
ಕಾಸಿಗಾಗಿ ಕಲಬೆರಕೆ ಹಾಲು ಕುಡಿದು
ಕಣ್ಣು ಕರಗಿ ನಾನಾದೆ ಅಂದ /
ಕಡಲು ಕರಗಿಸಿ ಒಡಲು
ತುಂಬಿಸಿ ಮಹಡಿ ಏರಿಸಿದರು ಚಂದ /
ಗುಡಿಯ ಕಟ್ಟಿ ಗಡಿಯ ಹಾಕಿದ
ಪುಂಡರ ತಂಡ ನಮಗೇಕೆ ಬೇಕು /
ನಿನ್ನ ಗರ್ಭ ಗುಡಿಯೆ ಎನಗೆ ಸಾಕು /
ಹಾಲಾಹಲ ಉಂಡು
ಹಾಲು ಹಾಕಿ ಬೆಳೆಸಿದ ನಿನ್ನ ಮಡಿಲೆ
ಎನಗೆ ಸಾಕು /
ಎತ್ತ ನೋಡಿದರತ್ತತ್ತ ಬರಿ
ಬ್ರಮಗಳೆ ತುಂಬಿದ ಡೌಲತ್ತು /
ಬರಿ ಮತ್ಸರದಿಂದ ಉರಿವ
ಜನಗಳ ಮಧ್ಯ ಬೆರೆವ ಬದುಕು ಸಾಕು /
ಮತ್ತೆ ಮಮಕಾರ ಹಾಸು ಹೊದ್ದ
ನಿಷ್ಕಲ್ಮಷ ಗರ್ಭ ಗುಡಿಯಲಿ
ಬಂದು ಸೇರುವಾಸೆ /
✍️ *ಶ್ರೀ ಬಸನಗೌಡ ಗೌಡರ
ಉಪನ್ಯಾಸಕರು
ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜುಗುಳೇದಗುಡ್ಡ
No comments:
Post a Comment