Saturday, September 25, 2021

*ತಾಯಿ ಮಡಿಲು*

 *ವಿಷಯ* : ಚಿತ್ರ ಕವನ

ಮಗುವಾಗುವಾಸೆ ಮತ್ತೆ 
ಮಡಿಲು ಸೇರುವಾಸೆ 
ಸುತ್ತ ಸುಳಿದ ಬಲೆಯ ಸೆಳೆತ ಸಾಕು 
ನಿತ್ಯ ನಿನ್ನ ಉದರಲ್ಲಿ 
ಸತ್ಯ ಕಾಣುವಾಸೆ !
ಜೀವವಿತ್ತ ಮಮಕಾರ ಎನಗೆ ಬೇಕು /
ನೀನಿತ್ತ ಭವದ ಬಡಿವಾರ 
ಬದುಕು ಸಾಕು /
ತಾಯಿ ಮಾಂಸ ಮುದ್ದೆ 
ನೀನಿತ್ತ ಹಾಸಿಗೆ /
ಕರಳು ಬಳ್ಳಿ ಯಿಂದ ಸೇರಿ 
ಕಸುವು ತಂದ ಕೆಸರಿನಂತ 
ಹಾಲು ಎನೆಗೆ ಅಂದ /
ಕಾಸಿಗಾಗಿ ಕಲಬೆರಕೆ ಹಾಲು ಕುಡಿದು 
ಕಣ್ಣು ಕರಗಿ ನಾನಾದೆ ಅಂದ /
ಕಡಲು ಕರಗಿಸಿ ಒಡಲು 
ತುಂಬಿಸಿ ಮಹಡಿ ಏರಿಸಿದರು ಚಂದ / 
ಗುಡಿಯ ಕಟ್ಟಿ ಗಡಿಯ ಹಾಕಿದ 
ಪುಂಡರ ತಂಡ ನಮಗೇಕೆ ಬೇಕು /
ನಿನ್ನ ಗರ್ಭ ಗುಡಿಯೆ ಎನಗೆ ಸಾಕು /
ಹಾಲಾಹಲ ಉಂಡು 
ಹಾಲು ಹಾಕಿ ಬೆಳೆಸಿದ ನಿನ್ನ ಮಡಿಲೆ 
ಎನಗೆ ಸಾಕು /
ಎತ್ತ ನೋಡಿದರತ್ತತ್ತ ಬರಿ 
ಬ್ರಮಗಳೆ ತುಂಬಿದ ಡೌಲತ್ತು / 
ಬರಿ ಮತ್ಸರದಿಂದ ಉರಿವ 
ಜನಗಳ ಮಧ್ಯ ಬೆರೆವ ಬದುಕು ಸಾಕು / 
ಮತ್ತೆ ಮಮಕಾರ ಹಾಸು ಹೊದ್ದ 
ನಿಷ್ಕಲ್ಮಷ ಗರ್ಭ ಗುಡಿಯಲಿ
ಬಂದು ಸೇರುವಾಸೆ /


  ✍️ *ಶ್ರೀ ಬಸನಗೌಡ ಗೌಡರ 

             ಉಪನ್ಯಾಸಕರು 

       ಬಾಲಕರ ಸರಕಾರಿ ಪದವಿ      ಪೂರ್ವ ಕಾಲೇಜುಗುಳೇದಗುಡ್ಡ

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...