Saturday, January 1, 2022

ಹಾಲ ಹಂಡೆ

          ಅಂದು ಬದಾಮಿ ತಾಲೂಕಿನ ಹಳ್ಳಿ ಎಂದು ಕರೆಯಿಸಿಕೊಂಡು ಇಂದು ಗುಳೇದಗುಡ್ಡ ತಾಲೂಕಿನ ಗ್ರಾಮವಾಗಿರುವ ಹಾನಾಪೂರ ಎಸ್ ಪಿ ಗ್ರಾಮ ಇಂದು ಹಂತ ಹಂತವಾಗಿ ಪ್ರಸಿದ್ಧಿಗೆ  ಬರಲು ಕಾರಣ ! ಅದುವೆ ಹಾಲು ಹಂಡೆ ಅಥವಾ ಅದನ್ನು ಹಾಲ ಹಂಡೆ ಎಂದು ಕರೆಯುತ್ತಿದ್ದಾರೆ ಆದರೆ ಸ್ಥಳಿಕರು ಅದನ್ನು ಅನುಕೂಲಕ್ಕಾಗಿ  ಹೊಂಡೆ ಎಂದು ಕರೆಯುವುದನ್ನು ರೂಢಿಸಿಕೊಂಡಸಿದ್ದನ್ನು ಕಾಣಬಹುದು ಬಹುಕಾಲದವರೆಗೆ ಅಜ್ಞಾತವಾಗಿ ಉಳಿದಿದ್ದ ಈ ಜಲಪಾತ ಬಯಲಿಗೆ ಬರಲು ಕಾರಣವೆಂದರೆ ಗುಳೇದಗುಡ್ಡದ ಕೆಲವು ಉತ್ಸಾಹಿ, ನಿಸರ್ಗ ಪ್ರೇಮಿಗಳಾದ ನೇಕಾರ ತರುಣರಿಂದ ಎಂದರೆ ತಪ್ಪಾಗಲಾರದು ಯಾಕೆಂದರೆ ತಮ್ಮ ಬೇಸರವನ್ನು ಕಳೆದುಕೊಳ್ಳಲು ಇಲ್ಲಿಗೆ ಬಂದು ಸಂತೋಷ ಪಟ್ಟು ಹೋಗುತ್ತಿದ್ದರು ಅದು ಪತ್ರ ಕರ್ತರವರೆಗೂ ತಲುಪಿ ಹೆಚ್ಚು ಜನಪ್ರೀಯತೆ ಪಡೆಯಿತು ಇದಕ್ಕೆ ಕಾರಣೀಭೂತರಾದ ಮಲ್ಲಿಕಾರ್ಜುನ ರಾಜನಾಳ ಬಸವರಾಜ ಯಂಡಿಗೇರಿ,ಮಲ್ಲಿಕಾರ್ಜುನ ಕಲಕೇರಿ ಯಂತಹ ಉತ್ಸಾಹಿ ಪತ್ರಕರ್ತರು ಈ ಜಲಪಾತಕ್ಕೆ  ಬೆಳಕು ಚೆಲ್ಲಿದರು.ಈ ಜಲಪಾತ ವಿರುವುದು ನಾನು ಜನಿಸಿದ ಊರಿನಲ್ಲಿ ಎನ್ನುವುದು ಒಂದು ಹೆಮ್ಮೆಯ ವಿಷಯ. ನಮ್ಮೂರು ನಮ್ಮ ಹೆಮ್ಮೆ. ಮಳೆಗಾಲದಲ್ಲಿ 25 ರಿಂದ 30 ಅಡಿಗಳಿಂದ ದುಮ್ಮಕ್ಕಿ ಹರಿಯುವ ಜಲಪಾತ ನೋಡುವುದೇ ಒಂದು ಹಬ್ಬ. ಇದು ಎಲ್ಲಿದೆ ಎಂದು ತಲೆ ಕೆಡಿಸಿಕೊಳ್ಳಬೇಕಿಲ್ಲ ಗುಳೇದಗುಡ್ಡದಿಂದ ಗಂಜಿಕೆರೆ ಮೇಲೆ ಹಾದು ಟ್ರೆಕಿಂಗ್ ಮಾಡುತ್ತಾ ಹೋದರೆ 5 ರಿಂದ 6  ಕಿಲೋಮೀಟರನಲ್ಲಿ ಅಲ್ಲಿಗೆ ತಲುಪಬಹುದು .ಆ ಸುಂದರ ನಿಸರ್ಗ ಸವಿ ಬಲ್ಲವನೇ ಬಲ್ಲ ಜುಳು ಜುಳು ಹರಿಯುವ ಜರಿಗಳು ಅಲ್ಲಲ್ಲಿ ಪಡಿಗಳು ಅದರಿಂದ ನಿರ್ಮಾಣವಾದ ಸಣ್ಣ ಪುಟ್ಟ ಗುಹೆಗಳು ನಮ್ಮನ್ನು ವಿಶಿಷ್ಟವಾದ ಲೋಕಕ್ಕೆ ತೆಗೆದು ಕೊಂಡು ಹೋಗುತ್ತವೆ. ಹೋಗುವಾಗ ಒಂದಷ್ಟು ಊಟಕ್ಕಾಗಿ ಬುತ್ತಿ ಕಟ್ಟಿ ಕೊಂಡು ಹೋಗಬೇಕು ಸ್ನಾನ ಮಾಡಿದ ಮೇಲೆ ಊಟ ಮಾಡಿದರೆ ಅದರ ರುಚಿ ಯಾವ ಪೈವ ಸ್ಟಾರ್ ಹೋಟೆಲ್ ನಲ್ಲೂ ಸಿಗದು. ಇನ್ನು ವಯಸ್ಸಾದವರು ಈ ಮಾರ್ಗವಾಗಿ ಹೋಗುವುದು ಸ್ವಲ್ಪ ಕಠಿಣ ಅನಿಸಬಹುದು, ಅದಕ್ಕೂ ಪರಿಹಾರ ಇದೆ ಏನೆಂದರೆ ಗುಳೇದಗುಡ್ಡ ದಿಂದ  7 ಕಿಲೋಮೀಟರ್ ಬಸ್ ಅಥವಾ ಟಂ ಟಂ ನಲ್ಲಿ ಹಾನಪೂರ ಎಸ್ ಪಿ ಗ್ರಾಮಕ್ಕೆ ಹೋಗಿ  ಅಲ್ಲಿಂದ ಪೂರ್ವಕ್ಕೆ ಕಾಲುದಾರಿಯಲ್ಲಿ ಹೊಲದಲ್ಲಿ ಸು.500 ಮೀಟರ್ ನಡೆದರೆ ನಿಮಗೆ ಸಿಗುವುದೇ ಹಾಲುಹಂಡೆ (ಹೂಂಡೆ) ಆ ನಿಸರ್ಗದ ಜಲಪಾತ ಸೃಷ್ಟಿಯ ಯಾಗಲು ಅಲ್ಲಿ ಪ್ರಾಕೃತಿಕ ಹಿನ್ನೆಲೆಯೆ ಕಾರಣ ಈ ಜಲಪಾತ ಇರವು ಜಾಗದ ಹಿಂದೆ   ಅಪಾರ ಪ್ರಮಾಣದ ಪಡೆಯಿರುವ  ಗುಡ್ಡವಿವದೆ ಅಲ್ಲ ದೆ  ಪಶ್ಚಿಮ ದಿಕ್ಕಿನಲ್ಲಿ ಅರ್ಧ ಕಿಲೋಮೀಟರ್ ಅಂತರದಲ್ಲಿ ಸುಂದರವಾದ ಕೆರೆಯು ಇದೆ ಇದರಲ್ಲಿ ಸೇಕರಣೆಯಾದ ಹೆಚ್ಚು ವರಿ ನೀರೂ ಕೂಡಾ ಈ ಜಲಪಾತಕ್ಕೆ ಬರುತ್ತಿದೆ ಮಳೆಗಾಲದಲ್ಲಿ ಬೀಳುವ ಆ ಸುಂದರವಾದ, ಹಾಲಿನಂತೆ ನೊರೆ ಇರುವ ಹೊಂಡ ಹಾಲಹಂಡೆ ಯಾಗಿರಬಹುದು ಈ ಸುಂದರವಾದ ಹಾಲಹಂಡೆ ಹಾನಾಪೂರ ಹೆಮ್ಮೆ ಇದಕ್ಕೆ ಸಮಾಜ ಸೇವಾ ಸಂಸ್ಥೆಗಳು ಸರಕಾರಗಳು ಕಾಳಜಿ ವಹಿಸಿದರೆ ಉತ್ತಮ ಪ್ರವಾಸಿ ತಾಣವಾಗುವದರಲ್ಲಿ ಯಾವುದೆ ಸಂಶಯವಿಲ್ಲ.

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...