ಎತ್ತರಕ್ಕೆ ಬೆಳೆದಂತೆ
ರೆಂಬೆ ಕೊಂಬೆಯ ವೈಭವ /
ಹೂವು ಹೀಚು ಕಾಯಿ ಹಣ್ಣು
ಮೈತುಂಬ ಸಿರಿತನದ ಭಾವ //
ಕರೆಯದೆ ಬರೆಯದೇ
ಪಡೆದೆ ಹಿರಿತನದ ಗೌರವ //
ಗುಬ್ಬಿ ಗಿಡುಗ ಕಾಗೆ
ಕೋಗಿಲೆಗಳ ಕಲರವ //
ಸಾಗಿ ಹೋಗುವ ದಾರಿ
ಹೋಕರಿಗೂ ನಾನೇ ಬೇಕು/
ಧನಿದು ಬಂದವನಿಗೂ ಮುದ
ನೀಡುವ ಮುದ್ದಿನ ಮಾವ //
ಸದ್ದಿಲ್ಲದೆ ಗೆದ್ದಿತು ಓಡುವ ಕಾಲ
ಒಂದೊ.. ಎರಡೊ.. ಶತ ಕಾಲ
ಹತ ಮಾಡಲು ಬಂದೆ ಬಿಟ್ಟಿತು //
ತನಿಸುವಾಗ ಹೊಗಳಿದ ಜನ
ಉಸಿರು ಪಡೆದು ಉಬ್ಬಿದ ಜನ/
ಹೆಸರು ಹೇಳದೆ ಕೊಸರಿ
ಓಡುತಿರುವರಲ್ಲ ಪ್ರತಿದಿನ //
ಎಲೆಯಲ್ಲಾ ಹಳದಿಯಾಗಿ
ಟೊಂಗೆಗಳೆಲ್ಲಾ ಅಂಗಹೀನ /
ಕತ್ತರಿಸುವ ಕಟುಕನಿಗೇನು ಗೊತ್ತು
ನಿತ್ಯ ನೂರು ಜನರ ಹಿತಕೆ
ಈತ ಸತ್ತಿರುವನೆಂದು //
ಬಸನಗೌಡ ಗೌಡರ
No comments:
Post a Comment