Wednesday, February 16, 2022

ಬೆಳದಿಂಗಳ ಕಾವ್ಯಾನುಸಂಧಾನ ಸರಣಿ 4

ದಿನಾಂಕ 17.02.2022 ರಂದು ಶ್ರೀ ಚಂದ್ರ ಶೇಖರ
ಹೆಗಡೆ ಯವರ ಮನೆ ಅಂಗಳದಲ್ಲಿ ಭಾರತ ಹುಣ್ಣಿಮೆಯ ಹಬ್ಬದ ರಸದೌತಣ, ಬೆಳದಿಂಗಳ ಕಾವ್ಯನುಸಂದಾನ ಸರಣಿ 04 ರ ಸಂಭ್ರಮ. ಇಂದು ಇದು ವಿಶೇಷವಾಗಿ ಜರುಗಿದ ಕಾರ್ಯಕ್ರಮ ಯಾಕೆಂದರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದರ ಹಿರೇಮಠರು ನೀಡಿದ  ಅಲ್ಲಮಪ್ರಭುಗಳ "ನಿಜ ಮಾಯಾ ಜ್ಯೋತಿಯ ಆಯಾಮ ದರ್ಶನ ". ಕಲ್ಯಾಣದ ಶರಣರ ಅನುಭವ ಮಂಟಪ ನಾನು ನೋಡಿಲ್ಲ, ಆದರೆ ಅದರ   ಅನುಭಾವದ ಅನುಭೂತಿ ನಾ ಕಂಡೆ.ಶ್ರೀ ಜಗದ್ಗುರ ಪಟ್ಟಾದಾರ್ಯ 108 ಬಸವರಾಜ ಮಹಾಸ್ವಾಮಿಗಳ ಸಾನಿದ್ಯ , ಕನ್ನಡ ಕಲಿಸಿದ ಗುರುಗಳಾದ ಪ್ರೊ ಎಸ್ ಐ ರಾಜನಾಳ ಸರ್ ಅವರ ಅಲ್ಲಮನ ನೆಲೆಯಲ್ಲಿ ಬಂದ  ಆಧ್ಯಾತ್ಮಿಕ ಅನುಸಂದಾನ, ಶಿಕ್ಷಣ ಶಾಸ್ತ್ರ ಬೋಧಿಸಿದ ಡಾ ವಿ ಎ ಬೆನಕನಾಳ ಸರ್ ರ ತಾತ್ವಿಕವಾದ ಚಿಂತನೆಯ ಮಂಥನ ,ಎನ್ನ ಮನದಲ್ಲಿ ಮೂಡಿದ ಸಣ್ಣ ಸಂಶಯಗಳ ಸಂಹಾರ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ  ಹೆಗ್ಗುರುತು ಮೂಡಿಸಿ ಸದ್ಯ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿರುವ ಸಿದ್ದಲಿಂಗಪ್ಪ ಬರಗುಂಡಿ ಸರ್ ರಂತಹ ದಿಗ್ಗಜರ ಮಧ್ಯೆ ನಾನೊಬ್ಬ ಪೆದ್ದ, ಎದ್ದು ಬಿದ್ದು ಕವನ ಓದಿದೆ ಎನ್ನುವುದಿಕ್ಕಿಂತ ಸದ್ಯ ಅವರ ಮಧ್ಯ ನನಗೂ ಒಂದು ಅವಕಾಶ ಸಿಕ್ಕಿತು ಎನ್ನುವುದು ನನ್ನ ಸಮಾಧಾನದ ಸಂಗತಿ .ಹೆಗಡೆಯವರ ಮನೆಯಂಗಳದಲ್ಲಿ ಚನ್ನವೀರ ಕಣವಿಯವರ ನುಡಿ ನಮನ, ಅವರು ನಮ್ಮನ್ನು ಅಗಲಿದ ದುಃಖ ನಡುವೆಯೂ ಅಲ್ಲಮನ ಆದರ್ಶ ದರ್ಶನ ಮಾಡಿಸಿದ  ಹೆಗಡೆ ಕುಟುಂಬ ವರ್ಗಕ್ಕೆ ನನ್ನ ದೊಂದ ದೀರ್ಘ ದಂಡ ನಮಸ್ಕಾರ. 

ಅನಿಸಿಕೆ :-

ಆಧುನಿಕ ಅಲ್ಲಮರ  ಅಪರಾವತಾರ  
ಅನುಭಾವಿಗಳ ನೆಲದಲ್ಲಿ ಬಂದು 
ಸೇರಿದೇವು ನಾವೆಲ್ಲ /
ಚಂದ್ರ...ಶೇಖರನ ಬಯಲು 
ಮನೆಯಂಗಳ 
ಹಿಟ್ಟು ಚೆಲ್ಲಿದಂತ
ಭಾರತ ಹುಣ್ಣಿಮೆ ಬೆಳದಿಂಗಳ /
ವಚನ  - ಕಾವ್ಯಗಳ 
ಅನುಸಂಧಾನದ ಮಂಗಳ
ಅದು ನಮಗೊ ನಿಮಗೊ 
ಎತ್ತಿಕೊಂಡವರ ಆಲಿಂಗನ/
ನಡೆದಷ್ಟು ದಾರಿಯಲ್ಲಿ  
ಪಡೆದಷ್ಟು ಭಾಗ್ಯ ,
ಮರೆತವನೆ ಮಂಗ/
ಬಸವನ ನೆಲದಲ್ಲಿ ಹಸಿವು ಹಿಂಗಿತ್ತು .
ಶರಣ ಅಲ್ಲಮರ  ವಚನಗಳ 
ಬೇವು ಬೆಲ್ಲ, 
ಅನುಭವಿಗಳ ಅನುಭಾವದಿಂದ 
ನಮಗಾಯಿತು ಜ್ಞಾನ ವೃದ್ದಿ /
ಎನ್ನ ಮನದಂಗಳದಲ್ಲಿ 
ಕನ್ನಡ ಸಾಹಿತ್ಯ ಸಮೃದ್ಧಿ //

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...