Sunday, February 20, 2022

* ಕನ್ನಡದ ಕನಸುಗಾರ *

🌹🌹🌹🌹🌹🌹🌹🌹
ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ಧಾರವಾಡ ಮತ್ತು ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ

ಕನ್ನಡದ ಮೇರು ಕವಿ ಶ್ರೀ ಚನ್ನವೀರ ಕಣವಿ ಅವರಿಗೆ ಶ್ರದ್ಧಾಂಜಲಿ ನುಡಿನಮನ 
ಸ್ಫರ್ಧೆಗಾಗಿ ಕವನದ  ಧ್ವನಿ ಮುದ್ರಣ 

* ಕನ್ನಡದ ಕನಸುಗಾರ *

ಸಾಹಿತ್ಯ ಕಣವಿಯಲಿ ಸಾವಿರ 
ಮರ ಬೆಳದ ಕಾವಲುಗಾರ.
ಚಿನ್ನದಂತ ಚನ್ನವೀರ ನೀವೆನ್ನ 
ಕನ್ನಡ ಕಣಜ ಕಟ್ಟಿದ
ಕನಸುಗಾರ.//

ಭಾವಗಳಿಗೆ ಜೀವ ನೀಡುವ 
ಭವದ ಭಾಗ್ಯದ ಬಳೆಗಾರ 
ಹೊಂಬಳದಿ ನಂಬಿ ಬೆಳೆದ 
ಹೊಂಬೆಳಕಿನ ತುಂಬಾ ಸವಿಗಾರ//

ಬೆಂಬೆಳಕು ನೀಡಿ ಬೆಳೆದ 
ಸುನೀತಗಳ  ಸಾಮ್ರಾಟ್ .
ರಟ್ಟಿಗೂ ಗಟ್ಟಿ ಕಳೆ ನೀಡಿದ  
ಪಟ್ಟಿ ಕಿರಿಟದ ಪೇಟಗಾರ//

ನೀವಿಟ್ಟ ಹೆಜ್ಜೆಯ ಗುರುತು 
ಜ್ಞಾನ ಕಾಶಿಯಲಿ  ಸಂಚಾರ 
ನಾಡೆಲ್ಲ ಹಾಲು ಜೇನಾಗಿಸಿದ
ನವ್ಯಕಾವ್ಯ ಮನ್ವಂತರಗಾರ.//

ಮಾನವೀಯ ಮೌಲ್ಯಗಳ 
ವಿನಯದ ವಿಶಾಲ ಗುಣವಂತ .
ಕಾಣದಂತೆ ಮರೆಯಾದ  
ಸಂಸ್ಕಾರದ ಹೃದಯವಂತ.//

ಕನ್ನಡದ ತೇರು ಮುನ್ನಡೆಸಲು 
ನೀವೀರಬೇಕಿತ್ತು ಜೊತೆಗಾರ. 
ಕಾಣದ ಕರವೊಂದು ಕರೆದು  
ಕಣ್ಮುಂದೆ ಆದೆ ಮಾಯಗಾರ.//


 

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...