🌹🌹🌹🌹🌹🌹🌹🌹
ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ಧಾರವಾಡ ಮತ್ತು ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ
ಕನ್ನಡದ ಮೇರು ಕವಿ ಶ್ರೀ ಚನ್ನವೀರ ಕಣವಿ ಅವರಿಗೆ ಶ್ರದ್ಧಾಂಜಲಿ ನುಡಿನಮನ
ಸ್ಫರ್ಧೆಗಾಗಿ ಕವನದ ಧ್ವನಿ ಮುದ್ರಣ
* ಕನ್ನಡದ ಕನಸುಗಾರ *
ಸಾಹಿತ್ಯ ಕಣವಿಯಲಿ ಸಾವಿರ
ಮರ ಬೆಳದ ಕಾವಲುಗಾರ.
ಚಿನ್ನದಂತ ಚನ್ನವೀರ ನೀವೆನ್ನ
ಕನ್ನಡ ಕಣಜ ಕಟ್ಟಿದ
ಕನಸುಗಾರ.//
ಭಾವಗಳಿಗೆ ಜೀವ ನೀಡುವ
ಭವದ ಭಾಗ್ಯದ ಬಳೆಗಾರ
ಹೊಂಬಳದಿ ನಂಬಿ ಬೆಳೆದ
ಹೊಂಬೆಳಕಿನ ತುಂಬಾ ಸವಿಗಾರ//
ಬೆಂಬೆಳಕು ನೀಡಿ ಬೆಳೆದ
ಸುನೀತಗಳ ಸಾಮ್ರಾಟ್ .
ರಟ್ಟಿಗೂ ಗಟ್ಟಿ ಕಳೆ ನೀಡಿದ
ಪಟ್ಟಿ ಕಿರಿಟದ ಪೇಟಗಾರ//
ನೀವಿಟ್ಟ ಹೆಜ್ಜೆಯ ಗುರುತು
ಜ್ಞಾನ ಕಾಶಿಯಲಿ ಸಂಚಾರ
ನಾಡೆಲ್ಲ ಹಾಲು ಜೇನಾಗಿಸಿದ
ನವ್ಯಕಾವ್ಯ ಮನ್ವಂತರಗಾರ.//
ಮಾನವೀಯ ಮೌಲ್ಯಗಳ
ವಿನಯದ ವಿಶಾಲ ಗುಣವಂತ .
ಕಾಣದಂತೆ ಮರೆಯಾದ
ಸಂಸ್ಕಾರದ ಹೃದಯವಂತ.//
ಕನ್ನಡದ ತೇರು ಮುನ್ನಡೆಸಲು
ನೀವೀರಬೇಕಿತ್ತು ಜೊತೆಗಾರ.
ಕಾಣದ ಕರವೊಂದು ಕರೆದು
ಕಣ್ಮುಂದೆ ಆದೆ ಮಾಯಗಾರ.//
No comments:
Post a Comment