ಭವ್ಯ ಭಾರತ ಬೆಳಗಲು
ಭೇಧವೆಂಬ ವಿಷ ತುಳಿದು
ಭಾವೈಕ್ಯತೆಯ ಹೂವು
ಅರಳಿಸುವೆವು ಇಂದು
ಅರಳಿಸುವೆವು ಇಂದು//
ಸಂತರ ನಾಡಿದು ಪಂಥ ನೂರು
ಮನೆ ಮಂದಿರ ಮಸೀದಿಗಳ
ಮೇಲೆ, ಶಾಂತಿಯ ಪಾರಿವಾಳ
ಹಾರಿಸುವೆವು ಇಂದು
ಹಾರಿಸುವೆವು ಇಂದು//
ಹಿಂದೂ, ಕ್ರೈಸ್ತ , ಶಿಖ್ ಇಸಾಯಿ
ಮುಸ್ಲಿಂ ರೆಲ್ಲರೂ ಒಂದೆ.. ಒಂದೆ.
ಭಾರತ ಮಾತೆಯ ಮಕ್ಕಳು ನಾವು
ಭವ್ಯ ಪರಂಪರೆಯ ವಾರಸಾದಾರರು
ನಾವೆಲ್ಲಾ ಒಂದೇ. //
ತಂದು ಬೆಂಕಿಯ ಇಟ್ಟರೆ ಏನು
ತಿಂದು ಜೀರ್ಣಿಸಿ ಬಿಟ್ಟೇವು
ಮೂರು ದೆಶೆಗೂ ಹರಡಿದ
ಶರಧಿ,ಜಲ ವರುಣವಾಗಿ
ಸುರಿಯುವೆವು ಇಂದು //
ನರನಾಡಿ ಯಂತೆ ಹರಿದ
ಆಚಾರ್ಯತ್ರರ ವಿಚಾರಶೀಲ
ನುಡಿ ,ಪ್ರಸ್ಥಭೂಮಿಯ
ಸ್ವಸ್ಥ ಮನ ಜನಗಳು, ತುಂತುರ
ಹನಿ ಹರಡುವೆವು ಇಂದು //
ಕಾಡು ಹಾದಿ, ಕಲ್ಲು ಮುಳ್ಳು
ಅಡೆತಡೆಗಳು ನೂರೊಂದು
ಮೆಟ್ಟಿ ನಡೆಯಲು ಪಥಗಳು
ಹಲವು, ಭಕ್ತಿಯ ಗುರಿ ಒಂದೆ
ಮುಕ್ತಿಯ ಗುರಿ ಒಂದೆ //
No comments:
Post a Comment