ಕೊರೋನಾದ ಕರಿನೆರಳು
ಬಿದ್ದು ನಮಗೆಲ್ಲ ಆಗಿತ್ತು
ಕರಾಳ ದಿನ/
ಒಳಗೊಳಗೆ ನಕ್ಕುರು ಕೆಲವು ಜನ/
ನಿಜವಾಗಿ ಅತ್ತವರು ಹಲವು ಜನ /
ಓದದೆ ಪಾಸು, ಇಲ್ಲ ನಪಾಸು
ಹೊಡೆದರು ಹೋಳಿ ಹಲಗೆ//
ನಿಜವಾಗಿ ಓದಿದವರಿಗೆ
ಬಂತು ಜೋಳಿಗೆ
ಅವಕಾಶದ ಬಾಗಿಲು
ಈಗ ಬಂದಿದೆ ಬಳಿಗೆ
ಮಾರ್ಚ್ 28 ,ಎಪ್ರಿಲ್ 22
ಅತ್ತವರು ನಗಬಹುದು
ನಕ್ಕವರು ಅಳಬಹುದು.
ಅತ್ತವರು ಸಾಯುವರೇನು ?
ದುಡಿದವರು ಬಡವರಲ್ಲ
ಪಡೆದವರು ಶಾಸ್ವತವಲ್ಲ
ತಡೆದು ಪಡೆಯಲು
ಹೋರಾಡಿದವನೆ ಸಾಧಕ/
ಯಾಕಿನ್ನು ತಡ, ಪುಸ್ತಕ ಹಿಡಿ
ಮೋಜು ಮಸ್ತಿ ಬಿಡಿ,ಯುದ್ಧಕ್ಕೆ ನಡಿ/
ಪಾಸಾದರೆ ಮುಂದೆ ನಡೆ
ನಪಾಸಾದರೆ ಅನುಭವ ಪಡೆ
ಅನುಭವವೆ ಶಿಕ್ಷಣ ಅಂಕವೊಂದೆ
ಮಾನದಂಡವಲ್ಲ, ಚಿಂತೆ ಬಿಡಿ //
No comments:
Post a Comment