Friday, May 20, 2022

* ಮುಂಗಾರು ಮಳೆ *

ಮುಂಗಾರು ಮಳೆ 
ಏನು ನಿನ್ನ ಮಹಿಮೆ ! 
ಜೇನು ಮಧುವಿನಂತೆ 
ನಿನ್ನ ಸೃಷ್ಟಿಯ ಗುಣ.! 
ಸಿಗದು ನುಡಿ, ಬರೆದು ಬೀಗಲು
ಬರವು ಎನಗೆ ಕಡವ ತರಲೆ ?
ಅರಳಿ ನಿಂತ ಮರಳು ಕಣ 
ಸೂಸಿ ಬಂತು ಶ್ರೀಗಂಧ ಪವನ
ಮೇ ಮಾಸದುರಿವ ಕೆನ್ನಾಲಿಗೆ 
ಸೀಳಿ ಹರಿಸಿದೆ ತಂಪಿನ ದಳ !
ಗುಡುಗು ಸಿಡಿಲು ಪಡೆದ 
ಭುವಿ ಒಡಲ ಕಾವು ಗರ್ಭಧರಿಸಿ 
ಉಸಿರೆ ಹಸಿರು ಕಾನನ !
ಹೊಸ ಶಕೆಯು ಸುತ್ತಿ ಬರುವೆ
ಬೆಸೆವ ನೀನೆ ಸಾರ್ವಭೌಮ.!  
ಅಶ್ವಿನಿ, ಭರಣಿ, ಕೃತಿಕ ಬಲ
ಓಡಿ ಬರುತಿದೆ ರೋಹಿಣಿ.
ನಾಮ ಹಲವು ನಿಯಮ 
ಒಂದೆ ವರುಣ !
ಬಿರಿದ ನೆಲ, ಬರಿದು ಕೆರೆ 
ಹರಿಸಿದೆ ಮೇಲೆ ನಿನ್ನ ವರ
ದುಮ್ಮಿಕ್ಕುವ ಬಲ ಒಂದೇ ಎರಡೇ 
ಕಣ್ಣು ಸಾಲವು ಜಗದ ತುಂಬಾ 
ಜೀವ ಜಲ ಜಿಗಿಯಿತು 
ಕಾರಂಜಿ ತನನ !

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...