Monday, June 13, 2022

ಕೃಷಿಗೆ ಸಂಬಂಧಿಸಿದ ಕವನ

ಅಖಿಲ ಭಾರತೀಯಸಾಹಿತ್ಯ ಪರಿಷತ್ತು ರಾಣಿಬೆನ್ನೂರು ಘಟಕ ನಡೆಸುತ್ತಿರುವ ಕವನ ರಚನೆನಡೆಸುತ್ತಿರುವ
ಕೃಷಿಗೆ ಸಂಬಂಧಿಸಿದ ಕವನ 

* ಮರೆಯಾದ ಮಳೆ

ರೋಹಿಣಿ ಮಳೆ ಬಂತು 
ಮೋಹದ ಸಿರಿ ತಂತು 
ಹಿಗ್ಗಿ ದುಡಿದಾನ ರೈತ ನಿಂತು !

ಕಾಯ ಹಣ್ಣಾಗಿ  
ಮಣ್ಣು ಮೃದುವಾಗಿ  
ಧರೆಯೇ ಅನ್ನವಾಯಿತು
ಬೆಳದಾನ ಅಣ್ಣ ಅಕ್ಕಿ !!

ಬಗ್ಗಿದ ಬಾಳು  ಎಗ್ಗಿಲ್ಲದ ಗೋಳುi
ಸುಗ್ಗಿಯ ಕನಸು ಸೆರಗಲಿ ಇಟ್ಟು 
ಒಗ್ಗದ ಮೃಗಶಿರ ಸರದಾನ ಮರೆಯಾಗಿ 
ಅತ್ತಾನ ನಮ್ಮ  ರೈತ ಬಿಕ್ಕಿ! ಬಿಕ್ಕಿ!

ಬೆವರಿನ ಬೆಲೆ ಕಟ್ಟುವರೇನು 
ಇಟ್ಟಾರೊ ನೆಲದಾಗ ಶಾಸಕ್ಕಿ !!
ಬಲಭೀಮನಾಂಗ ದೇಹ,
ಜನರ ಉದರ ತುಂಬ್ಯಾನ ಅವಲಕ್ಕಿ!!

ಸಗಣಿ ಗೊಬ್ಬರಕ ಸುಗುಣ ಗೊರಕಿ
ಖಾಲಿ ಗೆಣುದ್ದು ಲಂಗೂಟಿ ಹಾಕಿ
ಗಾಲಿಗಳ ಮೇಲೆ ತಿರುಗಿದರ ಜ್ವಾಕಿ
ಸಂಸಾರಕ ಸಾಲ ಮಾಡತಿದಿ ಮಿಕ್ಕಿ!!

ದನಕರ ಕಟ್ಟಿ ದಿನಕರನಾಗಬೇಕು
ದೊರೆತನ ಬರತೈತಿ ದಿನ ಮೆತ್ತಿ   
ಸರತಿಯ ಸಾಲಿನಾಗ ನಿಂತು 
ಸೊರಗಿ ಸಾಯೋದು ತಪ್ಪತೈತಿ!!

ಬೀಜದ ಒಡೆತನದ ಬೋಜಾ ಕಸಿದು
ಬಾಗಿಸಿ ಬಡದಾರ ಕರಮುಚ್ಚಿ 
ಅನ್ನ ನೀಡಿದರೂ ತನ್ನವರೆ ಇಲ್ಲ  
ಇನ್ನೇಷ್ಟು ದಿನ ಗ್ರಹಣ ಹಿಡಿತೈತಿ!!

ಶ್ರೀ ಬಸyನಗೌಡ ಗೌಡರ ಉಪನ್ಯಾಸಕರು
ಬಾಲಕರಸರಕಾರಿ ಪದವಿ ಪೂರ್ವ ಕಾಲೇಜು ಗುಳೇದಗುಡ್ಡ 
ಜಿಲ್ಲಾ:ಬಾಗಲಕೋಟೆ?t

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...