ನಾಕವೊಂದರಳಿಸಲು ಬೇಕು
ನಮಗೊಂದು ಸ್ವಂತ ಕರ್ಮ
ನಮಗ್ಯಾಕೆ ನರಕದ ಚಿಂತೆ
ನಮ್ಮ ಶಿವ ನೀಡಿರುವನು
ಸಂಸಾರವೆಂಬ ಸಂತೆ !!
ಸಂತೆಯ ಬಯಲಲ್ಲಿ ಸಾವಿರ
ಕಂತೆ, ಕಂತೆ ! ಸವಿಯಾದ ಫಲ
ತಿಳಿಯದೆ ನಾ.. ಹೌಹಾರಿ ಕುಂತೆ
ಆಯ್ಕೆ ಹೇಗೆ ? ಗರಬಡಿದು ನಿಂತೆ
ಹೇಳಿದರು... ! ಜ್ಞಾನ ಬೇಕಂತೆ !!
ಕಳೆತ ಹಣ್ಣೂ ಸಾವಿರ ಸಾವಿರ
ಕೊಳೆತ ಹಣ್ಣಿಗೇನಿಹುದು ಕೊರತೆ
ಮಳೆಯಾಗದೆ ಬೆಳೆದು ನಿಂತಿವೆ
ಬರದ ಬಯಲಿನ ಪಾಪಾಸ ಕಳ್ಳಿ
ಕೌರವ ದೃತರಾಷ್ಟ್ರರಂತೆ !!
ಬರಿ ಸೆಳತೆವೊಂದೆ ಸಾಕೆ
ಉರಿವ ದೀಪಗಳಂತೆ ಕ್ಷಣಿಕ
ಮರದ ಫಲಿತ ಹಣ್ಣು ಬೇಕು
ತಡವರಿಸಿ ಹುಡುಕಾಡಿದೆ
ದಾರಿ ಕಾಣದೆ ನಾ ನಿಂತೆ !!
ಕಾಯುವೆ ಕಲಿಗಾಲದ ಕರ್ತಾರನ
ಕಮ್ಮಟದ ಚಮ್ಮಟಿಯ ಏಟಿಗೆ.
ಹಮ್ಮು ಹರಿದು ಬಿಮ್ಮು ಕಳೆದು
ನಿಮ್ಮದಾಗುವ ಹಿರಿದು ಬಯಕೆಗೆ.
ಸಮ್ಮಾನವುಂಟು ನಾ.... ಅಳಿದ ಮೇಲೆ !!
🖋 ಬಸನಗೌಡ ಗೌಡರ
No comments:
Post a Comment