ಬರೆದೆ ನನ್ನ ಎದೆಯ ಮೇಲೆ
ಪೊರೆದ ಮಾತೆಯೇ ನಿನ್ನ ಹಿರಿಮೆ।
ಕೊರೆವ ಚಳಿಯಲಿ ಕನಸು ಅರಳಿ
ಗೌರವ ತರಲು ತೆರಳುವೆ ಇಂದು॥
ಬಯಲು ದಾಟಿ ಬಾಗಿ ನಿಂತು
ನಮಿಸಿ ಏರುವೆ ಕಾಂಚನಜುಂಗ।
ಗೌರಿ ಶಿಖರವೇರಿ ಜಾರಿ ನಿಂತು
ವೈರಿ ಶಿರವ ಹರಿವೆ ಕೊರಳಿಗೆ ॥
ಭಾರತಾಂಭೆ ಎನಿತು ಬನ್ನಿಸಲಿ
ನಿನ್ನ ಚರಣ ಕಮಲ ಕಡಲಾಭರಣ।
ಮಲೆಯ ಮಂಜಿನಲೆಯ ಮೇಲೆ
ತ್ರಿವರ್ಣ ಧ್ವಜ ವರುಣ ಸಿಂಚನ॥
ಹಿಮದ ಗಿರಿಯಲಿ ತಮವು ಕರಗಿ
ಪ್ರೇಮದುರಿಗೆ ಪ್ರೀತಿಯ ಮಹಲು।
ಸುಡುತಿದೆ ಅರಿಷಡ್ವರ್ಗ ಕೊರಗಿ
ಪಡುವನ ನಡೆ ಭಾಸ್ಕರನುರಿಗೆ ॥
ಋಣ ತೀರಿಸಲೆಣವಾಗಲು ಸರಿ
ಪಣವೊಂದೆ ಅಜಯಗಿರಿ ಭಾರತ।
ಕಣ ಕಣದಲಿ ಹರಿದಿದೆ ಹರಿ ಗುಣ
ಬಣವಾಗಲು ಬಿಡೆ ಹೈಂದವಿ ವಂದೆ॥
🖋. ಬಸನಗೌಡ ಗೌಡರ
ಉಪನ್ಯಾಸಕರು ಗುಳೇದಗುಡ್ಡ
No comments:
Post a Comment