Tuesday, October 18, 2022

*ಚರಿತೆಯನೊಮ್ಮೆ ಹಾಡುವಾ*

*ಚರಿತೆಯನೊಮ್ಮೆ ಹಾಡುವಾ*

ನುಡಿಗಾಗಿ ನಾಡು ಕಟ್ಠಿದ 
ಕನ್ನಡ ವೀರರ ಚರಿತೆಯನೊಮ್ಮೆ
ನೋಡುವಾ... ಹಾಡುವಾ...।। ಪ।।

ಗಂಗ ,ಕದಂಬ, ರಾಷ್ಟ್ರಕೂಟ 
ಚಾಲುಕ್ಯ ಅರಸರ ಕರ್ನಾಟಕ ಬಲ । 
ಹೊಯ್ಸಳರಸರು ಅರಳಿಸಿದಾ ಶಿಲ್ಪಕಲಾ।
ವೀರ ಅರಸರ ಕ್ಷಾತ್ರಬಲ ಕಾವೇರಿಯಿಂದ 
ಗೋದಾವರಿಯಗೆ ಹಿಗ್ಗಿತ್ತು ಪವಿತ್ರ ನೆಲ॥

ಹೈದರಾಲಿಯ ಮಗ ಟಿಪ್ಪುವಿನ ಮರಣ। 
ನಿಜಾಮ,ಮರಾಠ, ಮೈಸೂರಿನೊಳಗೆ 
ಹಂಚಿ ಹೋದರು ಕನ್ನಡದ ಈ ಜನ।॥
ಅತ್ತ ತೆಲಗು ಇತ್ತ ಮರಾಠಿ, ಸುತ್ತ ಪಸರಿಪ 
ಒಡಯರ ರಕ್ಷಣೆ। ಎತ್ತರಕ್ಕೇರಿತು ಮಲ್ಲಿಗೆ ಜನ॥

ಅಂಗ್ಲರ ಗುಂಡಿಗೆ ಎದೆಯನೊಡ್ಡಿದ
ರಾಯನ ಶೌರ್ಯ। ಚನ್ನಮ್ಮನ ಕೆಚ್ಚು
ಹಲಗಲಿ ಬೇಡರ ಶಕ್ತಿಗೆ। ಮೋಸದ ದಾರಿ 
ಹಿಡಿಯಿತು ಬ್ರಿಟಿಷ್ ಸಾಮ್ರಾಜ್ಯ ಹುಚ್ಚು।
ತತ್ತರಿಸಿತು ಪ್ರಥಮ ಸ್ವಾತಂತ್ರ್ಯದ ಕಹಳೆ॥

ಗಂಡು ಮೆಟ್ಟಿದ ಕನ್ನಡ ನೆಲದಲಿ 
ಹುಟ್ಟಿದ ಡೆಪ್ಯುಟಿ ಚನ್ನಬಸಪ್ಪ.।ಕನ್ನಡ
ತರಬೇತಿ ಶಾಲೆಗಳಿಗೆ ನೀಡಿದ ಜೀವಾ॥
ಕರ್ನಾಟಕ ಗತವೈಭವ ಬಿತ್ತಿತು ಆಲೂರು
ವೆಂಕಟರಾಯರ ಸ್ವಾಭಿಮಾನದ ಹವಾ|

ಕವಿ ಪುಂಗವ ಕಬ್ಬಿಗರು ದಮನಿ ದಮನಿಗಳಲ್ಲಿ 
ಹರಿಸಿದರು ಕನ್ನಡ ನೆಲ ಜಲದ ಮಹಿಮಾ॥
ಸಂಘ ಸಂಸ್ಥೆಗಳು ಪತ್ರಿಕೆ ಮಾಧ್ಯಮ           
ಕನ್ನಡಿಗರೆದೆಯಲಿ  ಬೆಳಗಿಸಿದವು
ಚೆನ್ನುಡಿಯ ಜಾಗೃತಿಯ ಆಭರಣ.॥

ರಾ ಹ ದೇಶಪಾಂಡೆ,ಗೆರೂರ ರಾಮಸ್ವಮಿ, 
ನಿಜವಾಯಿತು ಏಕೀಕರಣದ ಕನಸು। 
ನವೆಂಬರ್ ಒಂದು | ನವ ಕರ್ನಾಟಕ ॥
ಸಿದ್ಧಪ್ಪ ಕಂಬಳಿ .ಎಸ್ ನಿಜಲಿಂಗಪ್ಪ ।
ಕೆಂಗಲ್ ಹನಮಂತಯ್ಯರ ದಿವ್ಯಗುಣ॥

                     ಬಸನಗೌಡ ಗೌಡರ
          ಉಪನ್ಯಾಸಕರು ಗುಳೇದಗುಡ್ಡ

1 comment:

  1. ಗೌಡ್ರೇ ಇತಿಹಾಸದ ಇತಿಹಾಸವಿರುವ ಧನ್ಯವಾದ

    ReplyDelete

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...