ರಾಷ್ಟ್ರ ಕವಿ ಕುವೆಂಪು ರವರ ಜಯಂತಿ ಪ್ರಯುಕ್ತ ಮಹಾನ ಕವಿ, ರಸಋಷಿಗೆ ಕನ್ನಡಿಗರ ಪ್ರೀತಿಯ ನುಡಿನಮನ.
ಕನ್ನಡಕ್ಕೊಬ್ಬ ಕುವೆಂಪು ಸಿಗದಿದ್ದರೆ ಮಲೆನಾಡಿನ ಸೋಬಗೊಂದು ಮನೆ ಮನೆಗಳಲ್ಲಿ ಮಾಧುರ್ಯ
ಅಲೆಯಾಗಿ ಕಂಪು ಹರಡುತ್ತಿತ್ತೆನೋ ? । ಪ।
ಆ ಪಂಪ, ಪೊನ್ನ ,ಜನ್ನ ರನ್ನರನ್ನು ಬಣ್ಣಿಸುವ
ಎನ್ನ ಕುಲಕೋಟಿಯ ತನ್ನ ತನವನ
ಬಡಿದೆಬ್ಬಿಸುವ ರಸಗವಳ ಸಿಗುತ್ತಿತ್ತೇನೋ?॥
ಆ ಗಿರಿಕಂದರದ ಕೋಗಿಲೆಗಳಿಂಚರ ಕನ್ನಡಿಗನ ಸ್ವಾಭಿಮಾನದ ಆಲೆಯಾಗಿ ಬಲೆಯಾಗಿ
ಗಂಧರ್ವ ಲೋಕ ಸೃಷ್ಟಿಯಾಗುತ್ತಿತ್ತೇನೋ ?॥
ಆ ಶ್ರೀಗಂಧದ ಮರ ಮೈಸೂರು
ಅರಮನೆಯ ದಸರೆಯಾಗಿ ದಶ ದಿಕ್ಕುಗಳಿಗೆ ಹೊಸ
ಸುಗಂಧ ಪರಿಮಳ ಸೂಸುತ್ತಿತ್ತೇನೋ?॥
ಆ ಮತ ಈ ಮತ ಭಿನ್ನ ಮತಗಳ ಭೀತಿ
ಸಾವಿರ ಪಂಥಗಳಲಿ ಸೇರಿ ಮನುಜ
ಮತದಲ್ಲಿ ಲೀನವಾಗುತ್ತಿತ್ತೇನೋ ?॥
ಆ ಕವಿಶೈಲದೊಂದೊಂದು ನುಡಿ
ಕನ್ನಡಿಗರ ಹೆಮ್ಮೆಯ ಕಾವ್ಯವಾಗಿ
ಅರಸಿಕನೂ ಬೆರಗಾಗುವ ಹೊಸ
ಮನ್ವಂತರ ಖುಷಿ ನೀಡುತ್ತಿತ್ತೇನೋ.?॥
ಆ ಕ್ಲಾಸಿಕಲ್ ಯುಗದ ಕನ್ನಡದ ಕಂಪು
ಈ ಸವಿಗನ್ನಡದ ಆದಿ ಜ್ಞಾನಪೀಠ ಪ್ರಶಸ್ತಿ
ಭುವನೇಶ್ವರಿ ಕೊರಳ ಮಾಲೆಯಾಗಿ
ಭುವನದಲ್ಲಿ ಶೋಭಿಸುತ್ತಿತ್ತೇನೋ.?
ಆ ವೈಚಾರಿಕ ನೆಲೆಯ ಸದಭಿವೃಚಿಯ ಸಾಹಿತ್ಯ
ಅಂಧಕಾರವ ಮುರಿದು ಸೈದ್ಧಾಂತಿಕ ಗಾಳಿ
ಅಧಮನ ಅನೀತಿಯ ಆಲಿಂಗನ ಬಿಡಿಸಿ
ಸುಧಾಮನರಮನೆ ಮಾಡುತ್ತಿತ್ತೇನೋ.?
ಕನ್ನಡಕ್ಕೊಬ್ಬ ಕುವೆಂಪು ಸಿಗದಿದ್ದರೆ ಮಲೆನಾಡಿನ ಸೋಬಗೊಂದು ಮನೆ ಮನೆಗಳಲ್ಲಿ
ಮಾಧುರ್ಯ ಅಲೆಯಾಗಿ ಕಂಪು ಹರಡುತ್ತಿತ್ತೆನೋ ? । ಪ।
No comments:
Post a Comment