ನಡೆದಾಡಿದಾ ದೇವರು
ಸಿದ್ಧೇಶ್ವರ ಶ್ರೀಯಾಗಿ
ಪಡೆದು ಕಳೆದುಕೊಂಡೆವು
ನಿರಾಶೆಯಾಗಿ,
ನೀ ನಮ್ಮೆಲ್ಲರ ತಂದೆ
ಕಾಯುತಿರುವೆವು ಅನಾಥವಾಗಿ ॥
ನಮ್ಮೆಲ್ಲರ ಹೃದಯ ಪಟಲದಲ್ಲರಳಿ
ಸುಮ್ಮನೇ ತೆರಳಿದೆ ಹಮ್ಮೀರ,
ಒಮ್ಮೆ ಬಂದು ನೋಡು
ನೀಮ್ನರು ಕಾಯುತಿರುವೆವು ನಿಮಗಾಗಿ ॥
ಆಶೆಯೆಂಬ ಹೇಸಿಗೆಗಂಟಿ
ಮೋಸ ಹೋದ ಮನಕೆ
ಹೊಸದಾರಿ ತೋರಿದೆ ಸ್ವೇತ ಮುನಿ
ಮಾನವತ್ವದ ನೆರಳಲ್ಲಾದೆ ದೈವತ್ವದ ಗಣಿ॥
ಆಧ್ಯಾತ್ಮಿಕ ಅರಮನೆಯ ದೊರೆಯೇ
ನಿರವ ಕಾಣುತಿದೆ ಗುರುಮುನಿ
ನೀ ತುಳಿದ ಹಾದಿಯಲ್ಲಿ ಜ್ಞಾನಕ್ಕೇನು ಬರ ಧನಿ॥
ಸ್ವೇತ ಬಟ್ಟೆಯ ಸಂತ, ಜಾತಿ ಎಣಿಸಲಿಲ್ಲ .
ಮರ್ಕಟ ಮನಕೆ ಸೋತು ನಡೆಯಲಿಲ್ಲ .
ಸರ್ವರ ಹಿತವನ್ನೆ ಬಯಸಿದೆ ಇಲ್ಲೆಲ್ಲಾ॥
ಆಧ್ಯಾತ್ಮದ ಪರಮಶಿಖರ,
ಸುಜ್ಞಾನದ ದಿವ್ಯ ಜ್ಯೋತಿ
ಭೌತಿಕವಾಗಿ ಆರಿದರೇನು?
ಬೆಳಗಿದೆ ಜಗವೆಲ್ಲ
ಸೂತಕ ಹಿಡಿದಿದೆ
ಅನುದಿನ ನಮಗೆಲ್ಲ॥
ಹಣ ಮಾಡಲು ಹೆಣಗಲಿಲ್ಲ
ಹಾಕಿದ ಅರಿವಿಗೆ ಕಿಸೆ ಮೊದಲೆ ಇಲ್ಲ
ಹಾರ ತುರಾಯಿಗೆ ಹಿಗ್ಗಿದವರಲ್ಲ ।
ಬಗ್ಗಿ ತೇರು ಎಳೆಯುವವರ ಮೇಲೆ ಹತ್ತಲೆ ಇಲ್ಲ
ಸುತ್ತಲೂ ನಿನ್ನಂತಹವರನ್ನು
ಹುಡುಕಿದೆ ಇನ್ನೂ ಸಿಕ್ಕೆ ಇಲ್ಲ ॥
ಬಸನಗೌಡ ಗೌಡರ ಉಪನ್ಯಾಸಕರು ಗುಳೇದಗುಡ್ಡ
cell no 9480385494
No comments:
Post a Comment