ಚಂದ್ರಗೌಡ ಕುಲಕರ್ಣಿ
*ಅಕ್ಷರದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ, ಬೆಂಗಳೂರು*
*ರಾಜ್ಯ ಮಟ್ಟದ ಕವನ ಸ್ಪರ್ಧೆಗಾಗಿ*
ವಿಷಯ:ನನ್ನ ಬಾಲ್ಯದ ಬೇಸಿಗೆ ರಜೆ.
* ಬಾಲ್ಯದ ರಜಾ ಮಜಾ *
ಎಲ್ಲರೂ ಮರೆಯದ ಬೆಲ್ಲದಂತಹ ಬಾಲ್ಯ.
ಎಲ್ಲಿ ಕಳೆದೊಯಿತು ಗೆಳೆಯ।
ಕ್ಷಣ ನೆನೆದರೂ ಸಾಕು ನೂರು ವರುಷಗಳ
ಆಯು ನಮಗೆಲ್ಲಾ॥
ಗೋಲಿ ಗಜಗದ ಗಮ್ಮತ್ತು
ಶಾಲೆಯ ಶಿಸ್ತು ಮರೆಸಿತ್ತು।
ಮೂಲೆಯ ತುಂಬಾ ನಮ್ಮದೆ ಸಂಪತ್ತು ।
ಅಪ್ಪ ಅಮ್ಮ ಬೀದಿಗೆ ಒಗೆದಾಗ
ಜೀವವೆ ಹೋಗಿತ್ತು।
ರಂಗ,ನಿಂಗ,ಬಸಲಿಂಗನ
ತಂಡವೇ ನಮಗೆಲ್ಲಾ ಜಗತ್ತು॥
ಗುರುಗಳೆ ನೀಡಿದ ಬಿಡುವು
ದೊರೆಯಂತಹ ಮಜಾ ತರಿಸಿತ್ತು।
ಕೆರೆ ಬಾವಿಗಳೆ ಸುರಪಾನ
ಮಾವಿನ ಮರವೆ ನಮ್ಮಬಾರು
ಬೇವಿನ ಗಿಡವೆ ನಮ್ಮ ತವರೂರು
ತುಡುಗಿಲೆ ಕಲ್ಲು ಹೊಡೆದೆವು।
ಕುಡಿಮಾವು ಕಿತ್ತು ಕುಣಿದೆವು
ಮಾಲಕನ ಸಿಟ್ಟಿಗೆ ಮುದುಡಿ
ಹೊಲದ ತುಂಬಾ ಓಡಿದೆವು
ಬಿರುಬಿಸಿಲು ಬೆಗೆಯು
ಹೊರೆ ಯಾಗದಿರಲೆಂದು
ಹೂಗಾರ ಹಳೆ ಬಾವಿ ಹಾರಿದೆವು ।
ತಳ ಮುಟ್ಟಿ,ಸ್ವರ್ಗ ಕಂಡಂತೆ ಬೀಗಿದೆವು
ಹಾದಿಹೋಕರು ಬಂದು ಬೈದಾಗ
ಚಡ್ಡಿ ಹಾಕದೆ ನಾವೆಲ್ಲಾ ಓಡಿದೆವು।।
ಅಜ್ಜ ಅಮ್ಮನ ಮನೆಯು
ಹೆಜ್ಜೇನಿನಂತ ಸವಿ ಬಿಡು
ಹೆಜ್ಜೆ ಹೆಜ್ಜೆಗೂ ಪ್ರೀತಿ ನೀಡಿ
ಸಜ್ಜಕ ತುಪ್ಪ ಸುರಿದರು
ಹೊಲದಾಗ ತಿರುಗಾಡಿಸಿ
ಹೊಳೆಯಾಗ ಮೈಯುಜ್ಜಿ
ಅಳುವಾಗ ಗಲ್ಲಕ ತಿವಿದರು
ಮೈಮಣ್ಣ ಕೂಡಿಸಿದರ ಬಸವಣ್ಣ
ಅಂತ ಮೊಸಡಿಗೆ ಬಿಗಿದರು.।।
🖋ಶ್ರೀ ಬಸನಗೌಡ ಯ ಗೌಡರ
ಉಪನ್ಯಾಸಕರು
ಬಾಲಕರ ಸರಕಾರಿ ಪ.ಪೂ.ಕಾಲೇಜು ಗುಳೇದಗುಡ್ಡ
ಜಿಲ್ಲಾ: ಬಾಗಲಕೋಟೆ
9489385494
No comments:
Post a Comment