Saturday, April 22, 2023

* ಬಂತು ಫಲಿತಾಂಶ *



ಬೀಗಬೇಡ ಬಾಗಲೂಬೇಡ 
ಅಂಕ ಒಂದೇ ಅಂತಿಮವಲ್ಲ
ಅಂಕ ಮುಗಿದ ಮೇಲೆ 
ಚಿಂತೆ ಮಾಡಿ ಫಲವಿಲ್ಲ॥।

ಅನುದಿನವೂ ಓದಬೇಕು 
ಮನದಿ ಮನನ ಮಾಡಬೇಕು 
ಕೊನೆದಿನದ.ಫಲಕೆ ಇವಾಗ
ಶ್ಯಾನೆ ಚಿಂತೆ ಯಾಕೆ ಬೇಕು ।।

ದುಡಿದುದರ ಫಲವಿದು
ಬಂದಿದೆ ಪೂರ್ವ ದಿನದ ಲೆಕ್ಕ
ಮಾಡಿಹರು ಈಗ ಚೊಕ್ಕ,
ಕುಳಿತು ಚಿಂತೆ ಯಾಕೆ ಬೇಕು ।।

ಮುಂದಿದೆ ಮೂರು ಸಾವಿರ ಮೈಲು 
ಬಂದಿರುವೆ ಬರಿ ಆರು ಮೈಲು 
ಬೆಂದು ಸಾಗಿದರೆ ಬಹು ದೂರ 
ನೊಂದುಕೊಳ್ಳುವುದೇಕೆ ಬೇಕು॥

ಗೆದ್ದವರು ನಿದ್ದೆಗೆ ಜಾರಬೇಡಿ
ಎದ್ದು ನಿಂತು ಮರೆಯಬೇಡಿ 
ಸದ್ದು ಮಾಡಿ ಕೆರಳಿಸಬೇಡಿ
ಬಿದ್ದರೆ ಕಲ್ಲು ಬೀಸಲಿದ್ದಾರೆ ಜೋಕೆ॥


1 comment:

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...