ಇಲಾಖೆಗೊಂದು ನಮನ
ಅನ್ನ ,ಅಧಿಕಾರ,ಅವಕಾಶ ನೀಡಿದ ಇಲಾಖೆಗೆ ಎಷ್ಟು ಸಲಾಮ್ ಹೇಳಿದರೂ ಸಾಲದು .ಸಂಸ್ಕಾರ, ವಿದ್ಯೆ, ಉದ್ಯೋಗ, ಬದುಕು ಕಟ್ಟಿಕೊಳ್ಳಲು ತವಕಿಸುವ ಅಸಂಖ್ಯಾತ ವಿದ್ಯಾರ್ಥಿಗಳ ಆಶಾಕಿರಣವೆ ಪದವಿ ಪೂರ್ವ ಶಿಕ್ಷಣ ಇಲಾಖೆ .ಅಲ್ಲಿ ನನಗೂ ಒಂದು ಜಾಗ ಇದೆ ಎನ್ನುವುದೆ ಹೆಮ್ಮೆಯ ವಿಷಯ .ವರ್ಷದುದ್ದಕ್ಕೊ ಬೋಧಿಸಿ ಮಕ್ಕಳನ್ನು ಪರೀಕ್ಷೆ ಎಂಬ ಯುದ್ಧಕ್ಕೆ ಕಳುಹಿಸಿದ ನಮಗೆ ಮತ್ತೊಂದು ಜವಾಬ್ದಾರಿ. ಮಾತಿನ ಜಾಗೆಗೆ ಮೌನ ತಂದು ಕಾಯುವ ಕಾರ್ಯ ,ಅಂದರೆ ನಕಲು ಮಾಡುವುದನ್ನು ತಡೆಯುವ ಒಂದೇ ಕಾರ್ಯವಲ್ಲದೆ ಸೌಜನ್ಯದ ಮೂಲಕ ಪರೀಕ್ಷಾ ಕಾರ್ಯದ ಜೊತೆಗೆ ಓದಿದ ಮಕ್ಕಳಿಗೆ ನ್ಯಾಯ ಒದಗಿಸುವ ಬಹು ಅಮೂಲ್ಯವಾದ ಕಾರ್ಯಗಳು. ಅದನ್ನು ಮಾಡಿದ್ದೇವೆ ಎನ್ನುವುದೆ ಹೆಮ್ಮೆಯ ಸಂಗತಿ. ಅದು ಜಾಗೃತ ದಳದ ಸದಸ್ಯನಾಗಿರಬಹುದು ಇಲ್ಲವೆ ಮೌಲ್ಯಮಾಪಕನಾಗಿರಬಹುದು.ಇರಲಿ ಮುಖ್ಯ ವಿಷಯಕ್ಕೆ ಬರುತ್ತೇನೆ ದಿನಾಂಕ 7 ಜೂನ 2023 ರಂದು ರಾಜಧಾನಿಯಲ್ಲಿ ದ್ವಿತೀಯ ಪಿ.ಯು ಸಿ ಉತ್ತರ ಪತ್ರಿಕೆ ಮೌಲ್ಯಮಾಪನಾಕ್ಕೆ ಕರೆ ಬಂದಾಗ ಖುಷಿಯಂತೂ ಆಯಿತು .ಏಕೆಂದರೆ ತಿಂಗಳ ಸಂಬಳದೊಂದಿಗೆ ಪ್ರಯಾಣ ವೆಚ್ಚ ಹಾಗೂ ಗೌವಧನದೊಂದಿಗೆ ಪ್ರವಾಸ.ಅದಕ್ಕೆ ಅಲ್ಲವೆ ನಾನು ಎಷ್ಟು ಋಣಿಯಾಗಿದ್ದರೂ ಕಡಿಮೆ ಎಂದದ್ದು. ದಿನಾಂಕ 13.06.2023 ರ ಮೌಲ್ಯಮಾಪನ ಕಾರ್ಯದ ನಂತರ ಸ್ನೇಹಿತರಿಲ್ಲ ಸೇರಿ ಸಿಕ್ಕ ಬಿಡುವ ಬಳಸಿಕೊಂಡು ತಾರಾಲಯ ನೋಡಬೆಕೆಂದು ಯೋಜನೆ ರೂಪಿಸಿದೆವು. ನನ್ನ ಸಹಪಾಠಿ ಆಂಗ್ಲ ಭಾಷೆಯ ಉಪನ್ಯಾಸಕ ಹೆಚ್ ವಾಯ್ ಕುಂದರಗಿ ಆತನ ಗೆಳೆಯ ದಳವಾಯಿ ಎಲ್ಲರೂ ಸೇರಿ ಮೊಬೈಲ್ ತಡಕಾಡಿ ತಾರಾಲಯ ಇರವ ಜಾಗ ಪತ್ತೆಹಚ್ಚುವ ಕಾರ್ಯ ಮಾಡಿದೆವು ಕಾರಣ ಇಷ್ಟೇ ರೈಲು ಬಿಡುವ ವೇಳೆ 7.00 ಗಂಟೆಗೆ ಅಲ್ಲಿಯವರೆಗೆ ಮಾಡುವುದಾದರು ಏನು ? ಸಿಕ್ಕ ಒಂದೆರಡು ತಾಸು ಏನು ಮಾಡುವುದು. ಸದುಪಯೋಗ ಮಾಡಬೇಕಲ್ಲವೆ ? ಅದಕ್ಕಾಗಿ ಇದ್ದ ಲಗೇಜ್ ಕೆಂಪೇಗೌಡ ಬಸ್ ನಿಲ್ದಾಣದ ಲೋಕರ್ ನಲ್ಲಿಟ್ಟು ಬಿ ಎಮ ಟಿ ಸಿ ಬಸ್ ಏರಿ ತಾರಾಲಯದ ಮುಂದೆ ನಿಂತರೆ ನಿರಾಶೆಯ ಭೂತವೆ ನಮಗೆದುರಾಗಿತ್ತು ,ಯಾಕೆಂದರೆ ಅಂದು ಮಂಗಳವಾರ ರಜೆ ! ಎದೆಗುಂದುವ ಜಯಮಾನ ನಮ್ಮದಲ್ಲವಲ್ಲ ಆಸ್ವಾದಿಸುವ ಮನಸ್ಸಿದ್ದರೆ ಮತ್ತೊಂದು ಮಗದೊಂದು ಹೌದಲ್ಲವಾ ? ಸ್ನೇಹಿತ ,ಹುಚ್ಚೇಶ ಕುಂದರಗಿ ರಾಷ್ಟ್ರೀಯ ಸೈನಿಕ ಸ್ಮಾರಕ ಉದ್ಯಾನವನ ಕಡೆಗೆ ಹೆಜ್ಜೆ ಹಾಕಿದ, ಅವನಿಗೆ ನನಗಿಂತ ಬೆಂಗಳೂರು ಚಿರಪರಿಚಿತ . ಪದವಿ ಪಡೆದ ನಂತರ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗೆ ಬಂದನೇನೊ ಸರಿ ಆದರೆ ಕಾಸು ಕಾಲಿ ಮಾಡಿ ಬದುಕು ಈಜಲು ಬೋಧನೆ ಕಾಯಕ ಪ್ರಾರಂಭ ಮಾಡಿದನಂತೆ ಆ ಅನುಭವದ ಆಧಾರದ ಮೇಲೆ ರಾಷ್ಟ್ರೀಯ ಸೈನಿಕ ಸ್ಮಾರಕ ಉದ್ಯಾನವನ ಸೇರಿದ್ದಾಯಿತು. ಬೆಂಗಳೂರು ಎಂದರೆ ಕಾಂಕ್ರೀಟ್ ಕಾಡು... ಗೂಡಿನ ಮೇಲೆ ಗೂಡು ಕಟ್ಟಿ ಗಣಕಯಂತ್ರದ ಮಂತ್ರಜಪಿಸುವ ಟೆಕ್ಕಗಳ ಕಲರವವೆಂದು ಭಾವಿಸದ ನಮಗೆ ಅಲ್ಲೊಂದು ಸ್ವರ್ಗದ ತುನುಕೊಂದಿದೆ, ಹಸಿರನುಟ್ಟು ಉಸಿರು ನೀಡುವ ಹೊಸ ಆಶಾಭಾವ ಅರಳಿಸುವ ಜಾಗೆ ಇದೆ ಎಂದು ಅರಿವಾದದ್ದು ಆಗಲೇ.ನಾವೆ ಸೃಜಿಸುವ ಪ್ರಕೃತಿ ಮಡಿಲಲ್ಲಿ, ಮನಸ್ಸು ಹೃದಯ ತಂಪು ಮಾಡಿಕೊಂಡೆವು. ನಮ್ಮ ಈ ಪಯಣದ ಸವಿನೆನಪನ್ನು ಹಂಚಿಕೊಳ್ಳಲು ಹೋಂಚು ಹಾಕಿದ್ದೆ ಈ ಲೇಖನ. ಉದ್ಯಾನವನದಲ್ಲಿ ಹಕ್ಕಿಗಳ ಕಲರವ, ಅಳಿವಿನಂಚಿನಲ್ಲಿವೆ ಎಂದು ಬಾವಿಸುವಷ್ಟು ಕಡಿಮೆಯಾದ ಅಳಿಲು, ಸ್ವಚ್ಚಂದಾಗಿ ಚಿಮ್ಮುತ್ತಾ ನೆಗೆಯುವ ಆ ಸುಂದರವಾದ ಕ್ಷಣ ನಿಸರ್ಗದ ಮಡಿಲಲ್ಲಿ ಸಿಗದೆ ಇನ್ನೆಲ್ಲಿ ಸಿಕ್ಕೀತು !.ಶ್ರೀ ರಾಮನಿಗೆ ಲಂಕೆಗೆ ತೆರಳಲು ಸೇತುವೆ ನಿರ್ಮಿಸುವ ಕಾಯಕಕ್ಕೆ ಸಹಾಯ ಮಾಡಿದ ಜೀವಿ ಅಳಿಲು ಕಥೆ, ಒದ್ದೆಯಾದ ಮೈಗೆ ಮಣ್ಣು ಹತ್ತಿಸಿ ಸೇತುವೆಗೆ ಮಣ್ಣು ನೀಡಿದ ಸಣ್ಣ (ಮಹಾ) ಜೀವಿಯನ್ನೊಮ್ಮೆ ಮನ ತುಂಬಿ ನೋಡಿ ಪುಳಕಿತನಾದೆ.ಕ್ಷಣ ಕಳೆಯುವದರೊಳಗೆ ಅತ್ತಿಂದ ಪೋನ್ ರಿಂಗುಣಿಸಿತು ಅದು ಆಂಗ್ಲ ಉಪನ್ಯಾಸಕನಿಗೆ ಗೆಳೆಯನ ಸಲಹೆ, ಕಿವಿ ನಿಮಿರುವಂತೆ ಮಾಡಿತ್ತು ಅದೇನಂದರೆ ಅದೆ ಉದ್ಯಾನವನದಲ್ಲಿಯ ಯುದ್ಧಕ್ಕೆ ಸಂಬಂಧಿಸಿದ ಯುದ್ಧಾಶ್ತ್ರಗಳ ಮಾದರಿಗಳನ್ನು ನೋಡಬಹುದು ಎಂದು .ತಡ ಮಾಡದೆ ಹೆಜ್ಜೆ ಹಾಕಿ ಯುದ್ಧ ಟ್ಯಾಂಕರ್ ಮುಂದೆ ನಿಂತು ಮೊಬೈಲ್ ಶಾಟ್ ಗೆ ಮುಖ ಅರಳಿಸಿದೆವು. ಒಂದು ಕಾಲದಲ್ಲಿ ಶತೃಗಳ ಎದೆ ನಡುಗಿಸಿ ಸಮರ ವೀರರ ಗೆಳೆಯ ! ಇಂದು ನಮ್ಮ ಉದ್ಯಾನವನದ ಪ್ರವಾಸಿಗರ ಮನತನಿಸುವ ಸೈನಿಕರ ಸಾಹಸ ಸಾರುವ ಸಹೋದರ.ಸ್ವಾತಂತ್ರ್ಯ ನಂತರ ಭಾರತ ದೇಶ ದೊಡ್ಡ ಯುದ್ಧ ಮಾಡಿದ್ದೆ ನಾಲ್ಕು ಅದು ಒಂದು ಸಾರೆ ಚೀನಾದೊಂದಿಗೆ ನಾಲ್ಕು ಬಾರೆ ಪಾಕಿಸ್ತಾನದೊಂದಿಗೆ ಚೀನಾದ ಜೊತೆ ಹೊರತುಪಡಿಸಿ ಪಾಕಿಸ್ತಾನ ಜೊತೆ ಯುದ್ಧ ಮಾಡಿದ ನಾಲ್ಕು ಯುದ್ಧಗಳಲ್ಲಿ ಭಾರತ ದೇಶ ಯಶ ಕಾಣುವದರಲ್ಲಿ ಇವುಗಳ ಪಾತ್ರ ಹಿರಿದಾಗಿತ್ತು ಅದು 1947,1965-66,1971,1999,ಇನ್ನೊಂದು ಬದಿಯಲ್ಲಿ ಕ್ಷಿಪಣಿಗಳ ಮಾದರಿ, ಶತೃಗಳನ್ನು ಸಂಹಾರ ಮಾಡಲು ಭೂಮಿಯಿಂದ ಭೂಮಿಗೆ ಚಿಮ್ಮುವ ಯದ್ಧಾಶ್ತ್ರ ನಾಗ , ಅಗ್ನಿ, ಬ್ರಹ್ಮೋಸ್, ಪೃಥ್ವಿ ಇನ್ನೊಂದು ಕಡೆ ಪ್ರಭಲ ರಾಷ್ಟ್ರಗಳಿಗೆ ಕಡಿಮೆ ಇಲ್ಲದ PSLV ಯಂತಹ ಉಪಗ್ರಹ ಉಡ್ಡಯನ ಯಂತ್ರಗಳ ಮಾದರಿ. ಭಾರತದ ಹಿರಿಮೆಯನ್ನು ಪ್ರತಿ ಪ್ರವಾಸಿಗರು ಹೆಮ್ಮೆ ಪಡುವಂತೆ ಮಾಡುತ್ತಿವೆ. ಈ ಕಾರ್ಯ ಸಣ್ಣದೇನಲ್ಲ ಪ್ರತಿ ಸೈನಿಕರ ಬಲಿದಾನ ಭಾರತೀಯರ ಬೆಳಕಿನ ಕಿರಣ.ಇನ್ನೊಂದು ಕಡೆ ಯುದ್ಧ ಹಡಗುಗಳ ಮಾದರಿ.ಒಟ್ಟಾರೆ ಭೂದಳ, ವಾಯುದಳ ನೌಕಾದಳದ ಯುದ್ಧಾಸ್ತ್ರಗಳ ಮಾದರಿಗಳು ಭಾರತದ ರಕ್ಷಣಾ ವ್ಯವಸ್ಥೆಯ ಚಿತ್ರಣವನ್ನು ಮಕ್ಕಳಿಗೆ ಪರಿಚಯಿಸುವ ಪ್ರಯತ್ನ ನಮ್ಮನ್ನೂ ಸಹ ಮಾನಸಿಕವಾಗಿ ಕ್ಷಣ ಶತೃ ಗಡಿಗಳಲ್ಲಿ ತಂದು ನಿಲ್ಲಿಸಿತ್ತು.ಗಡಿಯಾರದ ಮುಳ್ಳುಗಳು ನಮಗರಿವಿಲ್ಲದೆ ವೇಗವಾಗಿ ಚಲಿಸುತ್ತಿದ್ದವು ಮತ್ತೊಂದು ಹೊಸ ಅನುಭವ.

ಆಹಾ ..ಮೆಟ್ರೋ ಮಾನವ ಭೂಮಿಯ ಮೇಲೆ ನಿರ್ಮಿಸಿಕೊಂಡ ಸ್ವರ್ಗ .ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ನಮಗೆ ಬಂಗಾರ ಬೇಕೊ ಇಲ್ಲ ನೀರು ಬೇಕೊ ಎದು ಕೇಳಿದ್ದರೆ ಖಂಡಿತವಾಗಿಯೂ ನಾವಂತೂ ನೀರೆ ಎಂದು ಹೇಳುವ ಸ್ಥಿತಿಗೆ ಬಂದು ತಲುಪಿದ್ದೆವು .ಮೆಟ್ರೋದ ಒಳಗಡೆ ನೀರಿನ ವ್ಯವಸ್ಥೆ ಮಾಡಿದ್ದರಾದರೂ ಕುಡಿಯುವ ರೀತಿ ನಮಗೆ ತಿಳಿದಿರಲಿಲ್ಲ ಗ್ಲಾಸ್ ಅಂತೂ ಇರಲಿಲ್ಲ ಕುಡಿಯುವದಾದರೂ ಹೇಗೆ ? ಪ್ಪೆಪಿನಿಂದ ಜಿಗಿಯುವ ನೀರಿಗೆ ಬಾಯಿ ತೆರೆಯುವ ಸರದಿ ಒಬ್ಬರಾದ ಮೇಲೊಬ್ಬರದು, ಬಹುಶ: ಪ್ರಾಣಿಗಳ ಅನುಕರಣೆಯೊ ಇಲ್ಲವೆ ಇತಿಹಾಸ ಮರುಕಳಿಸುವ ಮುನ್ಸೂಚನೆಯೊ ನನಗಂತೂ ಅರ್ಥ ಆಗಲಿಲ್ಲ. ಪ್ರತಿ ಐದು ನಿಮಿಷಗಳಿಗೊಮ್ಮೆ ಎರಡೂ ಬದಿಗಳಲ್ಲಿ ಬಂದು ವಿರುದ್ಧವಾದ ದಿಕ್ಕಿನಲ್ಲಿ ಹೋಗುವ ರೈಲುಗಳು ತಮ್ಮ ಕಾಯಕದಲ್ಲಿ ಮುಳಿಗಿದ್ದವು .ಗೆನು ಹೊಟ್ಟೆ ಹೊರೆಯಲು ನಿತ್ಯವೂ ಯಂತ್ರದಂತೆ ಚಲಿಸುವ ಮಾನವ ಯಂತ್ರಗಳು ಅದಾವುದರ ಪರಿವೆಯೇ ಇಲ್ಲದೆ ನೆಕಾರನ ಲಾಳಿಯಂತೆ ಅತ್ತಿಂದಿತ್ತ
ಓಲಾಡುವಂತೆ ಕಂಡಿತು.ನಿಲ್ದಾಣ ತಲುಪಿದ್ದೆ ತಡ ಇರುವೆ ಹಿಂಡಿನಂತೆ ಓಡುವ ಜನ ಇನ್ನೆಂಥಹ ನಾಗರಿಕತೆ ಕಡೆ ದಾವಿಸುತ್ತಿದೆ ? ನಾವೂ ಓಡಲೆ ಬೇಕು ಇಲ್ಲದಿದ್ದರೆ ತಲುಪಲು ತಡವಾದೀತು. ಅನಾಗರಿಕರು ಎನ್ನಲು ಜನ ತುದಿಗಾಲಲ್ಲಿ ನಿಂತಿದ್ದಾರೆ ಅದಕ್ಕೆ ಅಲ್ಲವೇ ನಾನು ನಮ್ಮ ಆಂಗ್ಲ ಉಪನ್ಯಾಸಕರಿಗೆ ಮೆಟ್ರೋ ಹತ್ತಬೇಕು ಎಂದದ್ದು.ಸಮಯ ನಮಗರಿವಿಲ್ಲದೆ ಸಾಗುತ್ತಿತ್ತು 10 ನೇ ಪ್ಲಾಟ್ ಪ್ಲಾಟ್ ಫಾರ್ಮ್ ತಲುಪಿದಾಗ ವೇಳೆ 7.50 ನಮಗಾಗಿ ಬಂದ ಗೋಲಗುಂಬಜ ಎಕಎಕ್ಸ್ ಪ್ರೆಸ್ ಗೂಡು ತಲುಪಿಸಲು ಅಭಯ ಹಸ್ತ ನೀಡಿತ್ತು.ಚುಕ್ ಬಕ್, ಚುಕ್ ಬುಕ್,ಶರವೇಗದಿಂದ ಓಡುತ್ತಿದ್ದರೆ. ಅದೆ ತಾನೇ ಆಸ್ವಾದಿಸಿ ಬಂದ ಸನ್ನಿವೇಶಗಳು ಮನ ಪಟಲದ ಮೇಲೆ ಮೂಡಿ ಚಿತ್ರದ ಸನ್ನಿವೇಶಗಳಂತೆ ಮಾಯವಾಗುತ್ತಿದ್ದವು ವೇಳೆ 10 ಗಂಟೆ, ನಿದ್ರಾ ದೇವತೆ ನಮಗರಿವಿಲ್ಲದೆ ನಮ್ಮನ್ನು ಆವರಿಸಿಕೊಂಡಳು. ತಾಯಿ ಮಗುವಿಗೆ ತೊಟ್ಟಿಲು ತೂಗುವಂತೆ ರೈಲು ಚುಕ್ ಚುಕ್ಬುಕ್ ಎನ್ನುತ್ತಾ ಓಡುತ್ತಿತ್ತು.
No comments:
Post a Comment