ಕಾಲದ ನೆರಳಿನಲ್ಲಿ ನೆಲ ಕರಗಿಸಿ
ಕಾಲೆಳೆಯುವ ಜಾಲವುಂಟು ಜಗದಲ್ಲಿ।
ಗೆಲವು ಕಾಣಲು ಬಲವೊಂದೆ ಸಾಲದು
ಛಲದೊಂದಿಗೆ ಬೇಕು ಸ್ವದೇಶಿ ಬಲ॥
ಏರುವದೊಂದೆ ಇಳಿಯಲಲ್ಲ
ಪರರ ಹಂಗು ಗೌರವಕೆ ಕುಂದು
ಯಾರು ಸಹಿಸಬೇಕು ಈ ತಂತ್ರ
ಸ್ವದೇಶಿಯೊಂದೆ ಇದಕ್ಕೆ ಮಂತ್ರ॥
ಯಾರು ನಮಗೆ ಹಿರಿಯರಲ್ಲ
ಕಿರಿಯತನದ ಕೀಳುರಮೆ ಸಲ್ಲ।
ಹೊರೆಯಾದರು ಪರವಾಗಿಲ್ಲ
ಸರಕಾಗಲಿ ನಮ್ಮನೆ ನಮ್ಮಿಂದ॥
ಬೆರೆತು ಬಾಳಲೂ ತಿಳಿದಿದೆ
ಮರೆತು ನಡೆಯಲು ಗೊತ್ತಿದೆ।
ಪಾರತಂತ್ರ್ಯದ ಹೀನ ಬಾಳು
ಹೊರೆಯಾಗದಿರಲಿ ತಮ್ಮಿಂದ॥
ಜಗವು ಬಾಳಲೆಲ್ಲರಿಗೂ ದೇವ
ನೀಡಿದ ಅಭಯ ಕಾಣೋ
ಅಸಮತೆಗೆ ಜಾಗವಿಲ್ಲ ಹೇಳು
ಜಪವೊಂದೆ ಸ್ವದೇಶಿ ನಮ್ಮಿಂದ॥
🖋ಬಸನಗೌಡ. ಯ.ಗೌಡರ
ಉಪನ್ಯಾಸಕರು ಗುಳೇದಗುಡ್ಡ
No comments:
Post a Comment