ಬಯಸದೆ ಬಂದ ಭಾಗ್ಯ, ಬೇಡಿದೆನೇನು? ಹಾಗೆ ತಿಳಿದರೂ ತಪ್ಪೇನೂ ಅಲ್ಲ ಬಿಡಿ,ಪಡೆದದ್ದಂತು ಸತ್ಯವೆ ! ಗುಳೇದಗುಡ್ಡ ತಾಲೂಕು ನೌಕರರ ಸಂಘದ ಅಧ್ಯಕ್ಷರ ಪದಗ್ರಹಣ ಹಾಗೂ ವಯೋ ನಿವೃತ್ತಿ ಹೊಂದಿದ ಅಧ್ಯಕ್ಷರಿಗೆ ಶುಭಕೋರುವ ಸಮಾರಂಭ. ಆ ಸಮಾರಂಭದಲ್ಲಿ ನನಗೂ ಸನ್ಮಾನ, ಇದೇನಿದು ಗೋಕುಲಾಷ್ಟಮಿಗೂ ಇಮಾಮ ಸಾಬಿಗೂ ಏನು ಸಂಬಂಧ ಅಂತಿರಾ, ಇಂದು ದಿನಾಂಕ 19.08.2023 ರಂದು ಪರೀಕ್ಷೆಯ ಕಾರ್ಯದ ಮುಕ್ತಾಯದ ನಂತರ ನಮ್ಮ ಸಂಸ್ಥೆಯ ಪ್ರಭಾರ ಪ್ರಾಚಾರ್ಯ ಹಾಗೂ ಸ್ನೇಹಿತರಾದ ವಿಠ್ಠಲ ಕಳಸಾ ನನ್ನ ಹತ್ತಿರ ಬಂದು ಗುಳೇದಗುಡ್ಡ ತಾಲೂಕು ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಹೋಗೋಣ ಎಂದರು. ಅವರಾದರೂ ಸರಿ, ನೌಕರರ ಸಂಘದ ಸದಸ್ಯರು ನಾವು ಹೋಗದೆ ಇದ್ದರೆ ನಡೆದೀತು ಎಂದುಕೊಂಡೆ ನಂತರ ಕಾಲೇಜಿನ ಪ್ರತಿನಿಧಿಗಳಾಗಿ ಹೋಗಬಹುದೆಂದು ತಿಳಿದು ಅದಕ್ಕೆ ನಾನು ಹೇಳಿದೆ, ಸರ್ ಅವರು ಅಧ್ಯಕ್ಷರಾದ ಪ್ರಯುಕ್ತ ಪೇಡೆ ನೀಡಿ ನಮ್ಮ ಬಾಯಿ ಸಿಹಿ ಮಾಡಿದ್ದಾರೆ ಅವರಿಗೆ ಹೂವು ನೀಡಿ ಸಂತೋಷ ನಡೆಸಬಹುದುಲ್ಲವೆ, ಎಂದೆ .ಸಲೆಹೆ ಸರಿಯಾಗಿರಬಹುದೇನೊ ತಕ್ಷಣವೆ ಕಾರ್ಯ ಪ್ರವೃತ್ತರಾಗಿಯೆ ಬಿಟ್ಟರು ನಾನು ಮಾತ್ರ ನಿಧಾನವಾಗಿ ಕಾರ್ಯಕ್ರಮದ ಸ್ಥಳವಾದ ಶಿಕ್ಷಕರ ಸೊಸೈಟಿಯ ಕಡೆಗೆ ಹೆಜ್ಜೆ ಹಾಕಿದೆ ಆದರೆ ಆಗಲೆ ಸಮಯವಾಗಿದ್ದರಿಂದ ಉದ್ಘಾಟಕರಾಗಿ ಆಗಮಿಸಬೇಕಾದ ಮಾನ್ಯ ಕೇತ್ರ ಶಿಕ್ಷಣಾಧಿಕಾರಗಳ ಅನುಮತಿಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿಯೆ ಬಿಟ್ಟಿತು ವೇದಿಕೆಯ
ಮೇಲೆ ಪ್ರಾಥಮಿಕ, ಪ್ರೌಢ ಶಾಲೆಯ ಶಿಕ್ಷಕರ ಸಂಘಟನೆಯ ಅಧ್ಯಕ್ಷರುಗಳು, ಜ್ಯೋತಿಬಾ ಪುಲೆ ಶಿಕ್ಷಕಿಯರ ಸಂಘದ ಆಧಕ್ಷರು ಆಸೀನರಾದರು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಉದ್ಘಾಟನೆಯ ನಂತರ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ಅಭಯ ಹಾಗೂ ಜಿಲ್ಲಾ ಅಧ್ಯಕ್ಷರ ಸಂಘಟನೆಯ ದಾರಿ ಮತ್ತು ಗುರಿ ತಲುಪಲು ಅನುಸರಿಸಬೇಕಾದ ಕಾರ್ಯತಂತ್ರದ ಹಿತವಚನ ನೀಡಿದರು, ಹಾಗೆಯೆ ವಯೋನಿವೃತ್ತಿಯಿಂದ ನಿರ್ಗಮಿಸುತ್ತಿರುವ ಮಾಚಾ ಸರ್ ರವರ ನೀಡಿದ ಸಂಘಟನೆಯ ಹಿನ್ನೋಟವು ಹಾಲಿ ಅಧ್ಯಕ್ಷರಾದ ಜಾಧವರವರಿಗೆ ಸ್ಫೂರ್ತಿಯ ಸೆಲೆಯಾಯಿತು.ಅಧ್ಯಕ್ಷರಾದ ಜಾದವ ಸರ್ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ನೌಕರರ ಹಿತಕಾಯಲು ಹಿರಿಯ, ಕಿರಿಯ ನೌಕರರ ಸಲಹೆ ಪಡೆದು ಸಮಸ್ಯೆಯಲ್ಲಿರುವ ನೌಕರರಿಗೆ ಸ್ಪಂದಿಸಿವ, ಸೇವಕನಾಗುವ ವಚನವಿತ್ತರು ಇದೆ ಸಂದರ್ಭದಲ್ಲಿ ವಿವಿಧ ಸಂಘಟನೆಯ ಅಧ್ಯಕ್ಷರಿಗೆ ಸನ್ಮಾನಿಸುವ ಮೂಲಕ ಸಮ ಸಮಾಜದ,ಸಮೃದ್ಧಿಯ ಬಾಳಿನ ಸೇವೆಗೆ ಸಹಕಾರ ನೀಡಲು ಕೋರಿದರು ಈ ಸಂದರ್ಭದಲ್ಲಿ ನಾನು ನನ್ನ ಪಕ್ಕದಲ್ಲಿ ಕುಳಿತಿದ್ದ ಶಿಕ್ಷಕ ಸಹೋದರರಿಗೆ ನಾನು ಕೂಡಾ ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷನಾಗಿರುವೆ ಇಲ್ಲಯವರೆಗೆ ಪದವಿ ಪೂರ್ವ ಕಾಲೇಜು ಕಾಲೇಜುಗಳ ಉಪನ್ಯಾಸಕರನ್ನು ಶಿಕ್ಷಕರು ಎಂದು ಭಾವಿಲ್ಲ ಹಾಗಾಗಿ ಇಂತಹ ಶಿಕ್ಷಕರ ಸಂಘಟನೆಯ ಕಾರ್ಯಕ್ರಮದಲ್ಲಿ ನಮ್ಮ ಭಾಗವಹಿಸಿಕೆ ಇಲ್ಲ ಎಂದು ಔಪಚಾರಿಕವಾಗಿ ಹೇಳಿದೆ. ಹಾ... ನಮಗೆ ಗೊತ್ತೆ ಇಲ್ಲ ಸರ್ ತಾವು ಕೂಡಾ ಶಿಕ್ಷಕರ ಸಂಘಟನೆಯಲ್ಲಿ ಕೆಲಸ ಮಾಡುತ್ತಿರುವದರಿಂದ ಸನ್ಮಾನಕ್ಕೆ ನೀವೂ ಅರ್ಹರು ಎಂದು ಒತ್ತಾಯದಿಂದ ಸನ್ಮಾನಿಸಿದರು, ಇದಕ್ಕೆ ಏನು ಹೇಳುವುದು?ಕೇಳಿ ಪಡೆದದ್ದಾ ಅಥವಾ ಸಂಘಟನೆಯಲ್ಲಿ ತೊಡಗಿ ಉಪನ್ಯಾಸಕರ ಸಮಸ್ಯೆಯ ಕುರಿತ ಧ್ವನಿಗಾ ! ಅಂತೂ ಜವಾಬ್ದಾರಿ ಹೆಚ್ಚಿಸಿದ ಸನ್ಮಾನಕ್ಕೆ ಅನಿರೀಕ್ಷಿತವಲ್ಲದೆ ಇನ್ನೇನು ಹೇಳುವುದು ? ಎಲ್ಲವೂ ಭಗವಂತನ ಕೃಪೆ ," ತುಳಿದು ಬದುಕುವುದು ಬದುಕಲ್ಲ, ತಿಳಿದು ಬದುಕುವುದು ನಿಜವಾದ ಶ್ರೇಷ್ಠ ಬದುಕು" ಎಂಬ ತತ್ವದಲ್ಲಿ ನಂಬಿಕೆ ಇಟ್ಟ ನನಗೆ ಇವತ್ತಿನ ಅನಿರೀಕ್ಷಿತ ಘಟನೆ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದ್ದಂತು ಅಷ್ಟೇ ಸತ್ಯ. ಸಂಘಟನೆಯ ಸರ್ವವರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳು.🙏🙏
No comments:
Post a Comment