ಚಂದಿರನ ಚುಂಬಿಸಲು
ನಂಬಿ ಬಂದವರು ನೂರಾರು ।
ನಮ್ಮವರೂ ಬಂದಿಹರು
ವಿಕ್ರಮ್ ನ ಕಳುಹಿಸಿಹರು
ಸಕ್ರಮಕೆ ಕಾದು ನಿಂತಿಹರು॥
ಅಂಬರದಿ ಅಲೆಯುವ
ಕಂದಮ್ಮಗಳು ನೂರು ಜನ।
ಹೆಡೆ ಎತ್ತಿ ಓಡಾಡುವರು
ನಡೆಯುತ್ತಾ ಉರುಳುವರು
ತೊಡೆ ತಟ್ಪಿ ನಿಲ್ಲುವರು ಕೆಲವರು॥
ಹಿಡಿಮಣ್ಣು ಪಡೆದು
ಹಿಗ್ಗಲು ಬಂದವರು ನನ್ನ ಜನ ।
ಕಡೆಯದೆಂಬುದಿಲ್ಲ ಈ ದಿನ
ಪಡೆದು ಬೀಗ ಬೇಕಾಗಿದೆ
ಮೊದಲು ನಾವಿಂದು ॥
ಸಂಬಂಧ ಬೆಳೆಸಲು
ಅಂಬೆಗಾಲಿನ ನಡೆ ನಮ್ಮದು।
ಆಲಿಂಗನಕೆ ತಡಮಾಡದಿರು
ಅಂಗುಲಿಮಾಲನ ಅವತಾರವೆಂದು
ನುಂಗದಿರು ನನ್ನವರನು.॥
ಕಳುಹಿಸಿದ ಕಂದಮ್ಮಗಳ
ಆಯು ಒಂದು ದಿನ ।
ಅದು ನಿನಗೆ ಹದಿನಾಲ್ಕು ದಿನ
ತಡೆದರದು ತಂಪಿನ ಕತ್ತಲೆಯ ದಿನ
No comments:
Post a Comment