ಭುವನದ ಗಿರಿಗಳಲರಳುವ
ಹಿರಿಮೆಯ ಭಾರತ ದ್ವಜ ಸುಮವು।
ಸೋಮನ ಮುಡಿಗೇರಿಸಿ
ವಿಕ್ರಮ ಸಾಧಿbhgbಸಿದರು ಈ ದಿನ
ವಿಜ್ಞಾನಿಗಳೆ ನಿಮಗಿದು ನಮನ॥
ಜಗವೆ ಪಠಿಸಿದೆ ಭಾರತ ಕುವರರ
ಹಠ ಸಾಧನೆಯ ಶಶಿಯೊಡನಾಟ।
ಋಷಿಮುನಿಗಳ ತ್ಯಾಗದ ಫಲಕೆ
ಹೃದಯ ತುಂಬಿದ ಈ ನಮನ
ವಿಜ್ಞಾನಿಗಳೆ ನಿಮಗಿದು ನಮನ॥
ಬಂಪಂಅಂಇಅಂನ
ಒಂದೇ ಎರಡೆ ಹಗಲಿರುಳೆನ್ನದೆ
ಹಾಕಿದಿರಿ ಶ್ರಮ ನೂರಾರು ದಿನ।
ತಿಂಗಳ ಬೆಳದಿಂಗಳನೇರಿಗೆ
ಅರಳಿತು ಪ್ರತಿ ಭಾರತೀಯನ ವದನ
ವಿಜ್ಞಾನಿಗಳೆ ನಿಮಗಿದು ನಮನ॥
ಜಗದಗಲ ಹಾರೈಕೆಯ ಮನ
ಸಾಗಿತು ಬಾನಂತರ ಮನ್ವಂತರ।
ಭಾವ ಅರುಳಿ ಆನಂದ ಬಾಷ್ಪ
ಭಾರತಾಂಭೆ ಮೊಗ ಉದ್ಯಾನವನ
ವಿಜ್ಞಾನಿಗಳೆ ನಿಮಗಿದು ನಮನ॥
ಭಾರತ ಭವಿಷ್ಯ ಬಾನೆತ್ತರಕ್ಕೇರಿಸಿದ
ಇಸ್ರೋ ಋಷಿಮುನಿಗಳೆ ನಿಮಗಿದು।
ಕನ್ನಡ ನಾಡಿನ ಸವಿ ನುಡಿ ನಮನ
ಹೃದಯ ತುಂಬಿದ ಕವಿ ನುಡಿನಮನ
ವಿಜ್ಞಾನಿಗಳೆ ನಿಮಗಿದು ನಮನ॥
No comments:
Post a Comment