*ನಡೆದು ಬಂದಾ ನಾಡ ಹಬ್ಬ,*
ಕನ್ನಡ ಕಟ್ಟಿದ ಕಲಿಗಳ ಬಲವು
ಚಲುವಾಗಿದೆ ದಸರೆಯಲಿಂದು ।
ವಿಜಯನಗರದ ಹಕ್ಕ ಬುಕ್ಕರ ಛಲ
ರೆಕ್ಕೆ ಬಲಿಯಿತು ಕನ್ನಡಿರಿಗಂದು ॥
ದಕ್ಷಿಣದ ತುಂಬಾ ರಾಯರೆ ಬಂಧು
ಸಂಸ್ಕೃತಿ ಮೆರೆದರು ಬಹು ಚಂದ ।
ವಿಜಯದಸಮಿಯ ಅಂಬಾರಿ
ಗಜ ನಡೆಯಿತು ಗಾಂಭೀರ್ಯದಿಂದ॥ಆಗಾಗಘ್
ಬಹಮನಿ ಮತ್ಸರ,ತತ್ತರಿಸಿತು ಕಿಷ್ಕಂದೆ
ಕಸಿದರು ಕನ್ನಡಿಗರಾನಂದ।
ರಕ್ಕಸ ತಂಗಡಗಿ ಮೋಸದ ಯುದ್ದ
ಹಂಪೆಯು ಕೊಂಪೆ ಆ ದಿನದಿಂದ ॥
ರಾಜ ಒಡೆಯರ ದಸರಾ ಕಾಳಜಿ
ಚಲುವಾಗಿದೆ ಮೈಸೂರಿಗೆ ಬಂದು.
ಬೆಳಗಲಿ ಸಂಸ್ಕೃತಿ ಕರಗಲಿ ವಿಕೃತಿ
ಬೆಳಕು ಹರಿಯಲಿ ಜ್ಞಾನ ಬಲದಿಂದ
ಕಲ್ಮಷ ಕರಗಲಿ ನಲ್ಮೆಯು ಉಲಿಯಿಲಿ
ಸದ್ಭಾವ ಹರಡಲಿ ನಾಡಿನ ಜನರಿಂದ।
ಸಾವಿರ ಜಾತಿ ತಾರತಮ್ಯ ಉರಿಯಲಿ
ಹೊರೆಯಾಗಿವೆ ನಮಗಿಂದು॥
ಅರಿವಿನ ಗುರು, ತೋರಿಸಿದಾ ಗುರಿ
ನಾವೆಲ್ಲಾ ಒಂದೆ, ನಮಗೆಲ್ಲಾ ಒಂದೆ।
ಹರಿಯುವ ರಕುತದ ಗುಣ ಒಂದೆ
ಅದರಲಿ ಸಾಗಿಸುವ ಜೀವ ಕಳೆಯೊಂದೆ ॥
ಬುದ್ಧ ಬಸವ ಏಸು ಪೈಗಂಬರ
ತೋರಿದ ಪಥ ಅದು ಒಂದೆ॥
🖋ಬಸನಗೌಡಗೌಡರ
ಉಪನ್ಯಾಸಕರ ಗುಳೇದಗುಡ್ಡ
No comments:
Post a Comment