* ಉರಿದ ಧರಣಿ *
ಬಿರುಬಿಸಿಲ ಬಾಣಕ್ಕೆ ಬೀಜ ನಸುನಾಚಿ
ಹೊಸ ಬಾಳು ಕಟ್ಟದೆ, ಕರಗಿ ಕಲ್ಲಾಗಿದೆಯಲ್ಲಾ।
ಅರಳು ಮರುಳೆಮ್ಮ ಬಾಯ್ದೆರೆವ ಬಾಲೆಗೆ
ಅಕ್ಷರಗಳೋಲೆ ನಮ್ಮೊರ ಕೆರೆಯಲ್ಲಿ ॥
ಭೂಮಿಗೆ ಬಾರವಾಗಿದೆ ಬರಸಿಡಿಲು
ಬಾಡತಿಹವು ಎಲೆ ಬಳ್ಳಿ ,ಹಾರುತಿವೆ ಏರಿ।
ಕಟ್ಟಿದ ಕನಸುಗಳು ಕಮರಿ ಬಿದ್ದವು ಜಾರಿ
ಇವಾಗೇನು ಅಲ್ಲ, ಇದು ಯಾವಾಗಲೂ ಅಲ್ಲ॥
ಧರಣಿಗೆ ದುಃಖ ಬಂದಾಗಲೊಮ್ಮೆ ಮರಣ
ಕಿರಾಣಿ ತರಲು ನಮಗಿಲ್ಲ ದಮ್ಮಡಿ ಶರಣ।
ಹೂರಣ ತಿಂದವನಿಗಾಗುವದಿಲ್ಲ ಜೀರ್ಣ
ಹಸಿದವನಿಗೆ ಚೂರು ರೊಟ್ಟಿ ಸಿಗಲೊಲ್ಲ ॥
ಮದ ಬಂದಾಗ ಸೌದೆಯಂತೆ ಉರಿದ
ಬೂದಿಯೊಂದೆ ಮಹಾ ಮನೆಯಂದ।
ಮನುಷ್ಯನ ಮಹಾಕಾರ್ಯಕೆ ಮಾತೆ
ಮುನಿಸಿಕೊಂಡರೆ ತಾಳಬೇಕು ನಾವೆಲ್ಲಾ।।
ಕೆರೆಯ ಕೆಳಗಿನ ಕರಿಯ ಮಣ್ಣಿಗೆ
ನದಿಯ ಒಳಗಿನ ಮರಳು ಮಣ್ಣಿಗೆ।
ಕಾಯ್ದು ಕುಳಿತವರೆ ಹಿರಿಯರಾದರೆ
ಮೆಯ್ದ ಪಶು ಬಲಶಾಲಿಯಾಗುವದಲ್ಲ॥
ಆಳುವ ಅರಸರ ಆರು ಕಾಸಿನ ಮಜ್ಜಿಗೆ
ಸಾಲುಗಟ್ಟಿ ಬಂತು ಸಲಗದಂತ ಹೆಜ್ಜೆ
ಹೇಳವಂಗೇನುಗೊತ್ತು ನಡಗತೈತಿ ಕೈಕಾಲು
ಅಳುವದೊಂದೆ ಬಾಕಿ ಉಳಿದಿದೆಯಲ್ಲಾ॥
No comments:
Post a Comment