ಚಿಕ್ಕ ಕಥೆ
ದಾರಿ ಬಿಟ್ಟವನು ದಾರಿ ತೋರಿಸಿದಾಗ
ಒಂದು ಊರಿನಲ್ಲಿ ಒಬ್ಬ ಹನಮಂತ ಅಂತ ಹೆಸರಿನವನಿದ್ದ ಆತ ಕುಡಿತದ ವ್ಯಸನಿಯಾಗಿದ್ದ. ಆತ ಕುಡಿತಕ್ಕೆ ಎಷ್ಟೊಂದು ಅಂಟಿಕೊಂಡಿದ್ದ ಎಂದರೆ ಕುಡಿತವನ್ನು ಆತ ತನ್ನ ಬದುಕಿನ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡಿದ್ದ ಅವನು ದಿನನಿತ್ಯ ಕಲ್ಲು ಕೆಲಸಕ್ಕಾಗಿ 500 ರೂ ಸಂಬಳ ಪಡಿಯುತ್ತಿದ್ದ ಅದರಲ್ಲಿ 300 ರೂ ಗಳನ್ನು ತನಗಾಗಿ ಅಂದರೆ .ತಂಬಾಕು ,ಎಲೆ ಅಡಿಕೆ ಹಾಗೂ ಕುಡಿಯಲು ಬಳಸುತ್ತಿದ್ದ. ನಂತರ ಉಳಿದ. 200 ರೂ.ಗಳನ್ನು ತನ್ನ ಮನೆಯ ಖರ್ಚಿಗೆ ಮೀಸಲಿಟ್ಟದ್ದ ಹಣ ಏನೋ ಕಡಿಮೆಯೇ , ಆದರೆ ಆತನ ನಿಯತ್ತು ಕೂಡಾ ಗಮನಿಸಬೇಕಾದದ್ದೆ . ಮನೆಯ ಹೆಂಡತಿಯನ್ನು ಸಂಪೂರ್ಣ ಕೈ ಬಿಡದೆ .ಇತ್ತ ಕುಡಿತದ ಚಟವನ್ನು ಬಿಡದೆ ಸಮತೋಲನ ಸಾಧಿಸಿದ್ದ. ಕುಡಿದು ರಸ್ತೆಯ ಬದಿಯಲ್ಲಿ ವಾಸ ಮಾಡಿದರೆ ಏನು ಮಾಡುವುದು.?ಅಷ್ಟರ ಮಟ್ಟಿಗೆ ಅವನನ್ನು ಒಳ್ಳೆಯವನು ಎನ್ನಬಹುದೇನೋ ? ಇರಲಿ ಈತನಿಗೆ ಕುಡಿತಕ್ಕೆ ಸರಾಯಿ ನೀಡವವನಾದರೂ ಯಾರು ? ಆತ ಒಬ್ಬ ಶೇಟನ ಮಗ ಒಂದೂ ದಿನ ಕುಡಿದವನಲ್ಲ ಶ್ರೀಮಂತಿಕೆಗೂ ಕಡಿಮೆಯೇನಲ್ಲ ಯಾಕೆ ಹೇಳಿ ? ಅದರ ವ್ಯವಹಾರವೆ ಹಾಗೆ ಸರಾಯಿ ಮಾರಾಟದಿಂದ ನಷ್ಟ ಅನುಭವಿಸಿ ಬಡವನಾಗಿದ್ದಾನೆ ಎನ್ನುವುದನ್ನು ನಾನಂತೂ ಕೇಳಿಲ್ಲ ಹಾಲು ಮಾರಾಟ ಮಾಡಬೇಕೆಂದರೆ ಬಳಕೆ ಮಾಡುವವನ ಹತ್ತಿರ ಉತ್ಪಾದಕನೇ ಹೋಗಬೇಕು. ಆದರೆ ಇಲ್ಲಿ ಹಾಗಲ್ಲ ಮಾರಾಟಗಾರನ ಹತ್ತಿರವೆ ಬಳಕೆದಾರ ಹೋಗಬೇಕು ಹಾಗಾಗಿ ಮಾರಾಟಗಾರ ಎಂದೂ ಬಡವನಾಗಲಾರ. ಹಣ ಹೆಚ್ಚು ಸೇರಿದಂತೆ ದೇಹವು ಸೌಕರ್ಯ ಹೆಚ್ಚು ಕೇಳುತ್ತಾ ಹೋಗುತ್ತದೆ. ನಾವು ನೀಡುತ್ತಾ ಹೋದರೆ ಪರಿಣಾಮ ದೇಹದ ಗಾತ್ರ ಏರುತ್ತಾ ಹೋಗುತ್ತದೆ. ದೇಹದ ಗಾತ್ರ ಹೆಚ್ಚಾದಂತೆ ಅದು ರೋಗಗಳ ಆಶ್ರಯ ತಾನವಾಗುತ್ತದೆ .ಅವುಗಳನ್ನು ಹೊರದೋಡಿಸಲು ವೈದ್ಯರನ್ನು ಮಿತ್ರರನ್ನಾಗಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ದೇವರು ನೀಡಿದ ಅವಧಿ ಕಡಿಮೆಯಾಗುತ್ತಾ ಸಾಗುತ್ತದೆ ಈ ಅವಧಿಯನ್ನು ಹೆಚ್ಚಿಸಲು ಮತ್ತೆ ವೈದ್ಯರ ಸಲೆಹೆ ಕೇಳಬೇಕು. ಅವರಾದರೂ ಹೇಳುವುದೇನು. ದೇಹ ದಂಡನೆ ಪ್ರಾರಂಭ ಮಾಡಬೇಕು, ಮುಂಜಾನೆ ಎಡು ಮೂರು ಕಿ.ಮೀ ನಡೆಯಬೇಕು, ಹೀಗೆ ಮಾಡುವದರಿಂದ ಲಾಭಗಳು ಅನೇಕ ಇವೆ ಅನ್ನುವುದು ಅಷ್ಟೇ ಸತ್ಯ ಕೂಡಾ. ಬರ್ನಾರ್ಡ್ ಷಾ ನನ್ನು ಯಾರೋ ಒಬ್ಬರು ಪತ್ರಕರ್ತರು ಕೇಳಿದರಂತೆ ನಿಮ್ಮ ಆರೋಗ್ಯದ ಗುಟ್ಟು ಏನು ,ನೀವು ವ್ಯಾಯಾಮ ಏನಾದರೂ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರಂತೆ ಅದಕ್ಕೆ ಬರ್ನಾರ್ಡ್ ಷಾ ಹೇಳಿದರಂತೆ ನಾನು ವ್ಯಾಯಾಮ ಏನು ಮಾಡುವುದಿಲ್ಲ ,ಬದಲಾಗಿ ವ್ಯಾಯಾಮ ಮಾಡುವವರು ಸತ್ತರೆ ನಾನು ಮಣ್ಣು ಕೊಡಲು ನಡೆದುಕೊಂಡೆ ಹೋಗುತ್ತೇನೆ ಎಂದರಂತೆ ಇದು ನಡಿಗೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ. ಅದಕ್ಕಾಗಿ ಆ ಶೇಟನ ಮಗನೂ ಮಾಡುತ್ತಿದ್ದದ್ದು ಅದನ್ನೇ. (ಮುಂಜಾನೆಯ ನಡಿಗೆ) ಅವನ ಮನೆಗೆ ಅನತಿ ದೂರದಲ್ಲಿ ಒಂದು ಶಾಲೆ ,ಶಾಲೆಗೆ ಒಂದು ಮೈದಾನ ಅಲ್ಲಿ ಶೇಟನ ಮಗ ಸುತ್ತ ಹಾಕುತ್ತಿದ್ದ ಒಂದೊ ಎರಡೋ ......ಕನಿಷ್ಠ ಹತ್ತಾದರೂ ಹೊಡದೆ ಮನೆ ಸೇರುತ್ತಿದ್ದ ಇತ್ತ ಕಡೆ ಹನಮಂತನಿಗೆ ಮುಂಜಾನೆ ಒಂದೆರಡು ಗ್ಲಾಸ್ ಹಾಕದಿದ್ದರೆ ಆಗದು ಆ ಕಾರಣಕ್ಕಾಗಿ ಆತ ಬೇಗ ಎದ್ದು ಸರಾಯಿ ಅಂಗಡಿ ಮಂದೆ ಕಸ ಹೊಡೆದು ಅಲ್ಲಿ ಒಂದಷ್ಟು ನೀರು ಚೇಲ್ಲುತ್ತಿದ್ದ. ತಾನೊಬ್ಬ ನಿಷ್ಠೆಯಿಂದ ಇದ್ದವನು ಎಂದು ತೋರಿಸಿಕೊಳ್ಳುತ್ತಿದ್ದನೋ ಅಥವಾ ಶೇಟನ ಮಗ ಬಂದು ಈ ಕೆಲಸ ಮಾಡಿ ತನಗೆ ಸರಾಯಿ ಕೊಡುವುದು ಲೇಟಾಗಬಹುದೆಂದು ಹಾಗೆ ಮಾಡುತ್ತಿದ್ದನೊ ಏನೊ. ಒಟ್ಟಾರೆ ಸರಾಯಿ ಅಂಗಡಿ ಮುಂದಿನ ಅಂಗಳ ಜಳ ಜಳ. ಹನಮಂತ ಈಗ ಶಾಲಾ ಕಂಪೌಂಡು ಮೇಲೆ ಹಾಜರ್ ,ಸುತ್ತುಗಳ ಎಣಿಕೆ ಪ್ರಾರಂಭಿಸುತ್ತಿದ್ದ ಒಂದೊ ,ಎರಡೊ.... ಶೇಟ ಸುತ್ತುತ್ತಲೆ ಇರುತ್ತಿದ್ದ ಇತ್ತ ಕಡೆ ಸೂರ್ಯನಿಗೇನು ಬಿಡುವೆ! ತನ್ನ ಕಾಯಕ ಪ್ರಾರಂಭ ಮಾಡಿಯೆ ಬಿಡತ್ತಿದ್ದ .ಹನಮಂತನಿಗೆ ಮಾತ್ರ ಸಂಕಟ ಯಾವಾಗ ಸುತ್ತು ಮುಗಿಯುತ್ತವೆ ?... ಧನಿ " ನಿಮಗೇನಾದರೂ ಬಾಳ್ವೆ ಮಾಡಿಕೊಂಡು ಹೋಗಲು ಬರುತ್ತದೆಯೆ ? ಸುತ್ತು ಬಿಡಲು ಸೂರ್ಯ ನೆತ್ತಿಯ ಮೇಲೆಯೇ ಬರಬೇಕೆ ? " ಈಗ ಶೇಟನ ಮಗನಿಗೆ ತಲೆ ಸುತ್ತು ಬೀಳುವದೊಂದೆ ಬಾಕಿ . ಮನದಲ್ಲಿ ಮುಗಳ್ನಕ್ಕ ಶೇಟನ ಮಗ "ಇದಕ್ಕ್ಕಲ್ಲವೆ ಹಿರಿಯರು ಹೇಳಿದ್ದು
" ಗ್ರಾಹಕರೆ ದೇವರು " ಎಂದುಕೊಳ್ಳುತ್ತಾ ಮನೆ ದಾರಿ ಹಿಡಿದ.