ಆಧುನಿಕ
ಧನಿವರಿಯದೆ ದುಡಿದು ಆದ
ಈ ಧನಿಕ , ಆಧುನಿಕ
ದಿನವಿಲ್ಲ ತನಿದು ಮನ ಅರಳಿ
ಗುಣ ಹೂವಾಗಲು,
ವನವಾಗಿದೆ ಬರಿ ಕೊರಡಿಲ್ಲಿ॥
ಮನರಂಜನೆ ಇಂದು
ಮನೆಯ ಬಾಗಿಲು ಮುಂದೆ
ಮನ ಬಾಗಲು ದಿನವಿಲ್ಲ
ಹಣವೊಂದೆ ಹರನಿಲ್ಲಿ
ಗುಣ ಕೇಳಲಾರಿಲ್ಲ ಜಗದಲ್ಲಿ॥
ಕಾಯದೆ ವಿಧಿಯಿಲ್ಲ
ಕರ್ಮ ಕಟ್ಟಿದ ಬುತ್ತಿ
ಕೈಚಳಕ ಮಾಡಲಿದು ಜಾದುವಲ್ಲ
ಬದ್ದತೆ ಬಳಿಯಿರಲು ವಿದ್ಯೆ
ಸದ್ದು ಮಾಡದೆ ಸನಿಹದಲ್ಲಿ.॥
ಸಂಬಂಧ ಸಹಾಯಕಿರುವ
ಅನುಬಂಧ ಬೆಳೆಸಿದರೆ ಚಂದ
ಸಡಿಲಾದರೆ ಗಡಿ ದೂರ
ಪಡೆಯಲೇನದು ಕಡವೆ ?
ನೀಡಿದಷ್ಟೆ ಪಡೆಯಬೇಕಿಲ್ಲಿ॥
No comments:
Post a Comment