Sunday, November 12, 2023

* ದೊರೆಯಾದ ದಾಸ *



ಹರಿ ಪಾದಕೆರಗಿ ದೊರೆಯಾದ 
ಈ ದಾಸ, ಆದಿಕೇಶವನ ದಾಸ।
ದೊರೆತನವ ತೊರೆದು ಹರಿನಾಮವುಂಡು 
ದಾರಿ ತೋರುವ ಗುರುವಾದ ಕನಕದಾಸ॥

ನಾದದ ಮಹಿಮೆ,ಹಿಡಿದ ತಾಳ ತಂಬೂರಿ
ಆದ ಶ್ರೀಹರಿ ದಾಸ,ತುಳಿದ ವ್ಯಾಸರ ದಾರಿ।
ತೊರೆದ ಸಂಸಾರ, ಪಡೆದ ಸಂಸ್ಕಾರ
ಬರೆದಿದ್ದು ಬದುಕಿನ ಬೆವರ ಹನಿಗಳು॥

ದಾಸರಲಿ ಅಶ್ವಿನಿದೇವತೆಗಳಿವರು
ಕೀರ್ತನೆಯ ಕನಕ ಪುರಂದರದಾಸರು
ಹೊಸೆದರು ಹರಿನಾಮ ಕೀರ್ತನೆಗಳ
ಬೆಸೆಯುತಿರುವವು ಮಾನವ ಪ್ರೇಮ

ಕತ್ತಿ ಗುರಾಣಿಗೆ ತತ್ತರಿಸದ ಈ ಜನ 
ತಾತ್ವಿಕ ನೆಲೆಗಟ್ಟಿಗೆ ಬಾಗುತಿದೆ ಈ ದಿನ
ನಿತ್ಯ ಅಧ್ಯಾತ್ಮಿಕ ಅನೂಭೂತಿಯ ಗಾನ
ಸತ್ಯವಾದವು ಸಂಗೀತದ ಆಲಾಪನ

ನೆಲ ಮುಗಿಲು ಸಲುಹಲೊಂದು  
ಜಲ, ತಿಲಬೆರೆತ  ಬೆಳಕನ ಕಿರಣ
ಕುಲಕುಲವಾವುದೆಂದವನೆಮಗೆ 
ಬಲ,ಸಲಹುತಿಹುದು ಸಮಬಲ॥

ನಾನು, ಅಳಿಯಲು ಸಾಗಿತು ಪಯಣ
ಮೇಲಂದವನ ಉಡುಗಿಸಿದ ಜಂಗಾಬಲ 
ಎಲ್ಲರರಿತರು ಮೂರು ಮಳದ ನೆಲ
ಬಲ್ಲವರೆ ಬಲ್ಲರು ಹರಿನಾಮದಾ ಬಲ॥

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...