Saturday, December 23, 2023

* ಪರಶುರಾಮನ ಸನ್ಮಾನ *


ಬದುಕಿನ ಬಂಡಿ ಬಹು ದೂರ ಎಳೆದ 
ಗೆಳೆಯರ ದಂಡು 
ಸೇರಿತ್ತು ಅಲ್ಲಿ 
ಅಂಬಾಭವಾನಿ ಆಶೀರ್ವಾದ ಅದಕ್ಕಿತ್ತು
ಐದು ಹತ್ತು ಅದರ ಮೇಲೈದು ಆಯು, 
ಇರಬಹುದು ಆಜು ಬಾಜು ....
ಇವರ ಚಿಂತನೆಯ ಚಾಲನೆಯ ಸ್ಫೂರ್ತಿಯೆ ಪರುಶುರಾಮ ಪವಾರ ! ..
ಇವರೆ ನಮ್ಮೆಲ್ಲರ ಪವರ್ !  
ಎಲೆ ಮರೆಯ ಕಾಯಿಯಂತೆ ದುಡಿದವರು 
ಕೋಟಿ ದಾನ ಮಾಡಿದರೂ ಪ್ರಚಾರದಿಂದ ದೂರು  
ಕೋಟಿಗಳ ನೀಡಿ ಹಮ್ಮುಗಳು ಮೆಟ್ಟಿ 
ಪ್ರಸನ್ನತೆಯ ಕೋಟೆ ಕಟ್ಟಿ ಕೊಂಡವರು. 
ಇಂದು ಸೂನ್ಯದಿಂದ ಶತಕದ ದಾರಿ ಹಿಡಿದ 
ಸಾಧಕನ ಸನ್ಮಾನ .
ಸೇರಿತ್ತು ಸ್ನೇಹಿತರ ಕೂಟದ ಸತ್ಸಂಗ 
ವೇದಿಕೆಯ ಮೇಲೆ
ರಾಠಿ ಮನೆತನದ ಸಂಪತ್ತು. 
ಕುಮಾರನೆ ಗೌರವಾಧ್ಯಕ್ಷ ಇವತ್ತು 
ಸಮಾಜಮುಖಿ ಕಾರ್ಯಗಳ 
ಚಿಂತನೆಯ ಕಸರತ್ತು.
ದನಿದ ದೇಹಗಳಿಗೆ ಕೆನೆಹಾಲು.  
ಈ ಸ್ನೇಹ ಕೂಟದ ಸಂಸತ್ತು. 
ಹರಿಯುತು ಚಿಂತನೆಗಳ ಸಾಗರ.
ಉಳಿದ ಅವಧಿ ಅತ್ಯಲ್ಪ 
ಮಾಡೋಣ ಸಂಕಲ್ಪ 
ವರ್ಷದಲ್ಲಿ ಎರಡಾದರೂ ಸಾಕು
ಸೇವೆಗೆ ಸಿದ್ದರಾಗೋಣ.
ಪವಾರರ ಮಾತಿಗೆ ಗೆಳೆಯರ 
ಮನಸ್ಸು ಕರಗಿತ್ತು.
ಬಡವರಿಗಾಗಿ
ಬರಡಾಗದಿರಲಿ ಮನಸ್ಸು 
ಕಾಣೋಣ ಕನಸು ...
ಸ್ನೇಹಿತ ಕಳಸಾನ ನಿರೂಪಣೆಯಲ್ಲಿ ಸಾಗಿತ್ತು 
ಇದೋ ಇಂದಿನ ಸಂಸತ್ತು.

Saturday, December 9, 2023

* ಓದಿ ಪಡೆಯುವೆ ಸ್ವರ್ಗದ ದಾರಿ *

ಬರೆಯಬೇಕೆಂದಿರುವೆ 
ಬದುಕು ಬವಣೆಗಳ ಭಾರವಾದ 
ಭಾವಾಲಾಪಗಳ ಸಂತೆ ।
ಬರಹಕ್ಕೇನು ಬರ ?, ಹಾದಿ ಬೀದಿಗಳಲ್ಲಿ 
ಬರೆದು ಗುಡ್ಡೆ ಹಾಕಿಹರು 
ಗುಡ್ಡದಂತಹ ದೊಡ್ಡ ಹೊತ್ತಿಗೆಗಳು ರಾಶಿ। 
ಬರಿ ಕಪಾಟುಗಳದೆ ಕೊರತೆ ! ॥
ಆದರೂ ಬರೆಯುವ ಹುಚ್ಚು, 
ಓದುವವರದೆಲ್ಲಿದೆ ಸರತಿ ?
ನಿತ್ಯ ನರಕಗಳ ಸಾಲು 
ಎತ್ತಿ ತೋರಿಸಿದರೆ ಬದುಕೊಂದು ಜೈಲು.।
ನರಿ ನಾಯಿಗಳ ಗರ್ಜನೆ !
ಹುಲಿಗಳೂ ನಾಚುವವು 
ಬಿಲ ಸೇರುವುದೊಂದೆ ಬಾಕಿ.।
ಇಲಿಗಳಿಗೂ ಬಂತು ಸುಗ್ಗಿಯ ಕಾಲ 
ಚೀಲ ಕತ್ತರಿಸಬೇಕಿಲ್ಲ, ಕತ್ತಲೆಗೆ ಕಾಯಬೇಕಿಲ್ಲ... ಬೆಳಕಿನಲ್ಲೆ ಭತ್ತ ಗೋದಿಯ ರಾಶಿ 
ತಿಂದು ಜೀರ್ಣಿಸಿಕೊಳ್ಳಲಷ್ಟೆ ಬೇಕು ಶಕ್ತಿ .
ನಿತ್ಯ ಬೆತ್ತ ಹಿಡಿದವನಿಗೆ ಬೇಕು ಯುಕ್ತಿ  
ಕಣ್ಣಿದ್ದು ಕುರುಡ, ಕಾಲಿದ್ದು ಹೆಳವ 
ಏಕೆಂದರೆ ಆತನಿಗೊ ಸಿಗಬೇಕಲ್ಲ ಭತ್ಯೆ .
ಬಲಿ ಕೊಡಲು ಕುರಿಗಳಿಗೇನು ಕಡಿಮೆ 
ಬಾಜಾ ಭಜಂತ್ರಿಗಳೊಡನೆ ನಡೆದಿದೆ ದಂಡು॥ 
ಬಹುಪರಾಕ ಹೇಳಿದವನೆ ದ್ವಾರಪಾಲಕ 
ಹಡದಿ ಹಾಸಿದವನೆ ಪಡೆದ ತಾಯಿತಂದೆ 
ಕುಡಿದು ತೂರಾಡುವವ ತಲೆ ಹಿಡಕ 
ಎಗರಾಡಿದರೆ ಆಗಬೇಕಾದೀತು ಕೊಲೆಗಡಕ।
ನಿಲ್ಲುವೆ ನಾ ಎಲೆಮರೆಯ ಕಾಯಂತೆ 
ಗೆಲ್ಲುವೆ ಹಣ್ಣಾಗಿ, ಕಾಲವೆ ಪಾಡಿಗೆ ಬಂದಾಗ।
ಬರದರೇನು ಬರಬಹುದು ಹಾರ ತುರಾಯಿಗಳು,
ಬರಿ ಓದಿ ಪಡೆಯುವೆ ಸ್ವರ್ಗದ ದಾರಿ॥.

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...