ಬದುಕಿನ ಬಂಡಿ ಬಹು ದೂರ ಎಳೆದ
ಗೆಳೆಯರ ದಂಡು
ಸೇರಿತ್ತು ಅಲ್ಲಿ
ಅಂಬಾಭವಾನಿ ಆಶೀರ್ವಾದ ಅದಕ್ಕಿತ್ತು
ಐದು ಹತ್ತು ಅದರ ಮೇಲೈದು ಆಯು,
ಇರಬಹುದು ಆಜು ಬಾಜು ....
ಇವರ ಚಿಂತನೆಯ ಚಾಲನೆಯ ಸ್ಫೂರ್ತಿಯೆ ಪರುಶುರಾಮ ಪವಾರ ! ..
ಇವರೆ ನಮ್ಮೆಲ್ಲರ ಪವರ್ !
ಎಲೆ ಮರೆಯ ಕಾಯಿಯಂತೆ ದುಡಿದವರು
ಕೋಟಿ ದಾನ ಮಾಡಿದರೂ ಪ್ರಚಾರದಿಂದ ದೂರು
ಕೋಟಿಗಳ ನೀಡಿ ಹಮ್ಮುಗಳು ಮೆಟ್ಟಿ
ಪ್ರಸನ್ನತೆಯ ಕೋಟೆ ಕಟ್ಟಿ ಕೊಂಡವರು.
ಇಂದು ಸೂನ್ಯದಿಂದ ಶತಕದ ದಾರಿ ಹಿಡಿದ
ಸಾಧಕನ ಸನ್ಮಾನ .
ಸೇರಿತ್ತು ಸ್ನೇಹಿತರ ಕೂಟದ ಸತ್ಸಂಗ
ವೇದಿಕೆಯ ಮೇಲೆ
ರಾಠಿ ಮನೆತನದ ಸಂಪತ್ತು.
ಕುಮಾರನೆ ಗೌರವಾಧ್ಯಕ್ಷ ಇವತ್ತು
ಸಮಾಜಮುಖಿ ಕಾರ್ಯಗಳ
ಚಿಂತನೆಯ ಕಸರತ್ತು.
ದನಿದ ದೇಹಗಳಿಗೆ ಕೆನೆಹಾಲು.
ಈ ಸ್ನೇಹ ಕೂಟದ ಸಂಸತ್ತು.
ಹರಿಯುತು ಚಿಂತನೆಗಳ ಸಾಗರ.
ಉಳಿದ ಅವಧಿ ಅತ್ಯಲ್ಪ
ಮಾಡೋಣ ಸಂಕಲ್ಪ
ವರ್ಷದಲ್ಲಿ ಎರಡಾದರೂ ಸಾಕು
ಸೇವೆಗೆ ಸಿದ್ದರಾಗೋಣ.
ಪವಾರರ ಮಾತಿಗೆ ಗೆಳೆಯರ
ಮನಸ್ಸು ಕರಗಿತ್ತು.
ಬಡವರಿಗಾಗಿ
ಬರಡಾಗದಿರಲಿ ಮನಸ್ಸು
ಕಾಣೋಣ ಕನಸು ...
ಸ್ನೇಹಿತ ಕಳಸಾನ ನಿರೂಪಣೆಯಲ್ಲಿ ಸಾಗಿತ್ತು
ಇದೋ ಇಂದಿನ ಸಂಸತ್ತು.
No comments:
Post a Comment