ಗುಳೇದಗುಡ್ಡ ತಾಲೂಕಿನ ನಾಲ್ಕನೆಯ
ಕನ್ನಡ ಸಾಹಿತ್ಯ ಸಮ್ಮೇಳನ.
ಸಾಧಕರ ಸಾಧನೆಯ ಶೋಧ
ಯೋಧನಂತೆ ಮಾಡಿದರೆ ಸಾಧ್ಯ
ಹಿಡಿಯಬಹುದು ಕಾಲ .
ಪೆಡೆದಾಗ ಸಿಗುವುದು ಹಾಲು ಜೇನು॥
ನಾಡಿನ ನುಡಿಯ ತಾಲೂಕಿನ ನಾಲ್ಕನೆಯ
ಸಮ್ಮೇಳನ, ನನಗೂ ಅದರಲ್ಲೂಂದು ಸ್ಥಾನ
ಪಾತ್ರ ಯಾವುದಾದರೇನು ?
ಪಡೆದದ್ದೆ ಕಟಗೇರಿ ಕಾಂಚನೇಶ್ವರಿ ಅಮ್ಮನ ದಾನ.।
ಎಲೆಮರೆಯ ಕಾಯಂತೆ ಸಾಹಿತ್ಯದ ಕೃಷಿ
ಸತತ ಅಧ್ಯಯನ ಸಾಗರದಷ್ಟು ಜ್ಞಾನ.
ಮೂರು ಸ್ನಾತಕೋತ್ತರ, ಎರಡು ಪಿ ಹೆಚ್ ಡಿ
ಮೇಲೊಂದು ಕಾನೂನು ಪದವಿಯ ಗರಿ ।
ನೋಡಿ ಕಲಿಯಬೇಕು ಸರ್ವಾಧ್ಯಕ್ಷ
ಡಾ। ಪಿ ಎನ್ ಹುಗ್ಗಿಯವರ ತಾಳ್ಮೆ
ವಯಸ್ಸು ಅರವತ್ನಾಲ್ಕು ಅರದ ಉತ್ಸಾಹ
ಬತ್ತಿದ ಮನಸ್ಸುಗಳಿಗೆ ಉತ್ಸಾಹದ ಚಿಲುಮೆ
ಬಂತು ಪೀಠಕ್ಕೂ ಕಳೆ।
ನನ್ಶ ಪ್ರಶ್ನೆ ಒಂದೇ ! ಸಾಹಿತ್ಯ ಹೃದಯಕ್ಕೆ ಹತ್ತಿರ
ಬಿಡಿಸಿದಿರಿ ಅನುಭವಗಳ ಚಿತ್ತಾರ
ನ್ಯಾಯವಾದ ಹಾಗಲ್ಲ ಮಾಡುತ್ತಿರುವಿರಿ. ಮೆದುಳಿನೊಂದಿಗೆ ಉತ್ತರ ,ಅದು ಹೇಗೆ ?
ಶಾಂತವಾಗಿ ಬಂತು, ಜ್ಞಾನವೃದ್ದರ ಉತ್ತರ
ಸಾಧಕನಿಗೆ ಎಲ್ಲವೂ ಸಾಧ್ಯ .
ಆಗಬೇಕು ಸತತ ಪರಿಶ್ರಮದ ಯಂತ್ರ
No comments:
Post a Comment