Saturday, February 10, 2024

ತಾಲೂಕಿನ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನ

ಗುಳೇದಗುಡ್ಡ ತಾಲೂಕಿನ ನಾಲ್ಕನೆಯ
ಕನ್ನಡ ಸಾಹಿತ್ಯ ಸಮ್ಮೇಳನ.

ಸಾಧಕರ ಸಾಧನೆಯ ಶೋಧ 
ಯೋಧನಂತೆ ಮಾಡಿದರೆ ಸಾಧ್ಯ 
ಹಿಡಿಯಬಹುದು ಕಾಲ .
ಪೆಡೆದಾಗ ಸಿಗುವುದು ಹಾಲು ಜೇನು॥

ನಾಡಿನ ನುಡಿಯ ತಾಲೂಕಿನ ನಾಲ್ಕನೆಯ 
ಸಮ್ಮೇಳನ, ನನಗೂ ಅದರಲ್ಲೂಂದು ಸ್ಥಾನ
ಪಾತ್ರ ಯಾವುದಾದರೇನು ?
ಪಡೆದದ್ದೆ ಕಟಗೇರಿ ಕಾಂಚನೇಶ್ವರಿ ಅಮ್ಮನ ದಾನ.।

ಎಲೆಮರೆಯ ಕಾಯಂತೆ ಸಾಹಿತ್ಯದ ಕೃಷಿ
ಸತತ ಅಧ್ಯಯನ ಸಾಗರದಷ್ಟು ಜ್ಞಾನ.
ಮೂರು ಸ್ನಾತಕೋತ್ತರ, ಎರಡು ಪಿ ಹೆಚ್ ಡಿ
ಮೇಲೊಂದು ಕಾನೂನು ಪದವಿಯ ಗರಿ ।

ನೋಡಿ ಕಲಿಯಬೇಕು ಸರ್ವಾಧ್ಯಕ್ಷ
ಡಾ। ಪಿ ಎನ್ ಹುಗ್ಗಿಯವರ ತಾಳ್ಮೆ 
ವಯಸ್ಸು ಅರವತ್ನಾಲ್ಕು ಅರದ ಉತ್ಸಾಹ 
ಬತ್ತಿದ ಮನಸ್ಸುಗಳಿಗೆ  ಉತ್ಸಾಹದ ಚಿಲುಮೆ 
ಬಂತು ಪೀಠಕ್ಕೂ ಕಳೆ।

ನನ್ಶ ಪ್ರಶ್ನೆ ಒಂದೇ ! ಸಾಹಿತ್ಯ ಹೃದಯಕ್ಕೆ ಹತ್ತಿರ
ಬಿಡಿಸಿದಿರಿ ಅನುಭವಗಳ ಚಿತ್ತಾರ
ನ್ಯಾಯವಾದ ಹಾಗಲ್ಲ ಮಾಡುತ್ತಿರುವಿರಿ.                     ಮೆದುಳಿನೊಂದಿಗೆ ಉತ್ತರ ,ಅದು ಹೇಗೆ ?

ಶಾಂತವಾಗಿ ಬಂತು, ಜ್ಞಾನವೃದ್ದರ ಉತ್ತರ
ಸಾಧಕನಿಗೆ ಎಲ್ಲವೂ ಸಾಧ್ಯ .
ಆಗಬೇಕು ಸತತ ಪರಿಶ್ರಮದ ಯಂತ್ರ 
ಇರಲಿ ಛಲವೊಂದೆ ಮೂಲ ಮಂತ್ರ ।

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...