ರಜೆ ಇರುವುದೆ ಮಜಾ ಮಾಡಲು ಎನ್ನುವ ಕಾಲಘಟ್ಟದಿಂದ, ರಜಾ ಇರುವುದು ಜ್ಞಾನವೃದ್ಧಿಗೆ, ಆರೋಗ್ಯ bufವೃದ್ಧಿಗೆ, ಕುಟುಂಬದ ಸಂಬಂಧದ ವೃದ್ದಿಗೆc ಎನ್ನುವ ಕಾಲಘಟ್ಟಕ್ಕೆ ಬಂದು ನಿಂತಿದ್ದೇವೆ.ಆದರೆ ಇನ್ನೂ vcvvyki
by iuವ ಕಾಲಘಟ್ಟದ ಆಜುಬಾಜುನಲ್ಲಿರಬಹುದೇನೋ ಅದು ಅವರವರ ವೈಯಕ್ತಿಕ ವಿಚಾರಕ್ಕೆ ಬಿಟ್ಟ ವಿಚಾರ ಬಿಡಿ. ಈ ಪೀಠಿಕೆ ಹಾಕಿದ ಉದ್ದೇಶವೇನು ಅಂದರೆ ಇವತ್ತು ನನಗೆ ನನ್ನ ಬೇಸಿಗೆ ರಜೆಯನ್ನು ಸದುಪಯೋಗ ಪಡಿಸಿಚೊಳ್ಳುವ ಅವಕಾಶ ಸಿಕ್ಕಿತು. ಅದನ್ನು ಈ ಸಮೂಹ ಮಾಧ್ಯಮದ ಮೂಲಕ ಆತ್ಮೀಯರಲ್ಲಿ ಹಂಚಿಕೊಳ್ಳಬಯಸುತ್ತೇನೆ.ನಮಗೆ ನೆಮ್ಮದಿ ಸಿಗಲು ಇಬ್ಬರು ಜೊತೆ ನಾವು ಕೆಲವೊಂದಿಷ್ಟು ಅವಧಿಯನ್ನು ಕಳೆಯಬೇಕಂತೆ yt
m ವರ್ಷದ ಒಳಗಿನ ಮಕ್ಕಳು ಮತ್ತು ಅರವತ್ತು ವರ್ಷದ ನಂತರದ ವೃದ್ದರ ಜೊತೆ ಬೆರೆಯಬೇಕಂತೆ ಇಂದು ಎರಡನೆಯವರ ಜೊತೆ ಬೆರೆಯಲು ಅವಕಾಶ ಸಿಕ್ಕಿತು ಅದು ಹೇಗೆಂದರೆ ನನ್ನ ಆತ್ಮೀಯ ಪ್ರಾಚಾರ್ಯರು ನಂತರ ಅವರು ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪನರ್ದೇಶಕರಾದ ಶ್ರೀ ರಮೇಶ ದಡ್ಡಿಯವರ ಮಕ್ಕಳ ಮದುವೆಯ ಕಾರ್ಡ್ ನೀಡಲು ನನಗಿಂತ ಹತ್ತು ವರ್ಷಗಳಷ್ಟು ಹಿರಿಯರಾದ ಈ ಶ್ರೀ ಮಹಾದೇವ ಜಗತಾಪರ ಸರ್ ಮನೆಗೆ ಹೋಗುವಂತಾಯಿತು. ಅವರ ನಮ್ಮ ಬಾಂಧವ್ಯ ಇಂದು ನಿನ್ನೆಯದಲ್ಲ ನನ್ನ ವಿದ್ಯಾರ್ಥಿ ದೆಶೆಯಿಂದನೂ ಅವರು ನನಗೆ ಆಪ್ತರು ಈ ಪೂರ್ವದಲ್ಲಿ ಅದರೊಂದಿಗೆ ಗಂಜಿಕೆರೆಯಲ್ಲಿ ನೀರಿದ್ದಾಗ ಈಜಾಡಿ ಮಜಾದೊಂದಿಗೆ ಆರೋಗ್ಯದ ವೃದ್ಧಿಯನ್ನು ಮಾಡಿಕೊಂಡಿದ್ದು ಉಂಟು .ಅವರು ಚಿತ್ರಕಲಾ ಶಿಕ್ಷಕರಲ್ಲದೆ ಯೋಗಪಟುಗಳು ಮತ್ತು ನಿಸರ್ಗದ ಆರಾಧಕರು ಹೌದು ಹೀಗಾಗಿ ವಯಸ್ಸಿನಲ್ಲಿ ಹಿರಿಯರಾದರೂ ಗೆಳೆತನದ ಬಾಂಧವ್ಯ ಹಾಗೆ ಮುಂದುವರಿದಿದೆ ನಿನ್ನೆ ದಿವಸ ಅವರ ಮನೆಗೆ ಹೋದಾಗ.ಮತ್ತೆ ಹಳೆ ದಿನಗಳ ಮೆಲಕು ಹಾಕಿದೆವು. ಒಂದು ಕಾಲದಲ್ಲಿ ಮಿನಿ ಸಮುದ್ರದಂತೆ ಕಾಣುತ್ತಿದ್ದ ಗಂಜಿಕೆರೆ ಇಂದು ಹುಡುಗರು ಆಡುವ ಕ್ರಿಕೆಟ್ ಮೈದಾನವಾಗಿದೆ. ಏಕೆಂದರೆ ಮಳೆಗಳು ಮನುಷ್ಯರೊಂದಿಗೆ ಮುನಿಸಿಕೊಂಡಿರುವಂತೆ ಕಾಣುತ್ತಿದೆ. ಹೀಗಾಗಿ ಸಂತೃಪ್ತಿಯಿಂದ ಸುರಿಯುತ್ತಿಲ್ಲ ,ಬರಗಾಲಗಳು ಬೀಗರಾಗಿದ್ದಾರೆ ಆವಾಗ ಆವಾಗ ಬಂದು ನಮ್ಮನ್ನು ಹಿಂಡಿ ಹಿಪ್ಪಿಮಾಡಿ ಹೋಗುತ್ತಿವೆ. ಇರಲಿ ಮಾಡುವುದಿನ್ನೇನು ನೀರಿನಲ್ಲಿ ಈಜಾಡಬೇಕಲ್ಲ ಅದಕ್ಕಾಗಿ ಅಂದು ನಾವು ಹುಡುಕಿದ ದಾರಿಯೇ ಮಹಾಕೂಟ ಪಯಣ. ಮಹಾಕೂಟವೆಂದರೆ ಅದು ಬರಿ ಈಜು ಕೊಳವಲ್ಲ ಅದು ನಮ್ಮ ಸಂಸ್ಕೃತಿಯ ಶಿಕರಪ್ರಾಯದ ಹೆಗ್ಗುರುತು. ಅಲ್ಲಿ ನಮಗೆ ಐತಿಹಾಸಿಕ ಕುರುಹು ಉಂಟು, ಜ್ಞಾನದ ಆಳವುಂಟು ,ನಿಸರ್ಗದ ಮಡಿಲಲ್ಲಿ ನಮ್ಮ ಹಿರಿಯರು ನೆಲೆನಿಂತು ಹೋದ ಆದರ್ಶ ಉಂಟು. ಆರು ಮತ್ತು ಏಳನೇ ಶತಮಾನದಲ್ಲಿ ಇಡಿ ಭಾರತ ದೇಶದ ಕೇಂದ್ರವಾಗಿ ಬೆಳೆದ ಚಾಲುಕ್ಯರ ನಾಡಿನ ಸುಂದರವಾದ ಪ್ರಕೃತಿಯ ಮಡಿಲು gbgbommhm
ಈ ಮmಹಾಕೂಟ. ಇಲ್ಲಿನ ಇತಿಹಾಸವನ್ನು ಒಮ್ಮೆ ಕೆದಕಿದರೆ ಕನ್ನಡಿಗರ ಹೆಮ್ಮೆ ಇಮ್ಮಡಿಯಾಗುತ್ತದೆ ಕ್ರಿ ಶ 602ರಲ್ಲಿ ಚಾಳುಕ್ಯರ ಮಂಗಳೇಶನು ತನ್ನ ಯುದ್ಧ-ವಿಜಯಗಳ ನೆನಪಿಗಾಗಿ ಇಲ್ಲಿ ಅನೇಕ ಶಿವಲಿಂಗಗಳ ದೇವಾಲಯಗಳನ್ನು ಕಟ್ಟಿಸಿದ್ದಾನೆ ಎನ್ನುವ ಮಾಹಿತಿ ಸಿಗುತ್ತದೆ. ಮಹಾಕೂಟೇಶ್ವರ ದೇವಾಲಯದ ಮುಂದೆ ಚಾಳುಕ್ಯರಾಜ ಮಂಗಲೇಶನ ಶಾಸನ ಶಿಲಾಸ್ತಂಭವಿತ್ತು. ಇದು ಈಗ ಬಿಜಾಪುರದಲ್ಲಿರುವ ಪುರಾತತ್ವ ವಸ್ತು ಸಂಗ್ರಹಾಲಯದಲ್ಲಿದೆ ಎಂದು ಹೇಳಲಾಗಿದೆ. ಈ ಶಾಸನವಲ್ಲದೆ ಮಹಾಕೂಟೇಶ್ವರನಿಗೆ ದೇವಾಲಯದ ಕಂಬದ ಮೇಲೆ ವಿಜಯಾದಿತ್ಯನ ಪ್ರಾಣವಲ್ಲಭೆಯಾಗಿದ್ದ ವಿನಾಪೋಟಿಯ ಶಾಸನವೂ ಇದೆ. ಇಲ್ಲಿರುವ ಹಲವು ಶೈವದೇವಾಲಯಗಳಿಂದ ಇದೊಂದು ಪ್ರಸಿದ್ಧ ಶೈವ ಧರ್ಮದ ಕೇಂದ್ರವಾಗಿದ್ದಿರಬೇಕೆಂದು ಊಹಿಸಿದಲಾಗಿದೆ.ಮಹಾಕೂಟೇಶ್ವರ ಹಾಗೂ ಮಲ್ಲಿಕಾರ್ಜುನ ದೇವರ ದೇವಾಲಯಗಳನ್ನು ಒಂದೇ ಮಾದರಿಯಲ್ಲಿ ನಿರ್ಮಿಸಲಾಗಿದೆ. ಬೆಟ್ಟಗಳ ಸಾಲಿನ ನಡುವೆ, ಹಸಿರುವನ ರಾಶಿಯ ನಡುವೆ ಕಂಗೊಳಿಸುವ ಈ ದೇಗುಲಗಳ ರಮಣೀಯವಾಗಿ ಕಾಣುತ್ತವೆ. ದೇವಾಲಯದ ಸುತ್ತ ಅಗಸ್ತ್ತ್ಯೆಶ್ವರ, ವೀರಭದ್ರೇಶ್ವರ ಮೊದಲಾದ ಹಲವಾರು ಚಿಕ್ಕ ಗುಡಿಗಳಿವೆ. ಪ್ರಮುಖ ದೇಗುಲದ ಹೊರಬಿತ್ತಿಯ ಮೇಲೆ ವಿಷ್ಣು, ಸ್ಥಾನಕ ಬ್ರಹ್ಮ, ಅರ್ಧ ನಾರೀಶ್ವರ, ಪರಶುಧರ ಶಿವ, ತ್ರಿಶೂಲಧಾರಿ ಶಿವ ಮೊದಲಾದ ಕೆತ್ತನೆ ಇದೆ. ಕೆಳ ಪಟ್ಟಿಕೆಗಳಲ್ಲಿ ಸುಂದರ ಶಿಲ್ಪಕಲಾ ಕೆತ್ತನೆ ಇದೆ. ಇಲ್ಲಿ ಸೂಕ್ಷ್ಮ ಕೆತ್ತನೆ ಇಲ್ಲದಿದ್ದರೂ ಮನೋಹರವಾದ ಶಿಲ್ಪಕಲಾ ಸೌಂದರ್ಯವಿದೆ.ಬಾದಾಮಿ ಚಾಲುಕ್ಯರ ನಾಡಿನಲ್ಲಿ ಶಿಲೆಗಳೂ ಸಂಗೀತವನ್ನು ಹಾಡುತ್ತವೆ. ವಿಶೇಷ ವಾಸ್ತು ಶೈಲಿಯ ಸುಂದರ ದೇವಾಲಯಗಳು ಆಸ್ತಿಕರಿಗೆ ಭಕ್ತಿಭಾವ ಮೂಡಿಸಿದರೆ, ನಾಸ್ತಿಕರನ್ನು ತಮ್ಮ ಕಲಾಶ್ರೀಮಂತಿಕೆಯಿಂದ ಕೈಬೀಸಿ ಕರೆಯುತ್ತವೆ. ಮಹಾಕೂಟೇಶ್ವರ ಮತ್ತು ಮಲ್ಲಿಕಾರ್ಜುನ ದೇವಾಲಯಗಳ ಮಧ್ಯೆ. ಒಂದು ಪುಷ್ಕರಣಿ ಮತ್ತು ಅದರ ಸುತ್ತಲೂ ಸಣ್ಣ ಸಣ್ಣ ದೇವಾಲಯಗಳಿವೆ ಹೀಗಾಗಿ ಈ ಪುಣ್ಯಸ್ಥಳಕ್ಕೆ ಮಹಾಕೂಟ ಎಂದು ಹೆಸರು ಬಂದಿರಬಹುದು. ಶಿವಭಕ್ತರಿಗೆ ಇಂದಿಗೂ ಇದೊಂದು ಪುಣ್ಯಸ್ಥಳವಾಗಿದ್ದು 'ದಕ್ಷಿಣಕಾಶಿ' ಎಂದೇ ಪ್ರಸಿದ್ಧವಾಗಿದೆ. ಇಂತಹ ಇತಿಹಾಸ ಪ್ರಸಿದ್ಧ ದೇವಾಲಯಗಳ ಸಂಗಮದಲ್ಲಿರುವ ಪುಷ್ಕರಿಣಿಯಲ್ಲಿ ಈಜುವುದು ಎಂದರೆ ಅದು ಸ್ವರ್ಗದ ಬಾಗಿಲಿಗೆ ಹೋಗಿಬಂದಂತೆ .ಅಂದು ನಾವು ಮಹಾಕೂಟ ತಲುಪಿದಾಗ ಸು. 7.30 ಗಂಟೆಯಾಗಿರಬಹುದೇನೊ, ಮುಕ್ಕಾಲು ಗಂಟೆ ನೀರನಲ್ಲಿ ಮನಸ್ಸು ತೃಪ್ತಿಯಾಗುವವರೆಗೆ ಈಜಾಡಿದೆವು ಏಕೆಂದರೆ ಜನಜಂಗುಳಿ ಇನ್ನೂ ಸೇರಿರಲಿಲ್ಲ.ಫಲಶ್ರುತಿಯಾಗಿ ನೀರು ಎಷ್ಟು ಶುಬ್ರವಾಗಿತ್ತೆಂದೆರ ತಳದ ಸಣ್ಣಪುಟ್ಟ ಕಣಗಳು ಕಾಣುತ್ತಿದ್ದವು ಆ ಕಾರಣಕ್ಕಾಗಿ ಹಿಂದಿನ ದಿನ ಒಬ್ಬರು ಉಂಗುರವನ್ನು ಕಳೆದುಕೊಂಡಿದ್ದನ್ನು ಹುಡುಕಲು ನಮಗಿಂತ ಮೊದಲು ಬಂದು ಹಾಜರಾಗಿದ್ದರು. ಅವರು ಹುಡುಕುತ್ತಿದ್ದರೆ ನಾನು ಮಹದೇವ್ ಜಗತಾಪ ಸರ್ ಕಲಿಸಿದ ಲಗಿಮಾ ಯೋಗದಲ್ಲಿ ಮಗ್ನನಾಗಿದ್ದೆ .ಎಂತಹ ಆನಂದ ,ನಮ್ಮದೆ ಪಕ್ಕದಲ್ಲಿರುವ ಸ್ವರ್ಗ ಬಿಟ್ಟು ಬಹುದೂರ ಯೋಚಿnynnhಸುmmj.
muimkmjhnm says njವವರೊಮ್ಮೆ ಪುಷ್ಕರಿಣಿಯಲ್ಲಿ ಯಾಕೆ ಪಾವನವಾಗಬಾರದು ಎನ್ನುವುದು ನನ್ನ ಪ್ರಶ್ನೆ. ಸರಿ gmhyntಮುಕ್ಕಾಲು ಗಂಟೆ ಈಜಾಡಿದ ನಮಗೆ ಹೊಟ್ಟೆ ತಾಳಹಾಕಹhhjk.ತ್ತಿತು ನಾವು ಸೇವು ಕಾರ ಉಂಡಿ ಬಾಳಿ ಹಣ್ಣು ತಯಾರಿಯಲ್ಲೇನೋ ಹೋಗಿದ್ದೆವು ಆದರೆ ತಾಳಕ್ಕೆ ಅವು ಬೆಸೂರ ಆಗಬಹುದೆಂದು ಬಿಸಿ ಬಿಸಿ ಉಪ್ಪಿಟ್ಟು ಹೊಟ್ಟೆಗಿಳಿಸಿ ಗಟ್ಟಿಯಾಗಿ ಮನೆ ಸೇರಿದೆವು.
ಮಾಹಿತಿ ಕೃಪೆ ಗೂಗಲ್
No comments:
Post a Comment