ಯುಗಾದಿ,ಯುಗದ ಸಾಲಿನಾದಿ
ಬಂತು ವಸಂತ ಮಾಸ ,
ತಂತು ಸಂಭ್ರಮದ ಸಂತಸದ
ಚೈತನ್ಯದ ಚೈತ್ರದ ವನ.॥
ಬಿಸಿಲೇರಿದ ಹೊಂಗೆಯ ಹಸಿರೆಲೆಯೊಳ್
ಹೊಸ ಮಾಮರದ ಹೊವು ಬನದೊಳ್
ಕೋಗಿಲೆಗಳ ಗಾನ.॥
ದುಂಬಿಗಳ ಜೇಂಕಾರಕೆ
ಅಂಬರದಾ ಗೊಂಬೆಗಳ
ಚಿತ್ರಗಾನ।
ಒಮ್ಮೆ ಸೈನಿಕರು ಇನ್ನೂಮ್ಮೆ ದಿಕ್ಪಾಲಕರು
ಕರಗಿದರೆ ಕಾಣುವನು
ಕರಿಮುಖದ ವದನ॥
ಬಿರು ಬಿಸಿಲು, ಬೇವಿನ ಮರಕೆ ಬಾಗಿ
ಬನವೆಲ್ಲ ತಂಪಾಗಿ ।
ಉರಿವ ದಿನಗಳು ಸರಿದು
ವರುಣನಾಗಮನ ಸಾರುವದು
ಈ ದಿನ।
ಹೊಸ ವರುಷದ ಹರುಷ
ಮನೆ ಮನೆಗಳು ತುಂಬುವುದು
ಈ ದಿನ॥
ಧರಣಿಯ ಮೇಲ್ ಹರಣಿಯಂತೆ
ಮರವೆಲ್ಲ ಚಿಗುರುವುದು ।
ರಂಗಭೂಮಿ ನಸುನಾಚುವಂತೆ
ಅರಳುವುದು ಜಗವೆಲ್ಲ
ಈ ದಿನ ॥
ಸಿಹಿ ಕಹಿಯ ಸಮರಸದ
ಸಂಭ್ರಮದ ಸಿಂಗಾರದ
ಈ ದಿನ ।
ಬೇವು ಸಹಜ ಬೆಲ್ಲ ಬಿತ್ತುವುದು
ಅತಿ ಸಹಜ ।
ಪ್ರೀತಿಯಿಂದ ಬಿರಕು ತುಂಬಿ,
ಬಿಸಿಲು ಮೀರಿ ಹಸಿರಿನೆಡೆಗೆ
ಹೊಸ ಬಾಳು ಕಟ್ಟಲು
ಬೆರೆಯುವರು ಜನ ಈ ದಿನ॥
No comments:
Post a Comment