Tuesday, May 28, 2024

ತನಗ

ಸತ್ತು ಬಿಡಬಹುದು
ಸತ್ಯ ಜಯಸಿದರೆ !
ಹೊತ್ತು ಬರುವುದೇನು
ಸುಳ್ಳನ್ನು ಮುರಿಯಲು 

🖋  ಬಸನಗೌಡ ಗೌಡರ

Saturday, May 25, 2024

""ಉತ್ತಮ ಆರಂಭ, ಅರ್ಧ ಮುಗಿದಂತೆ "

"ಉತ್ತಮ ಆರಂಭ, ಅರ್ಧ ಮುಗಿದಂತೆ "    

   ಶಾಲೆ ಕಾಲೇಜುಗಳು ಇನ್ನೇನು ಪ್ರಾರಂಭವಾಗĺಲವೆ ದಿನಗಳು ಬಾಕಿ ಇವೆ .ಈ ಸಂದರ್ಭದಲ್ಲಿ ಅವರವರದೆ ಆದ ದಾವಂತದಲ್ಲಿ ಎಲ್ಲರೂ, ಅವರೆ ಮಕ್ಕಳು ಪಾಲಕರು ಶಿಕ್ಷಕರು .ಈ ಮೂರು ಜನರ ಕರ್ತವ್ಯ ಬೇರೆ ಬೇರೆಯಾದರೂ ಅಂತಿವಾಗಿ ಅವರ ಗುರಿ ಒಂದೆ ಉತ್ತಮವಾದ ಶಿಕ್ಷಣ ನೀಡಬೇಕು,ಇಲ್ಲವೇ ಪಡೆಯಬೇಕು ! ಆರಂಭದಲ್ಲಿ  
ಎಡವಿದರೆ ಅಂತಿಮದಲ್ಲಿ ಪಡೆಯುವುದು ಬರಿ ಕಡೆಗಾಳು ಮಾತ್ರ. ಹಿಂದಿನ ಹಿರಿಯರು ಒಂದು ಮಾತು ಹೇಳಿದ್ದು ನೆನಪಾಯಿತು. ಬಿತ್ತುವಾಗ ಹಳವಾರ ಆದರೆ ಕೊಯ್ಯುವಾಗ ಹಳವಾರು ಅಂತ ,ಅಂದರೇನು? ಆರಂಭದಲ್ಲಿ ಶ್ರಮ ಮತ್ತು ಯೋಜನೆ ಸಮರ್ಪಕವಾದರೆ ಚನ್ನಾಗಿಯೇ ಪಸಲು ತಗೆಯಬಹುದು ಇಲ್ಲದೆ ಹೋದರೆ ನಿರೀಕ್ಷಿಸಿದ ಫಸಲು ಕಷ್ಟಸಾಧ್ಯ ನಮ್ಮ ಕಾಲೇಜಿನಲ್ಲಿ ಒಬ್ಬ ಪಾಲಕರು ತಮ್ಮ ಮಗನ ಪ್ರವೇಶಕ್ಕೆ ಆಗಮಿಸಿದ್ದರು ಅವರು ಬಂದದ್ದು 40 ರಿಂದ 50 ಕಿ ಮೀ ದೂರದಿಂದ .ಇಷ್ಟು ದೂರದಿಂದ ತಮ್ಮ ಮಗುವಿನ ಪ್ರವೇಶ ಮಾಡಿಸುವುದು ಏಕೆ ಎಂದು ಪ್ರಶ್ನಿಸಿದರೆ ಅವರ ಉತ್ತರ ,ನಮ್ಮ ಹತ್ತಿರ ಇದ್ದರೆ ಮಾತು ಕೇಳುದಿಲ್ಲರಿ ದೂರ ಆದರೆ ಸರಿಯಾಗಿ ಇರುತ್ತಾರೆ ಎಂದು. ಜವಾಬ್ದಾರಿಯಿಂದ ದೂರಸರಿಯಲು ಹೇಳಿದಂತಿತ್ತು ಅವರ ಮಾತು. ಕೇವಲ ಪ್ರವೇಶ ಮಾಡಿಸಿ ಮಕ್ಕಳನ್ನು ದೂರ ಇಟ್ಟರೆ ಸಾಲದು ಮಕ್ಕಳ ಚಟುವಟಿಕೆ ನೋಡಬೇಕಾಗುತ್ತದೆ ಆ ಸಂಸ್ಥೆಯು ನಮ್ಮ ಮಗುವಿಗೆ ಎಷ್ಟು ಸೂಕ್ತ ಮಗುವಿನ ಬೇಕು ಬೇಡಗಳೇನು ಎನ್ನುವುದು ಅಷ್ಟೇ ಮುಖ್ಯವಾಗುತ್ತದೆ. ಈ ಮಾತು ಶಿಕ್ಷಣವಂತ ಪಾಲಕರಿಗೆ ಅನ್ವಯವಾಗಲಿಕ್ಕಿಲ್ಲ ಆದರೆ ಅದೆಷ್ಟೋ ಬದುಕಿನಲ್ಲಿ ಪಡಿಪಾಟೀಲು ಪಡುತ್ತಿರುವ ಪಾಲಕರಿಗೆ ಇದು ತುಂಬಾ ಅನ್ವಯಿಸುತ್ತದೆ.ನಾನೊಬ್ಬ ಸರಕಾರಿ ಪ.ಪೂ.ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿರುವದರಿಂದ ಬಹುತೇಕ ಕಲಾ ವಿಭಾಗದಲ್ಲಿ ಕಲಿಸಬಂದಿರುವ ಪಾಲಕರ ಕಷ್ಟದ ಸನ್ನಿವೇಶಗಳನ್ನು ಇಲ್ಲಿ ಬರೆಯಬೇಕಿನ್ನಿಸಿತು ಹಾಗಾಗಿ ಇಲ್ಲಿ ಬರೆಯುತ್ತಿದ್ದೇನೆ.ತಾವು ಕರೆದುಕೊಂಡು ಬಂದ ಮಗು ಕಡಿಮೆ ಅಂಕ ತೆಗೆದಿರಬಹುದು ಹಾಗಂತ ಆತ ದಡ್ಡನೆಂಬ ತೀರ್ಮಾನಕ್ಕೆ ಬರುವುದು ತಪ್ಪಾಗುತ್ತದೆ ಇನ್ನು ಮಂದೆಯೊ ಆತ ಕಡಿಮೆ ಅಂಕ ತೆಗೆಯುತ್ತಾನೆ ಎನ್ನುವದು ತಪ್ಪಾಗುತ್ತದೆ.ಎಸ್ ಎಸ್ ಎಲ್ ಸಿ ಯಲ್ಲಿ ನಪಾಸಾದ ವ್ಯಕ್ತಿ ಜಿಲ್ಲಾ ಶಿಕ್ಷಣಾಧಿಕಾರಯಾದದ್ದು ನೋಡಿದ್ದೇನೆ. ಎಸ್ ಎಸ್ ಎಲ್ ಸಿ ಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ವಿಜ್ಞಾನ ವಿಷಯದಲ್ಲಿ ಪದವಿ ಪಡೆದು ಮಾರವಾಡಿಗರ ಅಂಗಡಿಯಲ್ಲಿ ಗುಮಾಸ್ತನಾಗಿದ್ದು ನೋಡಿದ್ದೀನಿ. ಇದರ ಅರ್ಥ ಮಾರವಾಡಿ ಅಂಗಡಿಯಲ್ಲಿ ಗುಮಾಸ್ತನಾಗುವುದು ಕಡಿಮೆ ಎಂದರ್ಥವಲ್ಲ. ಆಂದರೆ ನಾವು  ಆಯ್ಕೆ ಮಾಡಿಕೊಳ್ಳಬೇಕಾದ ಕಾಲೇಜು, ಅಲ್ಲಿರುವ ಸೌಲಭ್ಯ ಮತ್ತು ಬೋಧನೆ ಅದು ನಮಗೆ ಎಷ್ಟರ ಮಟ್ಟಿಗೆ ಅನುಕೂಲವಾಗುತ್ತದೆ ಎನ್ನುವದನ್ನು ಗಮನಿಸಬೇಕಾಗುತ್ತದೆ.ನಮ್ಮ ಮಗುವನ್ನು ನಮಗಿಂತ ಹೆಚ್ಚು ಪ್ರೀತಿಸುವವರು ಇರಲಾರರು. ಮಗು ಹತ್ತನೆಯ ವರ್ಗ ದಾಟಿದ ಮೇಲೆ ಆತ ಮನೋ ದೈಹಿಕವಾಗಿ ಬಹಳಷ್ಟು ಬದಲಾಗುತ್ತಾನೆ ಆತನ ಆಶೆ ಆಕಾಂಕ್ಷೆಗಳು ಬಹಳಷ್ಟು ಬದಲಾಗುತ್ತವೆ ಅಂತಹ ಸಂದರ್ಭದಲ್ಲಿ ನಮ್ಮ ಒಂದು ಕಣ್ಣುಸದಾ ಅವರ ಕಡೆಗೆ ಇರಬೇಕಾತ್ತದೆ ಇವತ್ತಿನ ದಿನದಲ್ಲಿ ಮೊದಲಿನಕ್ಕಿಂತ ಹೆಚ್ಚು ಗಮನಿಸಬೇಕಾಗಿದೆ. ಕಾರಣವೆಂದರೆ ಮಾಧ್ಯಮಗಳು ಮಕ್ಕಳನ್ನು ಗುರುಗಳಿಗಿಂತ ವೇಗವಾಗಿ ಸೆಳೆದುಕೂಳ್ಳುತ್ತಿವೆ.ಇನ್ನು ಗುರುಗಳು ಕೂಡಾ  ಬದಲಾಗಬೇಕಾಗಿದೆ ಜೂನ್ ಒಂದರಿಂದ ಕಾಲೇಜುಗಳು ಪ್ರಾರಂಭವಾಗುತ್ತಿವೆ. ವಿವಿಧ ಪರಿಸರ, ಸನ್ನಿವೇಶಗಳಿಂದ ದಾಟಿ ಬರುವ ಮಕ್ಕಳು ಏನಾದರೂ ಹೊಸದನ್ನು ನಮ್ಮಿಂದಿ ಹುಡಕ ಬಯಿಸುತ್ತಾರೆ ಎನ್ನುವುದು ನಮ್ಮ ಗಮನದಲ್ಲಿದೆ ,ಅದಕ್ಕೆ ತಕ್ಕಂತೆ ನಮ್ಮ ಬೋಧನೆ, ಅದಕ್ಕಿಂತಲೂ ನಮ್ಮ  ಇರುವಿಕೆ ಮಗುವಿನ ಮೇಲೆ ಅತೀವವಾದ ಪರಿಣಾಮ ಬೀರುತ್ತದೆ ಎನ್ನುವುದು ಗಮನದಲ್ಲಿದೆ.ಇಂದು ಏನೆಲ್ಲಾ ಆಧುನಿಕ ಪರಿಕರಗಳು , ಬೋಧನೋಪಕರಣಗಳು ಬಂದಿರಬಹುದು ಅವುಗಳಾವವು ನಮ್ಮ ಮಟ್ಟಕ್ಕೆ ಏರಲಾರವು .ಆದರೆ ಅವೆಲ್ಲವುಗಳನ್ನು ನಮ್ಮ ಚಾಕಚಕ್ಯತೆಯಿಂದ ಬಳಸಿಕೊಂಡು ನಾವು ಮಗುವನ್ನು ತಲುಪದಿದ್ದರೆ ಹೇಗೆ? ಅದಕ್ಕಾಗಿ ವರ್ಷದ ಯೋಜನೆಯನ್ನು ರೂಪಿಸಿ ನಾವು ಪಾಲಕರು ಮುನ್ನಡೆಯೋಣ .
ನಮಸ್ಕಾರಗಳು🙏🙏

Saturday, May 4, 2024

ಲೇಟಾದ ಸತ್ಯ

"ಅನುಭವ ಜಾಸ್ತಿ ಆದಂತೆ 
ಪ್ರಾಣಿಗಳ ಮೇಲೆ ಪ್ರೀತಿ 
ಜಾಸ್ತಿ ಆಗುತ್ತಾ ಹೋಗುತ್ತದೆ ,
ಪ್ರಾಣದ ಮೇಲೆ ಭಯ 
ಕಡಿಮೆ ಆಗುತ್ತಾ ಹೋಗುತ್ತದೆ" 

               🖋 ಲೇಟಾದ ಸತ್ಯ.

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...